Asianet Suvarna News Asianet Suvarna News

Kirik Shankar ಚಿತ್ರದ ಬಗ್ಗೆ ಲೂಸ್ ಮಾದ ಯೋಗಿ-ಅದ್ವಿಕಾ ರೆಡ್ಡಿ ಜತೆ ವಿಶೇಷ ಮಾತುಕತೆ!

'ಕಿರಿಕ್‌ ಶಂಕರ್‌' ಚಿತ್ರ ಈಗಾಗಲೇ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇದೀಗ ಈ ಚಿತ್ರದ ಬಗ್ಗೆ ಲೂಸ್ ಮಾದ ಯೋಗಿ, ಅದ್ವಿಕಾ ರೆಡ್ಡಿ, ಹಾಗೂ ಚಿತ್ರದ ನಿರ್ದೇಶಕ ಆರ್. ಅನಂತ್ ರಾಜು ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. 

'ಕಿರಿಕ್ ಶಂಕರ್' ಆಗಿ ಲೂಸ್ ಮಾದ ಯೋಗಿ ಥಿಯೇಟರ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡೋ ಸಿನಿಮಾಗಳು ಬರ್ತಿಲ್ಲ ಅನ್ನೋ ಮಾತುಗಳು ಪ್ರೇಕ್ಷಕರಿಂದ ಕೇಳಿಬರ್ತಿದೆ. ಆದ್ರೆ, ಲೂಸ್ ಮಾದ ಯೋಗಿ ಅಭಿನಯದ 'ಕಿರಿಕ್ ಶಂಕರ್' ಸಿನಿಮಾ ಮಾತ್ರ ಪಕ್ಕಾ ಕ್ರಿಯೇಟಿವ್ ಆಂಡ್ ಮೆಸೇಜ್ ಓರಿಯಂಟೆಡ್ ಮೂವಿ ಅಂತಾನೇ ಹೇಳಬಹುದಾಗಿದೆ. ಇದೀಗ 'ಕಿರಿಕ್ ಶಂಕರ್' ಚಿತ್ರದ ಬಗ್ಗೆ ಲೂಸ್ ಮಾದ ಯೋಗಿ, ನಾಯಕಿ ಅದ್ವಿಕಾ ರೆಡ್ಡಿ, ಚಿತ್ರದ ನಿರ್ದೇಶಕ ಆರ್. ಅನಂತ್ ರಾಜು ಸೇರಿದಂತೆ ಚಿತ್ರದಲ್ಲಿ ಕಾಣಿಸಿಕೊಂಡಿರುವ ಸಹ ನಟರು ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. 

Naveen Shankar: "ಕ್ಷೇತ್ರಪತಿ" ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭಕೋರಿದ ಡಾಲಿ!

ಚಿತ್ರದ ಕಥೆ, ಅದ್ದೂರಿ ಮೇಕಿಂಗ್‌, ಹಾಡುಗಳು, ಪಂಚ್‌ ಡೈಲಾಗ್‌ಗಳು ಹಾಗೂ ಕಚಗುಳಿಯಿಡುವ ಹಾಸ್ಯ ದೃಶ್ಯಗಳು ಸೇರಿದಂತೆ ತಮ್ಮ ಪಾತ್ರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು  ‘ಇದು ಕೌಟುಂಬಿಕ ಸಿನಿಮಾ. ಇಬ್ಬರು ತಂಗಿಯರ ಜವಾಬ್ದಾರಿ ಹೊತ್ತುಕೊಂಡಿರುವ ಅಣ್ಣನ ಕತೆ ಇಲ್ಲಿದೆ. ನಗರದಿಂದ ದೂರ ಇರುವ ಪ್ರದೇಶದ ಹಿನ್ನೆಲೆಯಲ್ಲಿ ಚಿತ್ರ ಸಾಗುತ್ತದೆ. ಕುಟುಂಬದ ಜವಾಬ್ದಾರಿ ಹೊರಬೇಕಾದ ಮನೆಯ ಮಗ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದಿದ್ದಾಗ ಏನಾಗುತ್ತದೆ, ನಾಯಕನ ಜೀವನದಲ್ಲಿ ನಾಯಕಿ ಪ್ರವೇಶ ಆದ ಮೇಲೆ ಏನೆಲ್ಲ ನಡೆಯುತ್ತದೆ ಎಂಬುದು ಚಿತ್ರದ ಕತೆ’. ಎಂ.ಎನ್. ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies