ಟ್ರೋಲ್ ಆಗುತ್ತಿದೆ ಅರವಿಂದ್ ಕೆಪಿ ಹಳೆ ಎಪಿಸೋಡ್ ಫೋಟೋ. ಚಕ್ರವರ್ತಿ ಮಾತ್ರ ಮಿಡಲ್ ಫಿಂಗರ್ ತೋರಿಸಿಲ್ಲ. ಸುದೀಪ್ ನ್ಯಾಯ ಕೊಡಿಸಬೇಕು. 

ಬಿಗ್ ಬಾಸ್‌ ಮನೆಯಲ್ಲಿ ಈವರೆಗೂ ಯಾರೂ ತೋರಿಸದ ವರ್ತನೆ ಚಕ್ರವರ್ತಿ ಚಂದ್ರಚೂಡ್ ತೋರಿಸಿದ್ದರು ಎಂದು ಮನೆಯಲ್ಲಿದ್ದ ಸದಸ್ಯರು, ವೀಕ್ಷಕರು ಹೇಳಿದರು ಆದರೆ ಹಿಂದಿನ ಎಪಿಡೋಸ್ ಒಂದರಲ್ಲಿ ಅರವಿಂದ್ ತೋರಿಸಿದ ಸನ್ನೆ ಮಾತ್ರ ಹೈಲೈಟ್ ಮಾಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಿವ್ಯಾ- ಅರವಿಂದ್ ಒಂದೇ ಬಣ್ಣದ ಬಟ್ಟೆ, ಡಿಸೈನ್‌ ನೋಡಿ ನೆಟ್ಟಿಗರು ಶಾಕ್?

ಹೌದು! ಗುಂಪಿನ ಆಟವೊಂದರಲ್ಲಿ ಎದುರಾಳಿ ತಂಡ ಎಸೆದ ಬಾಲನ್ನು ಹಿಡಿದುಕೊಂಡ ಅರವಿಂದ್ ಕೆಪಿ ಅವರಿಗೆ ಮಿಡಲ್ ಫಿಂಗರ್ ತೋರಿಸುತ್ತಾರೆ. ಈ ಸನ್ನಿಯನ್ನು ಆ ಎಪಿಸೋಡ್ ಪ್ರಸಾರವಾದಾಗಲೂ ತೋರಿಸಲಾಗಿದೆ ಆದರೆ ಕ್ಯಾಮೆರಾದಲ್ಲಿ ಅದನ್ನು ಹೈಲೈಟ್ ಮಾಡಿಲ್ಲ. ಒಬ್ಬರಿಗೆ ಒಂದು ನ್ಯಾಯ ಯಾಕೆ ಎಂದು ಟ್ರೋಲ್ ಪೇಜ್‌ಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್ ಮನೆಯಿಂದ ಹೊರ ಹೋಗುವ ಮುನ್ನ ಚಕ್ರವರ್ತಿ ಚಂದ್ರಚೂಡ್‌ರನ್ನು ನೇರವಾಗಿ ನಾಮಿನೇಟ್ ಮಾಡಿದಕ್ಕೆ ಮಿಡಲ್ ಫಿಂಗರ್‌ ತೋರಿಸಿದ್ದನ್ನು ಕ್ಯಾಮೆರಾ ಝೂಮ್ ಮಾಡಿತ್ತು. ಆದರೆ ಈ ಘಟನೆಯನ್ನು ನಿರ್ಲಕ್ಷ್ಯ ಮಾಡಿದ್ದು ಯಾಕೆ? ಇದನ್ನು ಕೂಡ ಹೈಲೈಟ್ ಮಾಡಬಹುದಿತ್ತು. ನ್ಯಾಯದ ಪರವಾಗಿ ಮಾತನಾಡುವ ಸುದೀಪ್ ಇದನ್ನು ಪ್ರಶ್ನೆ ಮಾಡಲಿ ಎನ್ನುತ್ತಿದ್ದಾರೆ ನೆಟ್ಟಿಗರು.