ಹಾಡಹಗಲೇ ಜೆಡಿಎಸ್ ಮುಂಂಡನ ಕೊಚ್ಚಿ ಕೊಲೆ: ಇದಕ್ಕೆ ಕಾರಣವೇನು ಗೊತ್ತಾ ?

ಹಾಸನದಲ್ಲಿ ಹಾಡಹಗಲೇ ಹರಿಯಿತು ನೆತ್ತರು 
ರೇವಣ್ಣನ ಪರಮಾಪ್ತ ಕೃಷ್ಣೇಗೌಡ ಬರ್ಬರ ಹತ್ಯೆ
ಹಾಸನದ ಕೈಗಾರಿಕಾ ಪ್ರದೇಶದಲ್ಲಿ ನಡೆದ ಘಟನೆ 

First Published Aug 10, 2023, 10:00 AM IST | Last Updated Aug 10, 2023, 10:00 AM IST

ಜೆಡಿಎಸ್ ನಾಯಕ ಎಚ್.ಡಿ ರೇವಣ್ಣ ಪರಮಾಪ್ತ ಕೃಷ್ಣೆಗೌಡ ಹಾಡಹಗಲೇ ಹೆಣವಾಗಿದ್ದಾನೆ. ಮಾರಕಾಸ್ತ್ರಗಳಿಂದ ನಡುರಸ್ತೆಯಲ್ಲೇ ಕೊಚ್ಚಿ ಭೀಕರವಗಿ ಹತ್ಯೆ ಮಾಡಲಾಗಿದೆ. ಜೆಡಿಎಸ್(JDS) ಮುಖಂಡನ ಬರ್ಬರ ಹತ್ಯೆ ಹಾಸನ(Hassan) ಜಿಲ್ಲೆ ಜನರನ್ನ ಬೆಚ್ಚಿಬೀಳಿಸಿದೆ. ಹಾಸನ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಕೃಷ್ಣೇಗೌಡ ಹತ್ಯೆಯಾಗಿದೆ. ಕೃಷ್ಣೆಗೌಡ ತಮ್ಮ ಫ್ಯಾಕ್ಟರಿಗೆ ತೆರಳುತ್ತಿದ್ದ ವೇಳೆ ಕಾರನ್ನ ಅಡ್ಡಗಟ್ಟಿ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೈಗೈದಿದ್ದಾರೆ(Murder). ಕೊಲೆಯಾದ ಕೃಷ್ಣೇಗೌಡ(Krishnegowda) ಹಾಸನದಲ್ಲಿ  ಗ್ರ್ಯಾನೈಟ್ ಉದ್ಯಮಿಯಾಗಿ, ಕಾಂಟ್ರ್ಯಾಕ್ಟರ್ ಆಗಿ, ಜೆಡಿಎಸ್ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ರು. ಅಷ್ಟೇ ಅಲ್ಲದೇ ಕೃಷ್ಣೆಗೌಡ ರೇವಣ್ಣ ಕುಟುಂಬದ ಅತ್ಯಾಪ್ತರಲ್ಲಿ ಒಬ್ಬರಾಗಿದ್ರು. ಕೃಷ್ಣೇಗೌಡರ ಭೀಕರ ಹತ್ಯೆ ಜೆಡಿಎಸ್ ನಾಯಕರನ್ನ ದಿಗ್ಬ್ರಮೆಗೊಳಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಶಾಸಕ  ಸ್ವರೂಪ್ ಪ್ರಕಾಶ್, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಹಾಸನ ಎಸ್ಪಿ ಹರಿರಾಮ್ ಶಂಕರ್, ಬೆರಳಚ್ಚು ತಂಡ, ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಕೊಲೆ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಎಸ್ಪಿ ವಿಶ್ವಾಸವ್ಯಕ್ತಪಡಿಸಿದ್ರು.

ಇದನ್ನೂ ವೀಕ್ಷಿಸಿ:  ಮನೆ ಬಾಡಿಗೆ ಕೊಡಿ ಅಂದಿದ್ದೇ ತಪ್ಪಾ..?: ಬಾಡಿಗೆ ಕೇಳಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ..!