Asianet Suvarna News Asianet Suvarna News

Parappana Agrahara Expose: ಬಚ್ಚನ್‌ ಉಪಟಳಕ್ಕೆ ಬೇಸತ್ತ ಖಾಕಿ: ರೌಡಿ ಎನ್‌ಕೌಂಟರ್ ಆಗೋದು ಗ್ಯಾರಂಟಿ?

*ಪರಪ್ಪನ ಅಗ್ರಹಾರ ಜೈಲಲ್ಲಿ ಕರ್ಮಕಾಂಡ
*ಪೊಲೀಸರಿಗೆ ಆವಾಜ್‌ ಹಾಕಿದ್ದ ಬಚ್ಚನ್
*ನಟೋರಿಯಸ್‌  ಎನ್‌ಕೌಂಟರ್ ಆಗೋದು ಗ್ಯಾರಂಟಿನಾ?

ಬೆಂಗಳೂರು (ಫೆ. 05): ಪರಪ್ಪನ ಅಗ್ರಹಾರ (Parappana Agrahara) ಜೈಲಿನ ಕರ್ಮಕಾಂಡ ಕುರಿತು ಸರಣಿ ವರದಿಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಬಿತ್ತರ ಮಾಡುತ್ತಿದೆ. ಜೈಲಿನಲ್ಲಿ ಶಂಕಿತ ಉಗ್ರನಿಗೆ ಸಿಗುತ್ತಿರುವ ರಾಜಾತಿಥ್ಯ ಸೇರಿದಂತೆ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ವರದಿ ನೀಡಿತ್ತು. ಜೈಲಲ್ಲಿ ಸಾಲಾಗಿ ಕುಳಿತು ನಟೋರಿಯಸ್ ಬಚ್ಚನ್‌ನಿಂದ ಅಗ್ರಹಾರ ಪೊಲೀಸರು ಲಂಚ ಸ್ವೀಕರಿಸುತ್ತಿರುವ  ದೃಶ್ಯವನ್ನು ಬಹಿರಂಗಪಡಿಸಿತ್ತು. 

ಇದನ್ನೂ ಓದಿ: ಪರಪ್ಪನ ಅಗ್ರಹಾರ  ಜೈಲಲ್ಲಿ ಮತ್ತೊಂದು ಕರ್ಮಕಾಂಡ: ಸಿಬ್ಬಂದಿಯಿಂದಲೇ ಕೈದಿಗಳಿಗೆ ಡ್ರಗ್ಸ್‌!

ಈ ಮಧ್ಯೆ ಜೈಲಿನಲ್ಲಿರುವ ಬಚ್ಚನ್‌ಗೆ ಪೊಲೀಸರಿಂದ ಎನ್‌ಕೌಂಟರ್ ಬೆದರಿಕಾ ಹಾಕಲಾಗಿದೆ ಎಂಬ ಎಕ್ಸ್‌ಕ್ಲ್ಯೂಸಿವ್ ಮಾಹಿತಿ ಹೊರಬಿದ್ದಿದೆ. ಜೈಲಿನಲ್ಲಿದ್ರೂ ಬಚ್ಚನ್‌ ಪೊಲೀಸರಿಗೆ ಸಾಯಿಸ್ತೀರಾ ಸಾಯಿಸಿ ಎಂದು ಆವಾಜ್‌ ಹಾಕಿದ್ದ ಎಂದು ತಿಳಿದುಬಂದಿದೆ. ಬಚ್ಚನ್‌ ಉಪಟಳಕದಿಂದ ಬೇಸತ್ತಿರುವ  ಪೋಲಿಸರು "ನೀನು ಮಾತು ಕೇಳಲ್ಲ, ನಿನ್ನ ಕರೆದುಕೊಂಡು ಬಂದು ಕೇಸ್ ಹಾಕೋದು, ನೀನು ಜೈಲಲ್ಲಿ ಕೂತು ಬೆದರಿಕೆ ಹಾಕೋದು ನಮಗೆ ಸಾಕಾಗಿದೆ" ಎಂದು ಹೇಳಿದ್ದಾರೆ. ಇಲ್ಲಿದೆ ಈ ಕುರಿತ ಎಕ್ಸ್‌ಕ್ಲ್ಯೂಸಿವ್ ವಿಡಿಯೋ ಇಲ್ಲಿದೆ. 

Video Top Stories