ಹೊಸ ವಂದೇ ಭಾರತ್‌ ರೈಲುಗಳು ಮಂಗಳೂರು-ಮಡ್ಗಾಂವ್‌ (ಗೋವಾ) ಹಾಗೂ ಬೆಂಗಳೂರು-ಕೊಯಮತ್ತೂರು ನಡುವೆ, ಅಮೃತ ಭಾರತ್‌ ರೈಲು ಮಾಲ್ಡಾ-ಬೆಂಗಳೂರು ನಡುವೆ ಸಂಚರಿಸಲಿವೆ.

ಮಂಗಳೂರು/ಬೆಂಗಳೂರು(ಡಿ.30):  ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸಲಿರುವ ಮತ್ತೆರಡು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಹಾಗೂ ಹೊಚ್ಚ ಹೊಸ ಮಾದರಿಯ ಒಂದು ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ವರ್ಚುವಲ್‌ ಆಗಿ ಶನಿವಾರ ಚಾಲನೆ ನೀಡಲಿದ್ದಾರೆ.

ಹೊಸ ವಂದೇ ಭಾರತ್‌ ರೈಲುಗಳು ಮಂಗಳೂರು-ಮಡ್ಗಾಂವ್‌ (ಗೋವಾ) ಹಾಗೂ ಬೆಂಗಳೂರು-ಕೊಯಮತ್ತೂರು ನಡುವೆ, ಅಮೃತ ಭಾರತ್‌ ರೈಲು ಮಾಲ್ಡಾ-ಬೆಂಗಳೂರು ನಡುವೆ ಸಂಚರಿಸಲಿವೆ.

ಬೆಂಗ್ಳೂರಿಗೆ ಬಂತು 5ನೇ ವಂದೇ ಭಾರತ್ ರೈಲು: ಪ್ರಾಯೋಗಿಕ ಸಂಚಾರ ಯಶಸ್ವಿ

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ

ದೇಶದಲ್ಲಿ ಇದೇ ಮೊದಲ ಬಾರಿ ಸಂಚಾರ ಆರಂಭಿಸಲಿರುವ ‘ಅಮೃತ ಭಾರತ್‌’ ಮಾದರಿಯ 2 ರೈಲಿನ ಪೈಕಿ ಕರ್ನಾಟಕಕ್ಕೆ 1 ರೈಲು ಲಭಿಸಿರುವ ಬಗ್ಗೆ ಕನ್ನಡಪ್ರಭ ನಿನ್ನೆ ವರದಿ ಪ್ರಕಟಿಸಿತ್ತು.