ಬಿಲ್ಡಪ್‌ಗಾಗಿ ಅಮಾಯಕನ ಹೆಣ ಹಾಕಿದ ಕಿರಾತಕರು: ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಹೋದವರಿಗೆ ಗುಂಡೇಟು !

ನಿನ್ನೆ ಪಟ್ಡಣದ ಜನ ಸಂಡೇ ಮೂಡ್ ನಲ್ಲಿದ್ರು, ಈ ವೇಳೆ ಅದೊಂದು ಲೇಔಟ್‌ನ ಪಾಳು ಬಿದ್ದ ಮನೆಯ ಸಮೀಪ ಫೈರಿಂಗ್ ಸೌಂಡ್ ಕೇಳಿಸಿದೆ. ಏನಾಯ್ತು ಅಂತ ಅಲ್ಲಿನ ಜನರು ಹೋಗಿ ನೋಡುವಷ್ಟರಲ್ಲಿ ಕೊಲೆ ಆರೋಪಿಯ ಕಾಲಿಗೆ ಪೊಲೀಸರು ಗುಂಡಿಳಿಸಿದ್ರು. 
 

First Published Aug 7, 2023, 11:46 AM IST | Last Updated Aug 7, 2023, 11:46 AM IST

ಬೆಂಗಳೂರು ಹೊರವಲಯ ಆನೇಕಲ್‌ನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಪೊಲೀಸರ ರಿವಾಲ್ವಾರ್ ಸದ್ದು ಮಾಡಿತ್ತು. ಆನೇಕಲ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಪ್ರದೀಪ್ ರಿವಾಲ್ವಾರ್, 19 ವರ್ಷದ ಕೊಲೆ(Murder) ಆರೋಪಿ ಆಕಾಶ್ ಕಾಲು ಸೀಳಿತ್ತು. ಹೀಗೆ ಕಾಲಿಗೆ ಗುಂಡೇಟು ತಿಂದು ಬೆಡ್ ಮೇಲೆ ಮಲಗಿರುವ ಕಿರಾತಕನ ಹೆಸರು ಆಕಾಶ್. ಆನೇಕಲ್ ತಾಲೂಕಿನ ಗೊಲ್ಲಹಳ್ಳಿಯ ನಿವಾಸಿ. ಕಳೆದ ಜುಲೈ 31ರ ರಾತ್ರಿ ಆನೇಕಲ್ ತಾಲೂಕಿನ ಮೆಣಸಿಗನಹಳ್ಳಿ ಸಮೀಪ, ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಅಮಾಯಕ ಹುಡುಗ ಹೇಮಂತ್ ಕೊಲೆ ಮಾಡಿದ್ದ. ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಆಕಾಶ್ ಹಾಗೂ ನಾಲ್ವರು ಅಸಾಮಿಗಳು, ಹೇಮಂತ್ನನ್ನು ಅಡ್ಡಗಟ್ಟಿ ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆಗಿದ್ರು. ಕೊಲೆ ಜಾಡು ಹಿಡಿದು ಹೊರಟ ಪೊಲೀಸರ(police) ಮೇಲೆಯೇ ಆರೋಪಿ ಆಕಾಶ್ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆನೇಕಲ್ ಸಬ್ ಇನ್‌ಸ್ಪೆಕ್ಟರ್ ಪ್ರದೀಪ್ ಆತ್ಮರಕ್ಷಣೆಗಾಗಿ ಆಕಾಶ್ ಕಾಲಿಗೆ ಗುಂಡು(firing) ಹಾರಿಸಿದ್ದಾರೆ. ಹೇಮಂತ್ ಹತ್ಯೆ ಆರೋಪದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇವರೆಲ್ಲರೂ 18 ವರ್ಷದೊಳಗಿನ ಬಾಲಾಪರಾಧಿಗಳೇ. ಆದ್ರೆ ಇವರು ಹೇಳಿದ ಕತೆ ಮಾತ್ರ ಪೊಲೀಸರೇ ಬೆಚ್ಚಿ ಬೀಳುವಂತಿತ್ತು.

ಇದನ್ನೂ ವೀಕ್ಷಿಸಿ:  ವಿಧಾನಪರಿಷತ್ ನಾಮಪತ್ರ ಪ್ರಕ್ರಿಯೆ: ನಿಷ್ಠಾವಂತ ಕಾರ್ಯಕರ್ತರಿಗೆ ಸದಸ್ಯ ಸ್ಥಾನ ನೀಡಲು ಪಟ್ಟು !