Asianet Suvarna News Asianet Suvarna News

'ನೈಟ್ ಟ್ರಾಫಿಕ್ ಬೇಡ' ಮೌನ ಪ್ರತಿಭಟನೆಗೆ ಯೂಸುಫ್ ಪಠಾಣ್ ಸಾಥ್

ಪರಿಸರವಾದಿ ಸುರೇಶ್ ಹೆಬ್ಳೀಕರ್, ಬಂಡೀಪುರ ಹೋರಾಟ ಕರ್ತೃ ರಾಜ್ ಕುಮಾರ್ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಯುತ್ತಿದ್ದು, ಬಂಡಿಪುರ ಟೋಲ್’ನಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ಮಾಡಿಕೊಟ್ಟರೆ ಪ್ರಾಣಿಗಳ ಜೀವಕ್ಕೆ ಅಪಾಯ ಎಂದು ಪರಿಸರವಾದಿಗಳ ಆಂತಕ ವ್ಯಕ್ತಪಡಿಸಿದ್ದಾರೆ. ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆ ತನಕ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕೋ, ಬೇಡವೋ ಎನ್ನುವ ಕುರಿತಂತೆ ಸುಪ್ರೀಂ ಕೋರ್ಟ್ ಇದೇ ನವೆಂಬರ್ 17ರಂದು ತೀರ್ಪು ನೀಡಲಿದೆ. 

No night traffic at Bandipura Cricketer Yusuf Pathan to join hands with protest
Author
Chamarajanagar, First Published Nov 10, 2018, 3:09 PM IST

ಬೆಂಗಳೂರು[ನ.10]: ಕರ್ನಾಟಕ-ಕೇರಳ ನಡುವೆ ಸಂಪರ್ಕ ಕಲ್ಪಿಸುವ ಬಂಡಿಪುರ ನೈಟ್ ಟ್ರಾಫಿಕ್’ಗೆ ಅನುಮತಿ ಬೇಡ ಎಂದು ಆಗ್ರಹಿಸಿ ಇಂದು ಪರಿಸರವಾದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿ’ಗಳು ನೈಟ್ ಟ್ರಾಫಿಕ್ ಬೇಡ ಎಂದು ಪ್ರೀಡಂ ಪಾರ್ಕ್’ನಲ್ಲಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಟೀಂ ಇಂಡಿಯಾ ಕ್ರಿಕೆಟಿಗ ಯೂಸುಫ್ ಪಠಾಣ್ ಕೂಡಾ ಸಾಥ್ ನೀಡಿದ್ದಾರೆ.

ಪರಿಸರವಾದಿ ಸುರೇಶ್ ಹೆಬ್ಳೀಕರ್, ಬಂಡೀಪುರ ಹೋರಾಟ ಕರ್ತೃ ರಾಜ್ ಕುಮಾರ್ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಯುತ್ತಿದ್ದು, ಬಂಡಿಪುರ ಟೋಲ್’ನಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ಮಾಡಿಕೊಟ್ಟರೆ ಪ್ರಾಣಿಗಳ ಜೀವಕ್ಕೆ ಅಪಾಯ ಎಂದು ಪರಿಸರವಾದಿಗಳ ಆಂತಕ ವ್ಯಕ್ತಪಡಿಸಿದ್ದಾರೆ. ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆ ತನಕ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕೋ, ಬೇಡವೋ ಎನ್ನುವ ಕುರಿತಂತೆ ಸುಪ್ರೀಂ ಕೋರ್ಟ್ ಇದೇ ನವೆಂಬರ್ 17ರಂದು ತೀರ್ಪು ನೀಡಲಿದೆ. 

ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಳಲು ಕೇರಳ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿತ್ತು. ಕೇರಳದ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ, ಈಗಾಗಲೇ ವಾಹನ ಸಂಚಾರಕ್ಕಾಗಿ ಬಂಡೀಪುರಲ್ಲಿ ಟೋಲ್ ನಿರ್ಮಿಸಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ವಿರೋಧಿಸಿ ಪರಿಸರವಾದಿಗಳು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಭಾರತ್ ಮಾಲ ಪ್ರಾಜೆಕ್ಟ್ ಯೋಜನೆಯಡಿ ಬಂಡಿಪುರದಲ್ಲಿ ಟೋಲ್ ರೆಡಿಯಾಗಿದೆ. ಕೇರಳ ಹಾಗೂ ಕರ್ನಾಟಕಕ್ಕೆ ರಸ್ತೆ ಮಾರ್ಗ ಕಲ್ಪಿಸುವ ಗುಂಡ್ಲುಪೇಟೆಯಲ್ಲಿ ಟೋಲ್ ನಿರ್ಮಾಣವಾಗಿದ್ದು, ಗುಂಡ್ಲುಪೇಟೆಯಿಂದ ಸುಲ್ತಾನ್ ಬಥೇರಿಗೆ ಹೋಗುವ ಮಾರ್ಗ ಮಧ್ಯೆ ಟೋಲ್ ನಿರ್ಮಾಣವಾಗಿದೆ. ಸುಮಾರು 30 ಕಿ.ಮೀ ಶಾರ್ಟ್ ಕಟ್ ರಸ್ತೆ ಇದಾಗಿದ್ದು, ಈ ಯೋಜನೆಗೆ ಕೇರಳದ ಪರಿಸರ ಸಂರಕ್ಷಣಾ ಸಂಸ್ಥೆ ಎಲಿವೇಟೆಡ್ ಕಾರಿಡಾರ್, ನೈಟ್ ಟ್ರಾಫಿಕ್ ಬ್ಯಾನ್’ಗೆ ಆಗ್ರಹಿಸಿದೆ.

Follow Us:
Download App:
  • android
  • ios