Asianet Suvarna News Asianet Suvarna News

Aurad| ಸಚಿವ ಪ್ರಭು ಚೌವ್ಹಾಣ್‌ ನೇತೃತ್ವದಲ್ಲಿ ಬಂಜಾರಾ ಸಮಾವೇಶ

*  ಬೀದರ್‌ ಜಿಲ್ಲೆಯ ಔರಾದ್‌ನಲ್ಲಿ ಬಂಜಾರಾ ಸಮಾಜದ ಬೃಹತ್‌ ಸಮಾವೇಶ
*  ಅಲಂಕೃತ ಸಾರೋಟಿನಲ್ಲಿ ಸಚಿವ ಪ್ರಭು ಚೌವ್ಹಾಣ್‌ ದಂಪತಿ ಮೆರವಣಿಗೆ
*  ಮೆರವಣಿಗೆಯಲ್ಲಿ ಮಹಿಳೆಯರ ಬಂಜಾರಾ ನೃತ್ಯ
 

ಔರಾದ್‌(ನ.07): ಸಚಿವ ಪ್ರಭು ಚೌವ್ಹಾಣ್‌ ನೇತೃತ್ವದಲ್ಲಿ ಬೀದರ್‌ ಜಿಲ್ಲೆಯ ಔರಾದ್‌ನಲ್ಲಿ ಬಂಜಾರಾ ಸಮಾಜದ ಬೃಹತ್‌ ಸಮಾವೇಶ ನಡೆದಿದೆ. ಸಮಾವೇಶಕ್ಕೂ ಮುನ್ನ ಅಲಂಕೃತ ಸಾರೋಟಿನಲ್ಲಿ ಸಚಿವ ಪ್ರಭು ಚೌವ್ಹಾಣ್‌ ದಂಪತಿಯನ್ನ ಮೆರವಣಿಗೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಸಾಂಪ್ರದಾಯಿಕ ವೇಷಭೂಷಣ ಧರಿಸಿ ಮಹಿಳೆಯರ ಬಂಜಾರಾ ನೃತ್ಯ, ಯುವಕರ ಜಯ ಘೋಷಗಳು, ಬ್ಯಾಂಡ್‌ಗಳು ಎಲ್ಲರ ಗಮನ ಸೆಳೆದವು. ರ್ಯಾಲಿಯಲ್ಲಿ ಬಂಜಾರಾ ಸಮುದಾಯದ ಗುರುಗಳು, ಪ್ರಮುಖರು ಮತ್ತು ಸಾವಿರಾರು ಬಂಜಾರಾ ಸಮುದಾಯದ ಜನರು ಭಾಗವಹಿಸಿದ್ದರು.

ಅಪ್ಪು ಸಮಾಧಿ ಬಳಿ ಸಪ್ತಪದಿ ತುಳಿಯಲು ಮುಂದಾದ ಜೋಡಿ, ನೇತ್ರದಾನಕ್ಕೆ ಸಾವಿರಾರು ಮಂದಿ ನೋಂದಣಿ

ಇದೇ ವೇಳೆ ಸಚಿವ ಪ್ರಭು ಚೌವ್ಹಾಣ್‌ ಮಾತಾ ಜಗದಂಬಾ ಹಾಗೂ ಸಂತಸೇವಾಲಾಲ ಮಹಾರಾಜರ ದೇವಸ್ಥಾನಗಳ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಸಚಿವ ಪ್ರಭು ಚೌವ್ಹಾಣ್‌ ಅವರು, ಬಂಜಾರ ಸಮಾಜವು ಸಾಕಷ್ಟು ಹಿಂದುಳಿದಿದೆ. ಸಮಾಜದ ಜನತೆ ತಮ್ಮ ಮಕ್ಕಳನ್ನ ಸುಶಿಕ್ಷಿತರನ್ನಾಗಿ ಮಾಡಿಸೋದಕ್ಕೆ ಮೊದಲ ಆದ್ಯತೆ ನೀಡಬೇಕು ಅಂತ ತಿಳಿಸಿದ್ದಾರೆ.