Asianet Suvarna News Asianet Suvarna News

ಜೈಲಿನಿಂದ ಬಿಡುಗಡೆಯಾಗ್ತಿದ್ದಂತೆ ರೌಡಿಶೀಟರ್‌ ಮರ್ಡರ್‌: ಸಿದ್ದಾಪುರ ಮಹೇಶ್‌ನನ್ನು ಕೊಚ್ಚಿ ಕೊಂದ ಹಂತಕರು

ರೌಡಿಶೀಟರ್ ಸಿದ್ದಾಪುರ ಮಹೇಶ್ ಹತ್ಯೆ ಪ್ರಕರಣ
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ FIR
ಸಿದ್ದಾಪುರ ಸುನೀಲ್ ಸೇರಿ ಹಲವರ ವಿರುದ್ಧ ಕೇಸ್

ಬೆಂಗಳೂರು: ಜೈಲಿನಿಂದ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ರೌಡಿಶೀಟರ್‌ ಸಿದ್ದಾಪುರ ಮಹೇಶ್‌ನನ್ನು(Rowdysheeter Siddapur Mahesh) ಹೊಸ ರೋಡ್​ ಜಂಕ್ಷನ್​ ಬಳಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ವಿಲ್ಸನ್‌ ಗಾರ್ಡನ್‌ ನಾಗ ಮತ್ತು ಮಹೇಶ್‌ ನಡುವೆ ಮೊದಲಿನಿಂದಲೂ ದ್ವೇಷವಿತ್ತು. ಜಯನಗರದಲ್ಲಿ 2020 ರಲ್ಲಿ ನಡೆದಿದ್ದ ಮದನ್​ ಕೊಲೆ(murder) ಕೇಸ್‌​ನಲ್ಲಿ ಭಾಗಿಯಾಗಿ ಮಹೇಶ್​ ಜೈಲು ಸೇರಿದ್ದ. ಈತನ ಆಗಮನಕ್ಕೆ ಇವರು ಕಾಯುತ್ತಿದ್ದರು. ರೌಡಿಶೀಟರ್​​​ ವಿಲ್ಸನ್‌ ​​ಗಾರ್ಡನ್​​​ ನಾಗ, ಡಬಲ್ ಮೀಟರ್​ ಮೋಹನ್​​, ಸುನೀಲ್​ ಸೇರಿದಂತೆ ಹಲವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್​​ ಠಾಣೆಯಲ್ಲಿ(Parappana Agrahara police station) ಎಫ್​ಐಆರ್ ದಾಖಲಾಗಿದೆ. ಐಪಿಸಿ 302,120b,143,147,148, 343,327,149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ವೀಕ್ಷಿಸಿ:  News Hour: ಯುರೋಪ್‌ ಟೂರ್‌ನಿಂದ ಸರ್ಕಾರಕ್ಕೆ 'ಕಮೀಷನ್‌ ಬಾಂಬ್‌' ಗಿಫ್ಟ್‌ ತಂದ ಎಚ್‌ಡಿಕೆ!

Video Top Stories