Asianet Suvarna News Asianet Suvarna News

ಉಡುಪಿ: 256 ಅನರ್ಹ ಬಿಪಿ​ಎಲ್‌ ಕಾರ್ಡ್‌​ದಾ​ರರ ವಿರುದ್ಧ ಕ್ರಮ

ಹಲವು ಬಾರಿ ಅನರ್ಹರು ಬಿಪಿಎಲ್ ಕಾರ್ಡ್ ಹಿಂದಿರುಗಿಸುವಂತೆ ಸೂಚಿಸಿದರೂ, ಇನ್ನೂ ಬಿಪಿಎಲ್ ಕಾರ್ಡ್‌ ಹಿಂದಿರುಗಿಸದೇ ಇರುವವರ ವಿರುದ್ಧ ಕ್ರಮ ಕೖಗೊಳ್ಳಲಾಗುತ್ತಿದೆ. ಇದುವರೆಗೆ ಕೇವಲ 665 ಅನರ್ಹ ಕಾರ್ಡುದಾರರು ಮಾತ್ರ ಸ್ವ-ಇಚ್ಛೆಯಿಂದ ಬಿಪಿಎಲ್‌ ಪಡಿತರ ಚೀಟಿಗಳನ್ನು ಹಿಂದಿರುಗಿಸಿದ್ದು, ರದ್ದುಪಡಿಸಲಾಗಿದೆ.

action against those who not canceled bpl card
Author
Bangalore, First Published Oct 26, 2019, 8:00 AM IST

ಉಡು​ಪಿ(ಅ.26): ಜಿಲ್ಲೆಯಲ್ಲಿ ನಿಯಮಾವಳಿಗಳಿಗೆ ವಿರುದ್ಧವಾಗಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದ 256 ಮಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಗದೀಶ್‌ ಹೇಳಿದ್ದಾರೆ.

ಅನರ್ಹರು ಹೊಂದಿರುವ ಬಿಪಿಎಲ್‌ ಪಡಿತರ ಚೀಟಿಗಳನ್ನು ಹಿಂದಿರುಗಿಸುವಂತೆ ಈಗಾಗಲೇ ಅನೇಕ ಬಾರಿ ಎಚ್ಚರಿಕೆ ನೀಡಿದರೂ, ಇದುವರೆಗೆ ಕೇವಲ 665 ಅನರ್ಹ ಕಾರ್ಡುದಾರರು ಮಾತ್ರ ಸ್ವ-ಇಚ್ಛೆಯಿಂದ ಬಿಪಿಎಲ್‌ ಪಡಿತರ ಚೀಟಿಗಳನ್ನು ಹಿಂದಿರುಗಿಸಿದ್ದು, ರದ್ದುಪಡಿಸಲಾಗಿದೆ.

ಕೆರಳಿದ ಕ್ಯಾರ್: ಕರಾವಳಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ...

ಆದ​ರೆ, ನಿಯಮಾವಳಿಗಳಂತೆ ಸ್ವಂತ ನಾಲ್ಕು ಚಕ್ರದ ವಾಹನ ಹೊಂದಿರುವ 256 ಅನರ್ಹ ಕಾರ್ಡುದಾರರನ್ನು ಸಾರಿಗೆ ಇಲಾಖೆ ಸಹಕಾರದೊಂದಿಗೆ ಪತ್ತೆ ಹಚ್ಚಿ, ರದ್ದುಪಡಿಸಿ ಅವರ ಮೇಲೆ ಕಾನೂನು ಕ್ರಮ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಇನ್ನೂ ಸಾಕಷ್ಟುಅನರ್ಹರು ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಂತಹ ಅನರ್ಹ ಕಾರ್ಡುದಾರರು ಸ್ವ-ಇಚ್ಛೆಯಿಂದ ಪಡಿತರ ಚೀಟಿಗಳನ್ನು ಇಲಾಖೆಗೆ ಹಿಂದಿರುಗಿಸಲು ಅ.31ರ ವರೆಗೆ ಅವಕಾಶ ನೀಡಲಾಗಿದೆ. ನಂತರದ ದಿನಗಳಲ್ಲಿ ಇಲಾಖೆಯ ಮುಖಾಂತರ ಪತ್ತೆ ಹಚ್ಚಿದಾಗ ಕಂಡು ಬರುವ ಅನರ್ಹ ಪಡಿತರ ಚೀಟಿದಾರರಿಂದ ಅವರು, ಇದುವರೆಗೆ ಪಡೆದಿರುವ ಪಡಿತರ ವಸ್ತುಗಳ ಮೌಲ್ಯವನ್ನು ಮುಕ್ತ ಮಾರುಕಟ್ಟೆದರದಲ್ಲಿ ದಂಡವಾಗಿ ವಸೂಲಿ ಮಾಡಲಾಗುವುದು ಮತ್ತು ಕರ್ನಾಟಕ (ಅನಧಿಕೃತ ಪಡಿತರ ಚೀಟಿಗಳ ಹೊಂದುವಿಕೆ ತಡೆ) ಆದೇಶ 1977 ಮತ್ತು ಭಾರತೀಯ ದಂಡ ಸಂಹಿತೆ ಕಲಂ 420 ರ ಅಡಿಯಲ್ಲಿ ಕ್ರಿಮಿನಲ್‌ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನರ್ಹ ಶಾಸಕರು ಸಮಾಜ ರಕ್ಷಕರು ಎಂದ ಡಿಸಿಎಂ

Follow Us:
Download App:
  • android
  • ios