Asianet Suvarna News Asianet Suvarna News

ಉತ್ತರ ಕನ್ನಡ: ಕೊರೋನಾ ಸೋಂಕಿತರ ನಿರ್ಲಕ್ಷ್ಯಕ್ಕೆ ಕೊನೆ ಎಂದು..?

ಕೊರೋನಾ ಸೋಂಕಿತನ ವಿಚಾರದಲ್ಲಿ ಜಿಲ್ಲಾಡಳಿತ ಅಸಡ್ಡೆ| ಕೋವಿಡ್‌ ರೋಗಿಗಳನ್ನ ಸೂಕ್ತವಾಗಿ ನೋಡಿಕೊಳ್ಳದ ಆರೊಗ್ಯ ಇಲಾಖೆ ಸಿಬ್ಬಂದಿ| ಕೊರೋನಾದಿಂದ ಗುಣಮುಖರಾದ ವೃದ್ಧನೊಬ್ಬನನ್ನ ಬಸ್‌ ಬಿಲ್ದಾಣದಲ್ಲಿಯೇ ಬಿಟ್ಟು ಹೋದ ಆರೋಗ್ಯ ಇಲಾಖೆಯ ಸಿಬ್ಬಂದಿ|

ಕಾರವಾರ(ಜು.30): ಕೊರೋನಾ ಸೋಂಕಿತನ ವಿಚಾರದಲ್ಲಿ ಜಿಲ್ಲಾಡಳಿತ ಅಸಡ್ಡೆ ತೋರಿದ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳನ್ನ ಆರೊಗ್ಯ ಇಲಾಖೆ ಸಿಬ್ಬಂದಿ ಸೂಕ್ತವಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಲಾಗಿದೆ. 

ಖಾಸಗಿ ಆಸ್ಪತ್ರೆಗಳ ಮೇಲೆ ಚಾಟಿ ಬೀಸಿದ ಅಧಿಕಾರಿಗಳು..!

ಇಲ್ಲಿ ಪದೇ ಪದೇ ಇಂತಹ ಆರೋಪಗಳು ಕೇಳಿ ಬರುತ್ತಿವೆ.ಆದರೂ ಕೂಡ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಕೊರೋನಾದಿಂದ ಗುಣಮುಖರಾದ ವೃದ್ಧನೊಬ್ಬನನ್ನ ಆರೋಗ್ಯ ಇಲಾಖೆಯ ಸಿಬ್ಬಂದಿ ಬಸ್‌ ಬಿಲ್ದಾಣದಲ್ಲಿಯೇ ಬಿಟ್ಟು ಹೋಗಿದ್ದಾರೆ.