ಖ್ಯಾತ ಕಿರುತೆರೆ ನಟನಿಗೆ ಟ್ರಾವೆಲ್ ಕಂಪನಿಯಿಂದ ಮೋಸ!
ಕಿರುತೆರೆಯ ಖ್ಯಾತ ನಟ ಶ್ರೀನಾಥ್ ವಸಿಷ್ಠಗೆ ಖಾಸಗಿ ಕಂಪನಿಯೊಂದು ವಿದೇಶ ಪ್ರವಾಸ ಕರೆದೊಯ್ಯುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿದೆ.
ಶ್ರೀನಾಥ್ ಹಾಗೂ ಅವರ 19 ಸ್ನೇಹಿತರು ಸಿಂಗಾಪುರ್ ಮತ್ತು ರಾಯಲ್ ಕೆರಿಬಿಯನ್ಗೆ ಪ್ರವಾಸ ಕರೆದುಕೊಂಡು ಹೋಗುತ್ತೇನೆಂದು ಹೇಳಿ ಮೈಸೂರಿನ ಖಾಸಗಿ ಟ್ರಾವಲ್ ಏಜೆನ್ಸಿ ಇವರಿಂದ 58 ಸಾವಿರ ಹಣ ಪಡೆದು ಮೋಸ ಮಾಡಿದೆ.
ಇವರ ಪ್ರವಾಸ ಪ್ಯಾಕೇಜ್ 8 ದಿನ ಹಾಗೂ ೭ ರಾತ್ರಿಗಳದ್ದಾಗಿದ್ದು ಒಬ್ಬರಿಂದ 58 ಸಾವಿರ ಪಡೆದಿದೆ. ಏಜೆನ್ಸಿ ಮಾಲಿಕರು ಪ್ರವೇಶದ ಟಿಕೆಟ್ ಕಳುಹಿಸಿದ ಕಾರಣ ಇವರು ಹಾಗೂ ಇವರ ಸ್ನೇಹಿತರು ಏಜನ್ಸಿ ಮೇಲೆ ಅಪಾರ ನಂಬಿಕೆ ಇಟ್ಟರು. ಒಟ್ಟಾರೆ 8 ಲಕ್ಷ ಮೋಸವಾಗಿದ್ದು ಇದುವರೆಗೂ ಮಾಲಿಕರು ಒತ್ತಾಯದ ಮೇರೆಗೆ 3 ಲಕ್ಷ ವಾಪಸ್ ನೀಡಿದ್ದಾರೆ.
ಕರೆದರೆ ಸಾಕು ಪ್ರಸಾದ ತಿಂದು ಹೋಗೋ ಮೊಸಳೆ!
ಉಳಿದ ಹಣವನ್ನು ಹಿಂತಿರುಗಿಸಲೂ ಸಮಯ ಕೇಳಿದ್ದರು. ಆದರೆ ವರ್ಷವಾದರೂ ನೀಡದ ಕಾರಣ ವಕೀಲರ ಸಹಾಯ ಪಡೆದು ನೋಟಿಸ್ ನೀಡಲಾಗಿದೆ.