Asianet Suvarna News Asianet Suvarna News

ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಆಯ್ಕೆ

* ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಚುನಾವಣೆ
* ಶ್ರವಣಬೆಳಗೊಳದ ಶಾಸಕರಾದ ಸಿ.ಎನ್. ಬಾಲಕೃಷ್ಣಗೆ ಗೆಲುವು
* ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಎನ್. ಬಾಲಕೃಷ್ಣ

MLA CN Balakrishna Elected as president of Karnataka vokkaligara sangha rbj
Author
Bengaluru, First Published Jan 5, 2022, 5:13 PM IST

ಬೆಂಗಳೂರು, (ಜ.50): ರಾಜ್ಯ ಒಕ್ಕಲಿಗರ ಸಂಘದ (Vokkaligara Sangha) ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಸ್ಥಾನಗಳಗೆ ಇಂದು (ಜ.5ರ) ನಡೆದಿದ್ದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.

ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಶ್ರವಣಬೆಳಗೊಳದ ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರು ಆಯ್ಕೆಯಾಗಿದ್ದಾರೆ. 

 ಶ್ರವಣಬೆಳಗೊಳದ ಶಾಸಕ ಸಿ.ಎನ್‌.ಬಾಲಕೃಷ್ಣ ಹಾಗೂ ಸಂಘದ ಹಿಂದಿನ ಅಧ್ಯಕ್ಷ ಕೆಂಚಪ್ಪಗೌಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಆದ್ರೆ, ಅಂತಿಮವಾಗಿ ಶಾಸಕ  ಸಿ.ಎನ್. ಬಾಲಕೃಷ್ಣ ಗೆಲುವು ಸಾಧಿಸಿದ್ದಾರೆ.

Vokkaliga Sangha Poll Result: ಒಕ್ಕಲಿಗರ ಸಂಘದ ಎಲೆಕ್ಷನ್ ರಿಸಲ್ಟ್, ಇಲ್ಲಿದೆ ಗೆದ್ದವರ ಅಂತಿಮ ಪಟ್ಟಿ

 35 ನಿರ್ದೇಶಕರ ಪೈಕಿ 20 ನಿರ್ದೇಶಕರು ಬಾಲಕೃಷ್ಣ ಪರ ಮತ ಚಲಾಯಿಸಿದ್ದಾರೆ. ಇದರಿಂದ ಬಾಲಕೃಷ್ಟ ಅವರು ಬಹುಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.

ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿದ್ದ ಸಂಘದ ಮಾಜಿ ಅಧ್ಯಕ್ಷ ಬಿ. ಕೆಂಚಪ್ಪ ಗೌಡ 14 ಮತ ಪಡೆದು ಪರಾಜಿತಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಡಾ.ಕೆ.ವಿ.ರೇಣುಕಾಪ್ರಸಾದ್, ಹನುಮಂತಯ್ಯ, ಖಜಾಂಚಿಯಾಗಿ ಆರ್. ಪ್ರಕಾಶ್ ಮತ್ತು ಸಹಾಯಕ ಕಾರ್ಯದರ್ಶಿಯಾಗಿ ರಾಘವೇಂದ್ರ ಆಯ್ಕೆಯಾಗಿದ್ದಾರೆ‌. ಸಿ.ಎಲ್. ಬಾಲಕೃಷ್ಣ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬಾಲಕೃಷ್ಣ ಹಾಗೂ ಕೆಂಚಪ್ಪಗೌಡರ ತಂಡದ ನಿರ್ದೇಶಕರು ಪದಾಧಿಕಾರಿಗಳ ಚುನಾವಣೆಗೆ ಸ್ಪರ್ಧಿಸಿದ್ದರು. ಬಾಲಕೃಷ್ಣ ಅವರ ತಂಡದವರು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಒಕ್ಕಲಿಗರ ಸಂಘಕ್ಕೆ ಮೂರು ವರ್ಷಕ್ಕೂ ಹೆಚ್ಚು ಕಾಲದಿಂದ ಇದ್ದ ಆಡಳಿತಾಧಿಕಾರಿಗಳ ಅಧಿಕಾರಾವಧಿ ಕೊನೆಗೊಂಡಂತಾಗಿದೆ.

ಕೆಂಚಪ್ಪಗೌಡ ನೇತೃತ್ವದ ಸಿಂಡಿಕೇಟ್‌ನ 10 ಸದಸ್ಯರು ಗೆದ್ದಿದ್ದಾರೆ. ಆದರೆ ಸಿ.ಎನ್‌. ಬಾಲಕೃಷ್ಣ ಅವರು ಯಾವುದೇ ಸಿಂಡಿಕೇಟ್‌ ರಚನೆ ಮಾಡಿಕೊಂಡಿರಲಿಲ್ಲ. ಆದರೂ, ಗೆಲುವು ಸಾಧಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ವಿವಿಧ ಮುಖಂಡರ ನೇತೃತ್ವದಲ್ಲಿ ರಚನೆಯಾಗಿದ್ದ ಯಾವುದೇ ಸಿಂಡಿಕೇಟ್‌ ಬಹುಮತ ಪಡೆಯಲು ಬೇಕಾದ 18 ಸದಸ್ಯರನ್ನು ಗೆದ್ದಿರಲಿಲ್ಲ. ಕಳೆದ ಡಿ.12ರಂದು ನಡೆದ ಚುನಾವಣೆಯಲ್ಲಿ ಸಂಘದ 35 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಸಂಘದ ಎರಡು ಉಪಾಧ್ಯಕ್ಷ ಸ್ಥಾನ, ತಲಾ ಒಂದು ಪ್ರಧಾನ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಕ್ಕೆ  ಚುನಾವಣೆ ನಡೆದಿತ್ತು.

