Suvarna Exclusive: ಪರಪ್ಪನ ಅಗ್ರಹಾರದಲ್ಲಿ ರೌಡಿ ಬಚ್ಚನ್ನಿಂದ ಲಂಚ ಪಡೆದ ಪೊಲೀಸರು!
ಬಗೆದಷ್ಟೂ ಬಯಲಾಗ್ತಿದೆ ಪರಪ್ಪನ ಅಗ್ರಹಾರ ಕರ್ಮಕಾಂಡ. ಹೌದು! ಏಷ್ಯಾ ನೆಟ್ ಸುವರ್ಣ ನ್ಯೂಸ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಂದು ಭರ್ಜರಿ ಬೇಟೆಯನ್ನು ಮಾಡಿದೆ. ಖಾಕಿಗೆ ಲಂಚ ಕೊಟ್ಟ ರೌಡಿಗೆ ಸೆರೆಮನೆಯೇ ಅರಮನೆಯಾಗಿದ್ದು, ಲಂಚ ಪಡೆದ ಪೊಲೀಸರು ರೌಡಿ ಹೇಳಿದಂಗೆ ಕೇಳ್ತಾರೆ.
ಬೆಂಗಳೂರು (ಜ.29): ಬಗೆದಷ್ಟೂ ಬಯಲಾಗ್ತಿದೆ ಪರಪ್ಪನ ಅಗ್ರಹಾರ ಕರ್ಮಕಾಂಡ. ಹೌದು! ಏಷ್ಯಾ ನೆಟ್ ಸುವರ್ಣ ನ್ಯೂಸ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಂದು ಭರ್ಜರಿ ಬೇಟೆಯನ್ನು ಮಾಡಿದೆ. ಖಾಕಿಗೆ ಲಂಚ ಕೊಟ್ಟ ರೌಡಿಗೆ ಸೆರೆಮನೆಯೇ ಅರಮನೆಯಾಗಿದ್ದು, ಲಂಚ ಪಡೆದ ಪೊಲೀಸರು ರೌಡಿ ಹೇಳಿದಂಗೆ ಕೇಳ್ತಾರೆ. ಜೈಲಲ್ಲಿ ಸಾಲಾಗಿ ಕುಳಿತು ನಟೋರಿಯಸ್ ಬಚ್ಚನ್ನಿಂದ ಅಗ್ರಹಾರ ಪೊಲೀಸರು ಲಂಚ ಪಡೆದಿದ್ದಾರೆ. ಈ ಮೂಲಕ ಪೊಲೀಸರಿಗೆ ಮಾಮೂಲಿ ಕೊಟ್ಟು ಬಿಂದಾಸ್ ಆಗಿ ರೌಡಿ ಬಚ್ಚನ್ ಮೆರೆದಿದ್ದಾನೆ. ರೌಡಿಯಿಂದ ಲಂಚ ಸ್ವೀಕರಿಸುತ್ತಿರುವ ಎಕ್ಸ್ಕ್ಲ್ಯೂಸಿವ್ ದೃಶ್ಯವನ್ನು ಗೃಹ ಸಚಿವರು ನೋಡಲೇಬೇಕು ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ. ಏಷ್ಯಾ ನೆಟ್ ಸುವರ್ಣ ನ್ಯೂಸ್ 4ನೇ ಬೇಟೆಯನ್ನು ಪರಪ್ಪನ ಅಗ್ರಹಾರದಲ್ಲಿ ಮಾಡಿದೆ.
ಪರಪ್ಪನ ಅಗ್ರಹಾರದಲ್ಲಿ ಗಾಂಜಾದ್ದೇ ಘಾಟು.. ಬೀಡಿ, ಸಿಗರೇಟ್ಗೆ ಡಬಲ್ ರೇಟು!
'ನನಗೆ ಹಣ ಕೊಡಬೇಕು ಇಲ್ಲದಿದ್ದರೆ ಸರಿ ಇರಲ್ಲ' ಎಂದು ಮೊಬೈಲ್ ಮೂಲಕ ಕರೆ ಮಾಡಿ ಉದ್ಯಮಿಗೆ ಕೊಲೆ ಬೆದರಿಕೆಯನ್ನು ರೌಡಿ ಬಚ್ಚನ್ ಜೈಲಿನಿಂದನೇ ಹಾಕಿದ್ದಾನೆ. ರೋಬೋಸ್ ಐರನ್, ಸ್ಟೀಲ್ ಮಾಲೀಕರಾದ ನಾಸಿರ್ ಖಾನ್ರಿಗೆ ಬಚ್ಚನ್ ಧಮ್ಕಿ ಹಾಕಿದ್ದಾನೆ. ಮಾತ್ರವಲ್ಲದೇ ಜೈಲಿನಲ್ಲಿ ರೌಡಿ ಬಚ್ಚನ್ ಮೇಲೆ ಪೊಲೀಸರಿಂದ ಹಲ್ಲೆಯಾಗಿದೆ. ಮೈ ತುಂಬಾ ಗಾಯವಾದ ಸ್ಥಿತಿಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಬಚ್ಚನ್ ದಾಖಲಾಗಿದ್ದು, ಚಿಕಿತ್ಸೆಯ ನಂತರ ಪೊಲೀಸರು ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಇನ್ನು ಉದ್ಯಮಿಗಳಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಬಚ್ಚನ್ ಅರೆಸ್ಟ್ ಆಗಿದ್ದಾನೆ.