Asianet Suvarna News Asianet Suvarna News

ಯೋಗಿ ಪ್ರತಾಪಕ್ಕೆ ಪತರಗುಟ್ಟಿದೆ ಮಾಫಿಯಾ: ಪಾಪಿಗಳ ಜಾತಕ ಜಾಲಾಡಿ ಯಮಪಾಶ ಹಾಕಿದ ಯುಪಿ ಸಿಎಂ..!

ಪಟ್ಟವೇರಿದ 2179 ದಿನಗಳಲ್ಲಿ 10,531 ಕ್ರಿಮಿಗಳು ಬಲಿಯಾಗಿದ್ದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಆ ರಾಜ್ಯದಲ್ಲಿ ಮಾಫಿಯಾವನ್ನು ಮಟ್ಟ ಹಾಕಿದ್ದಾರೆ. 

First Published Mar 7, 2023, 2:47 PM IST | Last Updated Mar 7, 2023, 2:48 PM IST

ಪಟ್ಟವೇರಿದ 2179 ದಿನಗಳಲ್ಲಿ 10,531 ಕ್ರಿಮಿಗಳು ಬಲಿಯಾಗಿದ್ದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನ ಅಸಲಿ ಆ್ಯಕ್ಷನ್ ಕಿಂಗ್ ಅಂತ ಕರೆಯೋದು ಇದೇ ಕಾರಣಕ್ಕೆ.. 2005ರಲ್ಲಿ, ಬಹುಜನ ಸಮಾಜ ಪಕ್ಷ ಶಾಸಕ ರಾಜು ಪಾಲ್‌ ಅವರ ದಾರುಣ ಹತ್ಯೆ ನಡೆದಿತ್ತು.. ಈ ಕೇಸಿಗೆ ಪ್ರಮುಖ ಸಾಕ್ಷಿಯಾಗಿದ್ದದ್ದು, ಉಮೇಶ್ ಪಾಲ್.. ಹಾಗಾಗಿನೇ, ಅವರಿಗೆ ಸರ್ಕಾರ ಭದ್ರತೆ ಕಲ್ಪಿಸಿತ್ತು.. ಆದ್ರೆ ಈಗ, ಉಮೇಶ್ ಪಾಲ್ ಸೇರಿದಂತೆ, ಅವರಿಗೆ ಭದ್ರತೆ ಕೊಡೋಕೆ ಅಂತ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲಾಯ್ತು.. ಆದರೂ, ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಪಟ್ಟ ಹತ್ತಿ ಕೂತ ಮೇಲಿಂದ ಏನೇನೇನೋ ಬದಲಾಗಿ ಹೋಗಿದೆ.. ಮಾಫಿಯಾ ರಾಜ್ ಈಗ ಕಂಪ್ಲೀಟ್ ಯೋಗಿ ರಾಜ್ ಆಗಿ ಕನ್ವರ್ಟ್ ಆಗಿದೆ.. ಈ ಬಗ್ಗೆ ಸುವರ್ಣ ಫೋಕಸ್‌ನಲ್ಲಿದೆ ಡೀಟೇಲ್ಸ್‌..