Asianet Suvarna News Asianet Suvarna News

ಸರ್ಕಾರದಿಂದಲೇ ಸೇನಾನಿ ಸಂಗೊಳ್ಳಿ ರಾಯಣ್ಣ ಜನ್ಮದಿನ ಆಚರಣೆ

* ಕರ್ನಾಟಕ ಸರ್ಕಾರದಿಂದ ಸಂಗೊಳ್ಳಿ ರಾಯಣ್ಣರಿಗೆ ಗೌರವ
* ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ 
* ಸ್ವಾತ್ಂತ್ರ್ಯ ಸೇನಾನಿಯ ಹೋರಾಟದ ಮೆಲಕು

ಬೆಂಗಳೂರು(ಆ. 14)  ಸಂಗೊಳ್ಳಿ ರಾಯಣ್ಣ ಜನ್ಮದಿನ ಆಚರಣೆಯನ್ನು ಸರ್ಕಾರ ಸಕಲ ಗೌರವಗಳೊಂದಿಗೆ  ಮನಡೆಸಿಕೊಡಲಿದೆ ಎಂದು  ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರ ಪ್ರಾಣ ತ್ಯಾಗ, ಹೋರಾಟ ಪ್ರತಿ ದಿನ  ಮೆಲಕು ಹಾಕಬೇಕಾಗುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಮೂವತ್ತು ಕೋಟಿ ರೂ . ಅನುದಾನ

ಬೆಂಗಳೂರು ಸೇರಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಾಯಣ್ಣನವರ ಕಾರ್ಯಕ್ರಮ ನಡೆಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮರ ಸೇನಾನಿಯಾಗಿ ಬ್ರಿಟಿಷರಿಗೆ ಕಾಡಿದ್ದ ಮಹಾವೀರನ ಸ್ಮರಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.  ಈ ಸಾರಿಯ ಆಗಸ್ಟ್  15  ರಿಂದಲೇ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. 

 

Video Top Stories