Asianet Suvarna News Asianet Suvarna News

ಬಿಜೆಪಿಯದು ತೋಳ ಬಂತು ತೋಳ ಕಥೆ: ಪ್ರಿಯಾಂಕ್‌ ಖರ್ಗೆ

ಬಿಜೆಪಿಯದು ತೋಳ ಬಂತು ತೋಳ ಕಥೆ: ಪ್ರಿಯಾಂಕ್‌ ಖರ್ಗೆ ಲೇವಡಿ

Priyank Kharge says BJP is simply spreading the rumours
Author
Bangalore, First Published Jan 16, 2019, 9:01 AM IST

ಬೆಂಗಳೂರು[ಜ.16]: ಬಿಜೆಪಿಯವರ ಆಪರೇಷನ್‌ ಕಮಲ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಗಳೆಲ್ಲವೂ ‘ತೋಳ ಬಂತು ತೋಳ ಕಥೆ’ ಇದ್ದಂತೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದ್ದಾರೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಬಳಿ ಸಾಕಷ್ಟುಶಾಸಕರ ಸಂಖ್ಯಾಬಲ ಇಲ್ಲದಿದ್ದರೂ ಆಗಾಗ ಸರ್ಕಾರ ರಚನೆಗೆ ಅಸಾಂವಿಧಾನಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಈಗಲೂ ಹಿಂಬಾಗಿಲಿನಿಂದ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನಗಳೆಲ್ಲವೂ ತೋಳ ಬಂತು ತೋಳ ಕಥೆಯಂತಾಗಿದೆ. ಸಾಂವಿಧಾನಿಕವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಅವರ ಜೊತೆ ಹದಿನೈದು ಶಾಸಕರಂತೂ ಹೋಗೋದಿಲ್ಲ. ಮೂರ್ನಾಲ್ಕು ಮಂದಿ ಹೋಗಿರಬಹುದು. ಬಿಜೆಪಿ ತಂತ್ರಕ್ಕೆ ಪ್ರತ್ಯುತ್ತರ ಕೊಡಲು ನಾವೂ ಸಿದ್ಧರಿದ್ದೇವೆ ಎಂದು ಹೇಳಿದರು.

Follow Us:
Download App:
  • android
  • ios