Asianet Suvarna News Asianet Suvarna News

ವಿಷ್ಣು ಸ್ಮಾರಕ ಎಲ್ಲಿ : ಫೈನಲ್ ನಿರ್ಧಾರ ತಿಳಿಸಿದ ಅನಿರುದ್ಧ್

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಬಗ್ಗೆ ವಿಷ್ಣು ಅಳಿಯ ಅನಿರುದ್ಧ್ ತಮ್ಮ ನಿರ್ಧಾರ ತಿಳಿಸಿದ್ದು, ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. 

Vishnu Memorial Will Build In Mysore Says Aniruddh
Author
Bengaluru, First Published Feb 4, 2019, 11:32 AM IST

ಮೈಸೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಸ್ಥಾಪನೆಯಾಗುವುದು ಖಚಿತ ಎಂದು ನಟ ವಿಷ್ಣುವರ್ಧನ್ ಅಳಿಯ ಅನಿರುದ್ಧ ತಿಳಿಸಿದ್ದಾರೆ. 

ನಗರದಲ್ಲಿ ನಡೆದ ‘ಹೆಜ್ಜೆ- ಗೆಜ್ಜೆ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ’ಯಲ್ಲಿ ಮಾತನಾಡಿದ ಅವರು, ನಾನು ಕಾರ್ಯಕ್ರಮಕ್ಕೆ ಆಗಮಿಸುವಾಗ ಆಪ್ತಮಿತ್ರ ಚಿತ್ರದ ಗೀತೆ, ವಿಡಿಯೋವನ್ನು ಪ್ರದರ್ಶಿಸಿದ್ದು ಅಪ್ಪಾಜಿ ನೆನಪು ತರಿಸಿತು. 

ಇಲ್ಲಿನ ಅಭಿಮಾನಿಗಳು ಸ್ಮಾರಕದ ಬಗ್ಗೆ ವಿಚಾರಿಸಿದ್ದಾರೆ. ಖಂಡಿತಾ ಮೈಸೂರಿನಲ್ಲಿ ಸ್ಮಾರಕ ಸಿದ್ಧವಾಗಲಿದೆ ಎಂದು ಭರವಸೆ ನೀಡಿದರು.

Follow Us:
Download App:
  • android
  • ios