ಉಸಿರಾಟದ ಸಮಸ್ಯೆ ಇದ್ದರೂ ರಜೆಯಿಲ್ಲ, ಆಕ್ಸಿಜನ್ ಸಿಲಿಂಡರ್ ಸಮೇತ ಬ್ಯಾಂಕಿಗೆ ಬಂದ ಉದ್ಯೋಗಿ..!
- ಉಸಿರಾಟದ ಸಮಸ್ಯೆ ಇದ್ದರೂ ರಜೆ ಕೊಡದ ಮ್ಯಾನೆಜರ್
- ಆಕ್ಸಿಜನ್ ಸಿಲಿಂಡರ್ ಸಮೇತ ಬ್ಯಾಂಕಿಗೆ ಬಂದ ಸಿಬ್ಬಂದಿ
- ಜಾರ್ಖಂಡ್ನ ಬೊಕೊರಾದಲ್ಲಿ ನಡೆದ ಘಟನೆ
ಬೆಂಗಳೂರು (ಮೇ. 28): ಕೊರೋನಾ ಸೋಂಕಿನಿಂದ ಬಳಲುತ್ತಿದ್ದರೂ ತಮಗೆ ರಜೆ ಕೊಟ್ಟಿಲ್ಲವೆಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ಆಕ್ಸಿಜನ್ ಸಿಲಿಂಡರ್ ಸಮೇತ ಬ್ಯಾಂಕಿಗೆ ಬಂದಿದ್ದಾರೆ. ಜಾರ್ಖಂಡ್ನ ಬೊಕೊರಾದಲ್ಲಿ. ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದ ಅರವಿಂದ್ ಕುಮಾರ್ ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ವರದಿ ನೆಗೆಟಿವ್ ಬಂದರೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲಸಕ್ಕೆ ಹಾಜರಾಗುವಂತೆ ಮ್ಯಾನೆಜರ್ ಒತ್ತಡ ಹೇರಿದ್ದರಿಂದ ಆಕ್ಸಿಜನ್ ಸಿಲಿಂಡರ್ ಸಮೇತ ಬಂದಿದ್ದಾರೆ.
ಕೊರೋನಾ ಅಬ್ಬರದ ಮಧ್ಯೆ ಶಾಕಿಂಗ್ ನ್ಯೂಸ್: ನೀರಿನಲ್ಲಿ ಪತ್ತೆಯಾಯ್ತು ವೈರಸ್!