Asianet Suvarna News Asianet Suvarna News

Makara Sankranti: ಸಂಕ್ರಾಂತಿ ಹಬ್ಬದಂದು ಸುಬ್ರಹ್ಮಣ್ಯ ದೇಗುಲದಲ್ಲಿ ನಾಗರಹಾವು ಪ್ರತ್ಯಕ್ಷ

ಆನೇಕಲ್ ಪಟ್ಟಣದ ಬರಗೂರುಪೇಟೆಯ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ (Makara Sankranti) ಹಬ್ಬದಂದು ದೇವಾಲಯದಲ್ಲಿ ನಾಗರಹಾವು (Cobra) ಪ್ರತ್ಯಕ್ಷವಾಗಿದೆ. 

ಆನೇಕಲ್ (ಜ. 15): ಪಟ್ಟಣದ ಬರಗೂರುಪೇಟೆಯ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ (Makara Sankranti) ಹಬ್ಬದಂದು ದೇವಾಲಯದಲ್ಲಿ ನಾಗರಹಾವು (Cobra) ಪ್ರತ್ಯಕ್ಷವಾಗಿದೆ. 

Bidar: ನಾಗರಾಜನ ಪವಾಡ! ಮರದ ಮೇಲಿರುವ ಹಾವು ನೋಡಲು ಜನಸಾಗರ

ಇಂದು ಮಧ್ಯಾಹ್ನ ಹಬ್ಬದ ವಿಶೇಷ ಪೂಜೆಗಳು ನಡೆಯುತ್ತಿದ್ದ ವೇಳೆ ಹಾವು ಕಾಣಿಸಿಕೊಂಡಿದೆ.  ದೇವಾಲಯದಲ್ಲಿ ಹಾವನ್ನು ಕಂಡು ಭಕ್ತಾದಿಗಳು  ಅಚ್ಚರಿಗೊಂಡರು.  ಕೆಲ ಸಮಯ ದೇವಾಲಯದಲ್ಲಿಯೇ ಸುತ್ತಾಡಿಕೊಂಡಿತ್ತು ನಾಗರಹಾವು. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಕೈ ಮುಗಿದರು. ಕೊನೆಗೆ  ಹಾವನ್ನ ರಕ್ಷಿಸಿ ಕಾಡಿಗೆ ಬಿಟ್ಟರು ಉರಗ ತಜ್ಞ.