ಮರಿಯಾನೆ ಜತೆ ಸೆಲ್ಫಿಗೆ ಮುಗಿಬಿದ್ದರು| ತಮಿಳುನಾಡಿನ ಶ್ಯಾನಮಾವು ಬಳಿಯ ಕೆರೆಯಂಗಳದಲ್ಲಿ ಘಟನೆ

ಆನೇಕಲ್‌[ಜ.28]: ಹಿಂಡಿನಿಂದ ಬೇರ್ಪಟ್ಟಮರಿಯಾನೆಯೊಂದು ತಮಿಳುನಾಡಿನ ಶ್ಯಾನಮಾವು ಬಳಿಯ ಕೆರೆಯಂಗಳದಲ್ಲಿ ಸೋಮವಾರ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಜನ ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಮಾರು ಎರಡು ವರ್ಷದ ಆನೆ ಮರಿಯೊಂದು ಕೆರೆ ಅಂಗಳದಲ್ಲಿ ಓಡಾಡಿಕೊಂಡು ನೀರನ್ನು ತನ್ನ ಮೈಮೇಲೆ ಹಾಕಿಕೊಳ್ಳುತ್ತಾ, ಆಟವಾಡುತ್ತಿತ್ತು. ಈ ಮನಮೋಹಕ ದೃಶ್ಯವನ್ನು ಕಂಡ ಗ್ರಾಮಸ್ಥರು ಆನೆ ಮರಿಯ ಸಮೀಪಕ್ಕೆ ಹೋಗಲು ಯತ್ನಿಸಿದ್ದಾರೆ. ಸ್ವಲ್ಪ ವಿಚಲಿತವಾದ ಆನೆ ಮರಿ ಅತ್ತ-ಇತ್ತ ಓಡಲು ಶುರು ಮಾಡಿತು.

ಜಂಟಲ್‌ಮನ್ ಆನೆಗಳಿಗೆ ದಾರಿ ಬಿಡುವುದು ಮನುಷ್ಯನ ಕರ್ತವ್ಯ: ಸುಪ್ರೀಂಕೋರ್ಟ್!

ಕೂಡಲೇ ಅರಣ್ಯ ಇಲಾಖೆಗೆ ಕರೆ ಮಾಡಿದ ಸ್ಥಳೀಯರು ಆನೆ ಮರಿ ರಕ್ಷಿಸುವಂತೆ ತಿಳಿಸಿದ್ದಾರೆ. ಆದರೆ ಸಂಜೆಯಾದರೂ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದತ್ತ ಸುಳಿಯಲಿಲ್ಲ ಎಂದು ತಿಳಿದುಬಂದಿದೆ.