Asianet Suvarna News Asianet Suvarna News

ಪೊಲೀಸರ ಆತಿಥ್ಯಕ್ಕೆ ಕುಂಟುತ್ತಾ ಬಂದ ಕನ್ಹಯ್ಯ ಹಂತಕರ ಮೇಲೆ ಕೋರ್ಟ್ ಆವರಣದಲ್ಲಿ ಹಲ್ಲೆ!

  • ಕನ್ಹಯ್ಯ ಹತ್ಯೆ ಖಂಡಿಸಿ ರಾಜ್ಯದಲ್ಲಿ ಭಾರಿ ಪ್ರತಿಭಟನೆ
  • ಅಮರಾವತಿ ಹತ್ಯೆ ಮುಚ್ಚಿಹಾಕಲು ಯತ್ನಿಸಿದ್ದ ಪೊಲೀಸ್
  • ಕಾಂಗ್ರೆಸ್ 70 ದಾಟಲ್ಲ, 120 ಕನಸು ಎಂದ ಹೆಚ್ ಡಿ ಕುಮಾರಸ್ವಾಮಿ

ಕನ್ಹಯ್ಯ ಲಾಲ್ ಹಂತಕರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಆದರೆ ಈ ವೇಳೆ ಆಕ್ರೋಶಗೊಂಡ ಹಲವರು ಕನ್ನಹಯ್ಯ ಹಂತಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಭಾರಿ ಭದ್ರತೆ ನಡುವೆ ಪೊಲೀಸರು ಕನ್ನಹಯ್ಯ ಲಾಲ್ ಹಂತಕರನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ.ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಇಂದು ರಾಜ್ಯದಲ್ಲಿ ಭಾರಿ ಪ್ರತಿಭಟನೆ ನಡೆಸಿದೆ. ಮೈಸೂರು, ರಾಯಚೂರು ಸೇರಿದಂತೆ ವಿವಿದ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ. ಬೆಂಗಳೂರಲ್ಲಿ ಬಿಜೆಪಿ ಅಲ್ಪಸಂಖ್ಯಾತ ವಿಭಾಗ ಪ್ರತಿಭಟನೆ ನಡೆಸಿದೆ. ಇಂದಿನ ಪ್ರಮುಖ ಸುದ್ದಿಗಳ ನ್ಯೂಸ್ ಹವರ್ ಇಲ್ಲಿದೆ.
 

Video Top Stories