ಶಾಲಾ- ಕಾಲೇಜು ಪುನಾರಂಭ ಅ. 10 ನಂತರ ನಿರ್ಧಾರ: ಸುರೇಶ್ ಕುಮಾರ್
ರಾಜ್ಯದಲ್ಲಿ ಶಾಲಾ- ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ 5.0 ಅನ್ಲಾಕ್ ಮಾರ್ಗಸೂಚಿಯಲ್ಲಿ ಸಮ್ಮತಿ ನೀಡಿದೆ. ಕೋವಿಡ್ ಸಂಕಷ್ಟ ಸಮಯವಾಗಿದ್ದರಿಂದ ಪೋಷಕರು- ವಿದ್ಯಾರ್ಥಿಗಳಿಗೆ ಸಹಜವಾಗಿ ಆತಂಕ ಶುರುವಾಗಿದೆ.
ಬೆಂಗಳೂರು (ಅ. 01): ರಾಜ್ಯದಲ್ಲಿ ಶಾಲಾ- ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ 5.0 ಅನ್ಲಾಕ್ ಮಾರ್ಗಸೂಚಿಯಲ್ಲಿ ಸಮ್ಮತಿ ನೀಡಿದೆ. ಕೋವಿಡ್ ಸಂಕಷ್ಟ ಸಮಯವಾಗಿದ್ದರಿಂದ ಪೋಷಕರು- ವಿದ್ಯಾರ್ಥಿಗಳಿಗೆ ಸಹಜವಾಗಿ ಆತಂಕ ಶುರುವಾಗಿದೆ.
ಸರ್ಕಾರದ ಆದೇಶ ಉಲ್ಲಂಘನೆ, ಖಾಸಗಿ ಶಾಲೆಯಿಂದ ಪಾಠ ಶುರು: ಶಿಕ್ಷಣ ಸಚಿವರೇ ಗಮನಿಸಿ
ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಶಾಲಾ-ಕಾಲೇಜು ಆರಂಭಕ್ಕೆ ನಾವು ಆತುರಪಡಿಸುತ್ತಿಲ್ಲ. ಅಧಿಕಾರಿಗಳು, ತಜ್ಞರ ಜೊತೆ ಇಂದು ಚರ್ಚೆ ನಡೆಸುತ್ತೇನೆ. ಮಕ್ಕಳ ಸುರಕ್ಷತೆ ನಮ್ಮ ಆದ್ಯ ಕರ್ತವ್ಯ. ಅ. 10 ರ ಬಳಿಕ ನಿರ್ಧಾರವಾಗಲಿದೆ' ಎಂದು ಸುವರ್ಣ ನ್ಯೂಸ್ಗೆ ಹೇಳಿದ್ದಾರೆ.