ಡಿಸೆಂಬರ್ 12ರಂದು ಚುನಾವಣೆಯಲ್ಲಿ ಆಯ್ಕೆಯಾಗಿದ್ದ 35 ಕಾರ್ಯಕಾರಿ ಸಮಿತಿ ಸದಸ್ಯರ ನಡುವೆ ಪದಾಧಿಕಾರಿಗಳ ಚುನಾವಣೆ ನಡೆದಿತ್ತು. ಪದಾಧಿಕಾರಿಗಳ ಚುನಾವಣೆಯಲ್ಲಿ ಆಯ್ಕೆಯಾಗಲು ಕನಿಷ್ಟ 18 ಕಾರ್ಯಕಾರಿ ಸದಸ್ಯರ ಮತ ಬೇಕಾಗಿತ್ತು.

ನಿರ್ದೇಶಕರ ಚುನಾವಣೆಯಲ್ಲಿ ಗೆದ್ದವರು
* ಮೈಸೂರು
ಕೆ.ವಿ.ಶ್ರೀಧರ್​- 12267 ಮತ
ಸಿ.ಜಿ.ಗಂಗಾಧರ್- 10174 ಮತ
ಎಂ.ಬಿ.ಮಂಜೇಗೌಡ- 8790 ಮತ

* ಮಂಡ್ಯ
ಅಶೋಕ್​ ಎಸ್​.ಡಿ.ಜಯರಾಮ್​- 55721 ಮತ
ಎನ್​.ಬಾಲಕೃಷ್ಣ- 38622 ಮತ
ಚಂದ್ರಶೇಖರ್​- 36628 ಮತ
ರಾಘವೇಂದ್ರ- 33986 ಮತ

* ಹಾಸನ
ಸಿ.ಎನ್​.ಬಾಲಕೃಷ್ಣ- 32311 ಮತ
ಎಸ್​.ಎಸ್​.ರುದ್ರೇಗೌಡ- 30555 ಮತ
ಬಿ.ಪಿ.ಮಂಜೇಗೌಡ- 20388 ಮತ

* ತುಮಕೂರು
ಹನುಮಂತರಾಯಪ್ಪ- 14901 ಮತ
ಲೋಕೇಶ್​ ಡಿ.ನಾಗರಾಜಯ್ಯ- 11027 ಮತ

* ಚಿತ್ರದುರ್ಗ
ಜೆ.ರಾಜು- 4074 ಮತ

* ಕೋಲಾರ ಮತ್ತು ಚಿಕ್ಕಬಳ್ಳಾಪುರ
ಡಾ.ಡಿ.ಕೆ.ರಮೇಶ್​- 40435 ಮತ
ಟಿ.ಕೋನಪ್ಪರೆಡ್ಡಿ- 32451 ಮತ
ಎಲುವಳ್ಳಿ ಎನ್​.ರಮೇಶ್​- 24676 ಮತ

* ದಕ್ಷಿಣ ಕನ್ನಡ ಮತ್ತು ಉಡುಪಿ
ಡಾ.ಕೆ.ವಿ.ರೇಣುಕಾಪ್ರಸಾದ್​-3309

* ಕೊಡಗು
ಎಚ್​.ಎನ್​.ರವೀಂದ್ರ- 9157

* ಶಿವಮೊಗ್ಗ ಮತ್ತು ಉತ್ತರ ಕನ್ನಡ
ಎಸ್​.ಕೆ.ಧಮೇಶ್​​- 5808 ಮತ

* ಚಿಕ್ಕಮಗಳೂರು
ಎ.ಪೂರ್ಣೇಶ್​- 20144 ಮತ

* ಬೆಂಗಳೂರು ಕ್ಷೇತ್ರ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ)
ಡಾ. ಅಂಜನಪ್ಪ- 68938
ಅಶೋಕ್ ತಮ್ಮಾಜಿ- 61893
ಕೆಂಚಪ್ಪಗೌಡ- 58066
ಆರ್ ಪ್ರಕಾಶ್- 56694
ಎಚ್.ಸಿ ಜಯಮುತ್ತು- 56254
ಹಾಪ್ ಕಾಮ್ಸ್ ದೇವರಾಜು- 55903


ಎಲ್.ಶ್ರೀನಿವಾಸ್- 49217
ಸಿ.ಎಂ ಮಾರೇಗೌಡ- 48492
ರಾಜಶೇಖರಗೌಡ- 46180
ಕೆ.ಎಸ್. ಸುರೇಶ್- 45601
ಉಮಾಪತಿ- 44709
ಚಕ್ಕೆರೆ ವೆಂಕಟರಾಮೇಗೌಡ- 43022
ಹನುಮಂತಯ್ಯ- 41687
ತೌಟನಹಳ್ಳಿ ಪುಟ್ಟಸ್ವಾಮಿ- 41165
ಡಾ. ನಾರಾಯಣಸ್ವಾಮಿ- 40728

Follow Us:
Download App:
  • android
  • ios