ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರು ತಮ್ಮ  ಹುಟ್ಟೂರಿಗೆ ಕಳೆದ 15 ವರ್ಷಗಳ ಹಿಂದೆ ಭೇಟಿ ನೀಡಿದ್ದೆ ಕೊನೆ. ಮತ್ತೆ ಅತ್ತ ಹೋಗಿರಲಿಲ್ಲ. 

ತುಮಕೂರು : ಸಿದ್ಧಗಂಗಾ ಸ್ವಾಮೀಜಿ ಹುಟ್ಟೂರು ವೀರಾಪುರ ಗ್ರಾಮಕ್ಕೆ ಕೊನೇ ಬಾರಿ ಭೇಟಿ ನೀಡಿದ್ದು 2003 ರ ಅಕ್ಟೋಬರ್ ತಿಂಗಳಲ್ಲಿ.

Add Asianetnews Kannada as a Preferred SourcegooglePreferred

ಗ್ರಾಮದ ಶಾಲೆಗೆ ಜಾಗ ಕಡಿತೆ ಇದ್ದದನ್ನು ಗಮನಿಸಿದ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರಯ್ಯ ಅವರು, ಗ್ರಾಮಸ್ಥರ ನೆರವು ಪಡೆದು ಒಂದಿಷ್ಟು ಜಾಗವನ್ನು ಪಡೆದು ಶಾಲೆಗೆ ಕಾಂಪೌಂಡ್‌ವೊಂದನ್ನು ನಿರ್ಮಿಸಿದ್ದರು. ಅದರ ಉದ್ಘಾಟನೆಗೆ ಶ್ರೀಗಳನ್ನು ಆಹ್ವಾನಿಸಿದ್ದರು.

ಶ್ರೀಗಳು ಐಕ್ಯರಾಗುವ ಗದ್ದುಗೆ ವಿಶೇಷತೆ ಏನು..?

ಅಂದು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ್ದೇ ಕೊನೆ, ಇದಾದ ಬಳಿಕ ಶ್ರೀಗಳು ತಮ್ಮ ಸ್ವಗ್ರಾಮವಾದ ವೀರಾಪುರಕ್ಕೆ ಅವರು ಬರಲಿಲ್ಲ.