Asianet Suvarna News Asianet Suvarna News

ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು..ಪ್ರಿಯಕರನಿಗಾಗಿ ಯೋಧನನ್ನೇ ಕೊಂದ ಹೆಂಡತಿ!

ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು/ ಪ್ರಿಯಕರನಿಗಾಗಿ ಗಂಡನನ್ನೇ ಮುಗಿಸಿದ ಹೆಂಡತಿ/ ನಾಲ್ಕು ತಿಂಗಳ ಹಿಂದೆಯೇ ಗಂಡನ ಕೊಲೆಗೆ ಸ್ಕೆಚ್ ರೆಡಿಯಾಗಿತ್ತು

ಬೆಳಗಾವಿ(ಫೆ.27): ಅನೈತಿಕ ಸಂಬಂಧದಿಂದ ರಕ್ಷಿಸಿಕೊಳ್ಳಲು ತನ್ನ ಪತಿಯನ್ನೇ ಹತ್ಯೆಗೈದು, ನಂತರ ಪತಿ ಕಾಣೆಯಾಗಿರುವ ಬಗ್ಗೆ ಕಟ್ಟುಕಥೆ ಕಟ್ಟಿದ ಪತ್ನಿ ಹಾಗೂ ಪ್ರಿಯತಮ ಇದೀಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾರೆ.

ತವರು ಮನೆಗೆ ಹೋಗಲು ಬಿಡದ ಗಂಡನ ಮರ್ಮಾಂಗಕ್ಕೆ ಕತ್ತರಿ

ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದ ಅಂಜಲಿ ದೀಪಕ ಪಟ್ಟಣದಾರ (26) ಹಾಗೂ ಅವಳ ಪ್ರಿಯತಮ ಕಾರ್‌ಡ್ರೈವರ್ ಪ್ರಶಾಂತ ದತ್ತಾತ್ರೇಯ ಪಾಟೀಲ (28) ಎಂಬುವರೇ ಕಂಬಿ ಹಿಂದಿನ ಆರೋಪಿಗಳು.