Asianet Suvarna News Asianet Suvarna News

News Hour: ಅಜಾನ್ ಬ್ಯಾನ್.. ಅಲಾರಾಂ ಇಟ್ಗೊಳಿ ಎಂದ ರವಿ.. ಕೆಂಡ ಕಾರಿದ ಎಚ್‌ಡಿಕೆ!

* ಅಜಾನ್ ಲೌಡ್‌ ಸ್ಪೀಕರ್ ಬ್ಯಾನ್... ರಾಜ್ ಠಾಕ್ರೆ ನಿರ್ಧಾರಕ್ಕೆ ಸ್ವಾಗತ

* ಅಜಾನ್ ಬ್ಯಾನ್... ಸುಪ್ರೀಂ ಕೋರ್ಟ್ ಆದೇಶ ಏನು ಹೇಳುತ್ತದೆ?

* ಕೈ ಮತ್ತು ಕಮಲದ ವಿರುದ್ಧ ಎಚ್‌ಡಿಕೆ ಕೆಂಡ

* ಅಜಾನ್ ಲೌಡ್‌ ಸ್ಪೀಕರ್ ಬ್ಯಾನ್... ನಾಯಕರು ಏನಂತಾರೆ?

ಬೆಂಗಳೂರು(ಏ. 04)  ಹಿಜಾಬ್( Hijab) ಹಲಾಲ್ (Halal) ನಂತರ ಇದೀಗ ಅಜಾನ್ ಧ್ವನಿವರ್ಧಕ (loudspeakers) ದೊಡ್ಡ ಮಟ್ಟದ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದೆ. ಧ್ವನಿವರ್ಧಕ ತೆರವು ಮಾಡಿ ಎಂಬ ಹೊಸ ಆಂದೋಲನ ಸಿದ್ಧಮಾಡಲಿದ್ದೇವೆ. ಕರ್ನಾಟಕದಲ್ಲಿ(Karnataka) ಅಭಿಯಾನ ಆರಂಭ ಮಾಡುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್   ಮುತಾಲಿಕ್  ಹೇಳಿದ್ದಾರೆ. 

Azaan Row: 'ಪೈಗಂಬರ್‌ ಕಾಲದಲ್ಲಿ ಮೈಕ್‌ ಇರಲಿಲ್ಲ'  ಮೈಕ್‌ ಬ್ಯಾನ್‌ ಪರ ಸಿ.ಟಿ. ರವಿ ಬ್ಯಾಟಿಂಗ್

ಇಂತಿಷ್ಟು ಡೆಸಿಬಲ್ಸ್ ಸೌಂಡ್ (Sound) ಇದ್ದರೆ ಸಮಸ್ಯೆ  ಇಲ್ಲ ಎಂಬ ಸುಪ್ರೀಂ ಕೋರ್ಟ್ ಆರ್ಡರ್ ಇದೆ ಎಂಬ ಅಭಿಪ್ರಾಯಗಳು ಬಂದಿವೆ. ಇದೆಲ್ಲದರ ನಡುವೆ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕೆಂಡ ಕಾರಿದ್ದಾರೆ. ಮುಸ್ಲಿಮರನ್ನು ಹೊರಗೆ ಇಡುತ್ತೀರಿ ಎಂದಾದರೆ  ರೈತರು ಬೆಳೆದ ಬೆಳೆ ಖರೀದಿ ಮಾಡೋರು ಯಾರು? ಎನ್ನುವ ಪ್ರಶ್ನೆ ಎಸೆದಿದ್ದಾರೆ.