Asianet Suvarna News Asianet Suvarna News

ಜೈಲಿನಿಂದ ಹೊರ ಬಂದ ನಿಮಿಷಗಳಲ್ಲೇ ಮರ್ಡರ್: ಕೊಲೆಯಾದವನು ಸೈಲೆಂಟ್ ಸುನೀಲನ ಹುಡುಗ..!

ಲಿಂಗನ ಶಿಷ್ಯನ್ನಾಗಿದ್ದ ಮಹೇಶ ಸೇಫ್ಟಿಗೆ ಜೈಲು ಸೇರಿದ್ದ..!
ಜೈಲಿಗೆ ಹೋಗುವ ಮುನ್ನ ಒಂದು ವಿಕೆಟ್ ಉರುಳಿಸಿದ್ದ..!
ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹೇಶ..!
 

ಮಚ್ಚಿಡಿದವನು ಮಚ್ಚಿನಿಂದಲೇ ಮಣ್ಣಾಗ್ತಾನೆ ಅನ್ನೋ ಮಾತು ಇವತ್ತಿನ ಸ್ಟೋರಿಗೆ ಬೆಸ್ಟ್ ಎಕ್ಸಾಂಪಲ್. ಅವನೊಬ್ಬ ನಟೋರಿಯಸ್ ರೌಡಿ. ತನ್ನ ಗುರುನನ್ನ ಕೊಂದವರನ್ನ ಹಾಡಹಗಲೇ ಕೊಂದು ಜೈಲು ಸೇರಿದ್ದ. ಆದ್ರೆ ನಿನ್ನೆ ಆತನ ರಿಲೀಸ್ ಡೇಟ್.. ಖಷಿ ಖುಷಿಯಾಗಿ ಆತ ಜೈಲಿನಿಂದ ಹೊರಬಂದಿದ್ದ. ಅದ್ರೆ ಅವನು ಮನೆಗೆ ಹೋಗುವ ದಾರಿಯಲ್ಲಿ ಅವನ ಆಪೋಸೀಟ್ ಗ್ಯಾಂಗ್ ಅವನ ರಕ್ತ ನೋಡಲು ಕಾದು ಕುಳಿತಿತ್ತು. ಆದ್ರೆ ಇದ್ಯಾವದರ ಪರಿಯೂ ಇಲ್ಲದೇ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಹೆಂಡತಿಯನ್ನ ನೋಡಲು ಜೈಲಿನಿಂದ ಖುಷಿಯಿಂದ ಹೊರಬಂದ ಆತ ಕಲವೇ ನಿಮಿಷಗಳಲ್ಲಿ ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದ. ಅವನನ್ನ ಅಟ್ಯಾಕ್ ಮಾಡಿದ ಹಂತಕ ಪಡೆ ಅವನ ತಲೆಗೆ ಸಾಲು ಸಾಲು ಮಚ್ಚಿನೇಟುಗಳನ್ನ ಹಾಕಿಬಿಟ್ಟಿದ್ರು. ಮಹೇಶನ ಕೊಲೆಯ ವಿಷ್ಯ ರಾತ್ರೋ ರಾತ್ರಿ ಬೆಂಗಳೂರು (Bengaluru) ಅಂಡರ್‌ವಲ್ಡ್‌ಗೆ ಪಸರಿಸಿ ಬಿಡುತ್ತೆ. ಅವನ ಸಾವಿನ ಸುದ್ದಿ ಕೆಲವರಿಗೆ ರಕ್ತ ಕುದಿಯುವಂತೆ ಮಾಡಿದ್ರೆ ಇನ್ನೂ ಕಲವರು ಬೆಂಗಳೂರಿನ ಹೊರಗೇ ಕೂತು ಪಾರ್ಟಿ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  ದೇವರ ರೂಪದಲ್ಲಿ ಪೂಜಿಸಲ್ಪಡುತ್ತಿದ್ದ ಕಾಡು ಹಂದಿಯ ಹತ್ಯೆ..!

Video Top Stories