Asianet Suvarna News Asianet Suvarna News

ಸದ್ಯಕ್ಕೆ ಶಾಲೆ ತೆರೆಯುವ ಬದಲು, ಇರುವ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡೋಣ: ರವೀಂದ್ರ ಶ್ರೀಕಂಠಯ್ಯ

ಪಾಸಿಟಿವ್ ಕೇಸ್‌ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ಬಹಳ ಸಂಕಷ್ಟದಲ್ಲಿದ್ದಾರೆ. ಇಷ್ಟು ಬೇಗ ಶಾಲಾ- ಕಾಲೆಜುಗಳನ್ನು ಪ್ರಾರಂಭಿಸೋದು ಬೇಡ. ಮಕ್ಕಳ ಜೀವದ ಜೊತೆ ಆಟ ಆಡೋದು ಬೇಡ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 

ಬೆಂಗಳೂರು (ಸೆ. 29): ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ಶುರುವಾಗಿದೆ. ಶಾಲಾ- ಕಾಲೇಜುಗಳನ್ನು ಆರಂಭಿಸಿ ಬಿಡೋಣ ಎನ್ನುವ ಮನೋಭಾವದಲ್ಲಿದೆ ಸರ್ಕಾರ. ಆದರೆ ಇದಕ್ಕೆ ಸಾರ್ವಜನಿಕ ವಲಯದಲ್ಲಿ, ಪೋಷಕರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. 

ಶಾಲೆಗಳನ್ನು ಪುನಾರಂಭಿಸುವ ದಿನಾಂಕ ಕೂಡಾ ಫಿಕ್ಸ್ ಮಾಡಿಲ್ಲ, ಆತಂಕ ಬೇಡ: ಸುರೇಶ್ ಕುಮಾರ್

ಪಾಸಿಟಿವ್ ಕೇಸ್‌ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ಬಹಳ ಸಂಕಷ್ಟದಲ್ಲಿದ್ದಾರೆ. ಇಷ್ಟು ಬೇಗ ಶಾಲಾ- ಕಾಲೆಜುಗಳನ್ನು ಪ್ರಾರಂಭಿಸೋದು ಬೇಡ. ಮಕ್ಕಳ ಜೀವದ ಜೊತೆ ಆಟ ಆಡೋದು ಬೇಡ. ಶಾಲೆ ತೆರೆಯುವ ಬದಲು ಶಿಕ್ಷಣ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡುವ ಬಗ್ಗೆ ಯೋಚನೆ ಮಾಡೋಣ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರೋಣ' ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ.