ಮಾರ್ಚ್ 1 ರಂದು ನಡೆದಿದ್ದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹುಡುಕಾಟ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ, ಶಂಕಿತನನ್ನು ಬಂಧಿಸಿ ನ್ಯಾಯ ಕೊಡಿಸಲು ನೆರವಾಗುವವರಿಗೆ ರೂ. 10 ಲಕ್ಷ ಬಹುಮಾನ ಘೋಷಿಸಿದೆ.

ಬೆಂಗಳೂರು (ಮಾ.9): ಮಾರ್ಚ್ 1 ರಂದು ನಡೆದಿದ್ದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹುಡುಕಾಟ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ, ಶಂಕಿತನನ್ನು ಬಂಧಿಸಿ ನ್ಯಾಯ ಕೊಡಿಸಲು ನೆರವಾಗುವವರಿಗೆ ರೂ. 10 ಲಕ್ಷ ಬಹುಮಾನ ಘೋಷಿಸಿದೆ.

Add Asianetnews Kannada as a Preferred SourcegooglePreferred

ಸ್ಫೋಟದ ನಂತರ ಈ ಅಸ್ಪಷ್ಟ ವ್ಯಕ್ತಿಯ ಮಸುಕಾದ ವೀಡಿಯೊ ಮತ್ತು ಫೋಟೋಗಳು ಟಿವಿ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದವು. ಆದರೆ, ಎನ್‌ಐಎ ಬಹುಮಾನ ಘೋಷಿಸಿದ ಒಂದು ದಿನದ ನಂತರ, ಶಂಕಿತನ ರೇಖಾಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ರಾಮೇಶ್ವರಂ ಕೆಫೆ ಬಾಂಬರ್ ಕ್ಲಿಯರ್ ಪಿಕ್ಚರ್ ಬಿಡುಗಡೆ ಮಾಡಿದ ಎನ್‌ಐಎ!

ಈ ರೇಖಾಚಿತ್ರಗಳನ್ನು ಎನ್‌ಐಎ ಅಥವಾ ಪೊಲೀಸರಿಂದ ಅಧಿಕೃತಗೊಳಿಸದ ಜನರು ರಚಿಸಿದ್ದಾರೆ. ಮುಖದ ವೈಶಿಷ್ಟ್ಯಗಳ ರೇಖಾಚಿತ್ರ ಬಿಡಿಸುವ ಪ್ರತಿಭೆಯೊಂದಿಗೆ ಸಾಮಾನ್ಯ ಜನರು ದುಷ್ಕರ್ಮಿಯನ್ನು ಪತ್ತೆ ಹಚ್ಚಲು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ರೇಖಾಚಿತ್ರಗಳು ವೈರಲ್ ಆಗಿವೆ. ಇದು ಅಮಾಯಕ ವ್ಯಕ್ತಿಗಳ ಟಾರ್ಗೆಟ್ ಗೆ ಕಾರಣವಾಗಬಹುದು. ರೇಖಾಚಿತ್ರಗಳನ್ನು ಹೋಲುವ ಸಾವಿರಾರು ಮುಗ್ದರು, ಸಂಭಾವ್ಯ ಕಿರುಕುಳ, ಆಕ್ರಮಣ, ಅಥವಾ ವಿಚಾರಣೆಗಾಗಿ ಸೆರೆವಾಸಕ್ಕೆ ಗುರಿಯಾಗುವಂತೆ ಮಾಡಿದೆ.

Rameshwaram Cafe Blast: ಅದ್ಧೂರಿಯಾಗಿ ಪುನಾರಂಭಗೊಂಡ ದಿ ರಾಮೇಶ್ವರಂ ಕೆಫೆ..! ಬಾಂಬ್ ಸದ್ದು ಕೇಳಿದಲ್ಲೇ ಮಂತ್ರಘೋಷ..!

ಸಮಸ್ಯೆಗಳು: ಅಸ್ಪಷ್ಟ ಚಿತ್ರಗಳು ಮತ್ತು ವೀಡಿಯೋಗಳು ಹೆಚ್ಚಿನ ಊಹೆಮಾಡಲಾದ ರೇಖಾಚಿತ್ರಗಳಿಗೆ ಕಾರಣವಾಗಿವೆ. ಟೋಪಿ, ಕನ್ನಡಕ ಮತ್ತು ಗಡ್ಡವನ್ನು ಹೊಂದಿರುವ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿರುವ ರೇಖಾಚಿತ್ರಗಳಿಂದ ಯಾವುದೇ ಜನರನ್ನು ಶಂಕಿತರೆಂದು ಭಾವಿಸಬಹುದು. ಸಾಮಾನ್ಯವಾಗಿ, ತನಿಖೆಗಳು ತನಿಖಾಧಿಕಾರಿಗಳಿಂದ ಅಧಿಕಾರ ಪಡೆದ ಸ್ಕೆಚ್ ಕಲಾವಿದರನ್ನು ಒಳಗೊಂಡಿರುತ್ತವೆ. ಈ ಅಧಿಕೃತ ಸ್ಕೆಚ್ ಕಲಾವಿದರು ಪ್ರತ್ಯಕ್ಷದರ್ಶಿಗಳು ನೀಡಿದ ವಿವರಣೆಗಳ ಆಧಾರದ ಮೇಲೆ ಮುಖದ ವೈಶಿಷ್ಟ್ಯಗಳನ್ನು ತೋರಿಸುತ್ತಾರೆ. ಆದರೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳು ಯಾರೂ ಇರಲಿಲ್ಲ, ಏಕೆಂದರೆ ಸ್ಫೋಟ ಸಂಭವಿಸಿದ ನಂತರ ವಿವರಗಳು ಹೊರಬಂದವು.