Asianet Suvarna News Asianet Suvarna News

ಅಪ್ಪಾಜಿ ಕ್ಯಾಂಟೀನ್‌ನಲ್ಲಿ 1 ರು.ಗೆ ಊಟ: ರೋಗ ನಿರೋಧಕ ಹೆಚ್ಚಿಸುವ ಆಹಾರ ಲಭ್ಯ

'ನಮ್ಮ ಅಪ್ಪಾಜಿ ಕ್ಯಾಂಟೀನ್‌’ಗೆ ಇದೀಗ ಮೂರು ವರ್ಷದ ಸಂಭ್ರಮ| ಇಂದು ಮಧ್ಯಾಹ್ನ 12ರಿಂದ ಒಂದು ರು.ಗೆ ಊಟ ವಿತರಣೆ| ಕ್ಯಾಂಟೀನ್‌ಲ್ಲಿ ಸ್ಯಾನಿಟೈಸರ್‌, ಸ್ವಚ್ಛತೆ ಹಾಗೂ ಕೋವಿಡ್‌ ಸುರಕ್ಷಾ ಕ್ರಮಗಳ ಪಾಲನೆ| 

One Rs Meal in Appaji Canteen in Bengaluru
Author
Bengaluru, First Published Aug 6, 2020, 8:26 AM IST

ಬೆಂಗಳೂರು(ಆ.06): ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೆಸರಿನಲ್ಲಿ ಹನುಮಂತನಗರದಲ್ಲಿ ಆರಂಭಿಸಲಾಗಿರುವ ‘ನಮ್ಮ ಅಪ್ಪಾಜಿ ಕ್ಯಾಂಟೀನ್‌’ಗೆ ಇದೀಗ ಮೂರು ವರ್ಷದ ಸಂಭ್ರಮ.

ಈ ಹಿನ್ನೆಲೆಯಲ್ಲಿ ಇಂದಿನಿಂದ(ಗುರುವಾರ) ಮಧ್ಯಾಹ್ನ 12ರಿಂದ ಒಂದು ರು.ಗೆ ಊಟ ವಿತರಿಸಲಾಗುತ್ತದೆ. ಇನ್ನು ಮುಂದೆ ಈ ಕ್ಯಾಂಟೀನ್‌ನಲ್ಲಿ ರೋಗ ನಿರೋಧಕ ಹೆಚ್ಚಿಸುವ ಆಹಾರ ದೊರೆಯುತ್ತದೆ. ಸ್ಯಾನಿಟೈಸರ್‌, ಸ್ವಚ್ಛತೆ ಹಾಗೂ ಕೋವಿಡ್‌ ಸುರಕ್ಷಾ ಕ್ರಮಗಳನ್ನು ಪಾಲಿಸಲಾಗುವುದು ಎಂದು ಕ್ಯಾಂಟೀನ್‌ ಆರಂಭಿಸಿರುವ ಜೆಡಿಎಸ್‌ ಮುಖಂಡ ಟಿ.ಎ.ಶರವಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪ್ಪಾಜಿ ಕ್ಯಾಂಟೀನ್ ಇಂದು ಲೋಕಾರ್ಪಣೆ; ವಿಶೇಷತೆಗಳೇನು?

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಡವರಿಗೆ ಕಡಮೆ ದರದಲ್ಲಿ ಆಹಾರ ನೀಡಬೇಕು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಲಾಯಿತು. ಅದರ ಬೆನ್ನಲ್ಲೇ ಶರವಣ ಅವರು ದೇವೇಗೌಡರ ಮೇಲಿನ ಅಭಿಮಾನದಿಂದ ಅವರ ಹೆಸರಿನಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್‌ ಆರಂಭಿಸಿದ್ದರು.
 

Follow Us:
Download App:
  • android
  • ios