Asianet Suvarna News Asianet Suvarna News

Impact: ಭೀಮಾತೀರದಲ್ಲಿ ಥ್ರಿಲ್ಲಿಂಗ್ ಕಿಡ್ನ್ಯಾಪ್ ಕೇಸ್, ಯುವಕ ಬಚಾವ್ ಮಾಡಿದ ಸುವರ್ಣನ್ಯೂಸ್!

ಭೀಮಾತೀರದಲ್ಲಿ ನಟೋರಿಯಸ್ ರೌಡಿಗಳ ಅಟ್ಟಹಾಸ ಮತ್ತೆ ಶುರುವಾಗಿದೆ. ಬೀದರ ಜಿಲ್ಲೆಯ ಔರಾದ ಮೂಲದ ರವಿ ರಾಠೋಡ ಎಂಬಾತನನ್ನು ಅಪಹರಿಸಿ 30 ಲಕ್ಷ ಹಣದ ಬೇಡಿಕೆ ಇಟ್ಟಿದ್ದರು 

ವಿಜಯಪುರ (ನ. 23): ಭೀಮಾತೀರದಲ್ಲಿ (Bheemathera) ನಟೋರಿಯಸ್ ರೌಡಿಗಳ ಅಟ್ಟಹಾಸ ಮತ್ತೆ ಶುರುವಾಗಿದೆ. ಬೀದರ (Bidar) ಜಿಲ್ಲೆಯ ಔರಾದ ಮೂಲದ ರವಿ ರಾಠೋಡ ಎಂಬಾತನನ್ನು ಅಪಹರಿಸಿ (Kidnap) 30 ಲಕ್ಷ ಹಣದ ಬೇಡಿಕೆ ಇಟ್ಟಿದ್ದರು ಭೀಮಾ ತೀರದ ಕ್ರಿಮಿನಲ್‌ಗಳು. 10 ದಿನಗಳಿಂದ ರಾಠೋಡನನ್ನು ತಮ್ಮ ಬಳಿಯೇ ಇರಿಸಿಕೊಂಡು ಕಿರುಕುಳ ನೀಡಿದ್ದಾರೆ. ಹಣ ಕೊಡ್ತೀರಾ ಇಲ್ಲಾ ಕಿಡ್ನಿ ಮಾರೋದಾ ಎಂದು ಹೆದರಿಸಿದ್ದಾರೆ.

Vijayapura | ಭೀಮಾತೀರದ ಹಂತಕರ ಭಯಾನಕ ಟಾರ್ಚರ್ ಕೇಳಿದ್ರೆ ಬೆಚ್ಚಿ ಬೀಳ್ತೀರಿ..!

ರವಿ ರಾಥೋಡ್ ನರಳಾಟದ ಆಡಿಯೋ ಕೇಳಿಸಿ ಬ್ಲ್ಯಾಕ್‌ಮೇಲ್ (Blackmail) ಮಾಡಿದ್ದಾರೆ. ಈ ಆಡಿಯೋವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಸಾರ ಮಾಡುತ್ತಿದ್ದಂತೆ ಭೀಮಾತೀರದ ಕ್ರಿಮಿನಲ್‌ಗಳು ಬೆಚ್ಚಿ ಬಿದ್ದಿದ್ದಾರೆ. ರವಿ ರಾಥೋಡ್‌ನನ್ನು ಬಸ್‌ಸ್ಟ್ಯಾಂಡ್‌ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗಾರ ಹಾಗೂ ವಿಜಯಪುರ ಎಸ್‌ಪಿ ನೆರವಿನಿಂದ ರವಿ ರಾಥೋಡ್ ಸುರಕ್ಷಿತವಾಗಿ ಮನೆ ಸೇರಿದ್ದಾರೆ. ಈ ರೋಚಕ ಕಾರ್ಯಾಚರಣೆ ಹೀಗಿತ್ತು. 

 

Video Top Stories