Asianet Suvarna News Asianet Suvarna News

Vokkaliga Sangha Poll Result: ಒಕ್ಕಲಿಗರ ಸಂಘದ ಎಲೆಕ್ಷನ್ ರಿಸಲ್ಟ್, ಇಲ್ಲಿದೆ ಗೆದ್ದವರ ಅಂತಿಮ ಪಟ್ಟಿ

* ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಫಲಿತಾಂಶ ಪ್ರಕಟ
*  ತೀವ್ರ ಕುತೂಹಲ ಮೂಡಿಸಿದ್ದ ಒಕ್ಕಲಿಗರ ಸಂಘ ಚುನಾವಣೆ
* ಒಟ್ಟು 35 ಸ್ಥಾನಗಳಿಗೆ ನಡೆದಿದ್ದ ಚುನಾವಣೆ

karnataka state vokkaligara sangha winners final list rbj
Author
Bengaluru, First Published Dec 16, 2021, 11:48 PM IST

ಬೆಂಗಳೂರು, (ಡಿ.16): ತೀವ್ರ ಕೂತೂಹಲ ಮೂಡಿಸಿದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ 35 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಹೊರಬಿದ್ದಿದೆ. 

ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರದ 15 ಸ್ಥಾನಗಳ ಮತ ಎಣಿಕೆ ಕಾರ್ಯ ಬೆಂಗಳೂರಿನ ಅರಮನೆ ಮೈದಾನದಲ್ಲಿನ ತ್ರಿಪುರ ವಾಸಿನಿ ಕಲ್ಯಾಣ ಮಂಟಪದಲ್ಲಿ ಬುಧವಾರ ರಾತ್ರಿ 10.30ರವರೆಗೂ ಮುಂದುವರಿದಿತ್ತು. ಅಂತಿಮವಾಗಿ ತಡರಾತ್ರಿ ಫಲಿತಾಂಶ ಪ್ರಕಟವಾದ್ದು, ವಿಜೇತರ ಪಟ್ಟಿ ಈ ಕೆಳಿನಂತಿದೆ.

ಗೆದ್ದವರ ಹೆಸರು ಮತ್ತು ಪಡೆದ ಮತಗಳ ವಿವರ
* ಮೈಸೂರು
ಕೆ.ವಿ.ಶ್ರೀಧರ್​- 12267 ಮತ
ಸಿ.ಜಿ.ಗಂಗಾಧರ್- 10174 ಮತ
ಎಂ.ಬಿ.ಮಂಜೇಗೌಡ- 8790 ಮತ

* ಮಂಡ್ಯ
ಅಶೋಕ್​ ಎಸ್​.ಡಿ.ಜಯರಾಮ್​- 55721 ಮತ
ಎನ್​.ಬಾಲಕೃಷ್ಣ- 38622 ಮತ
ಚಂದ್ರಶೇಖರ್​- 36628 ಮತ
ರಾಘವೇಂದ್ರ- 33986 ಮತ

* ಹಾಸನ
ಸಿ.ಎನ್​.ಬಾಲಕೃಷ್ಣ- 32311 ಮತ
ಎಸ್​.ಎಸ್​.ರುದ್ರೇಗೌಡ- 30555 ಮತ
ಬಿ.ಪಿ.ಮಂಜೇಗೌಡ- 20388 ಮತ

* ತುಮಕೂರು
ಹನುಮಂತರಾಯಪ್ಪ- 14901 ಮತ
ಲೋಕೇಶ್​ ಡಿ.ನಾಗರಾಜಯ್ಯ- 11027 ಮತ

* ಚಿತ್ರದುರ್ಗ
ಜೆ.ರಾಜು- 4074 ಮತ

* ಕೋಲಾರ ಮತ್ತು ಚಿಕ್ಕಬಳ್ಳಾಪುರ
ಡಾ.ಡಿ.ಕೆ.ರಮೇಶ್​- 40435 ಮತ
ಟಿ.ಕೋನಪ್ಪರೆಡ್ಡಿ- 32451 ಮತ
ಎಲುವಳ್ಳಿ ಎನ್​.ರಮೇಶ್​- 24676 ಮತ

* ದಕ್ಷಿಣ ಕನ್ನಡ ಮತ್ತು ಉಡುಪಿ
ಡಾ.ಕೆ.ವಿ.ರೇಣುಕಾಪ್ರಸಾದ್​-3309

* ಕೊಡಗು
ಎಚ್​.ಎನ್​.ರವೀಂದ್ರ- 9157

* ಶಿವಮೊಗ್ಗ ಮತ್ತು ಉತ್ತರ ಕನ್ನಡ
ಎಸ್​.ಕೆ.ಧಮೇಶ್​​- 5808 ಮತ

* ಚಿಕ್ಕಮಗಳೂರು
ಎ.ಪೂರ್ಣೇಶ್​- 20144 ಮತ

* ಬೆಂಗಳೂರು ಕ್ಷೇತ್ರ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ)
ಡಾ. ಅಂಜನಪ್ಪ- 68938
ಅಶೋಕ್ ತಮ್ಮಾಜಿ- 61893
ಕೆಂಚಪ್ಪಗೌಡ- 58066
ಆರ್ ಪ್ರಕಾಶ್- 56694
ಎಚ್.ಸಿ ಜಯಮುತ್ತು- 56254
ಹಾಪ್ ಕಾಮ್ಸ್ ದೇವರಾಜು- 55903
ಎಲ್.ಶ್ರೀನಿವಾಸ್- 49217
ಸಿ.ಎಂ ಮಾರೇಗೌಡ- 48492
ರಾಜಶೇಖರಗೌಡ- 46180
ಕೆ.ಎಸ್. ಸುರೇಶ್- 45601
ಉಮಾಪತಿ- 44709
ಚಕ್ಕೆರೆ ವೆಂಕಟರಾಮೇಗೌಡ- 43022
ಹನುಮಂತಯ್ಯ- 41687
ತೌಟನಹಳ್ಳಿ ಪುಟ್ಟಸ್ವಾಮಿ- 41165
ಡಾ. ನಾರಾಯಣಸ್ವಾಮಿ- 40728

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯಲ್ಲಿ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹಳಬರಿಗೆ ಕೊಕ್ ಎಂದ ಮತದಾರರು ಹೊಸಬರಿಗೆ ಜೈ ಎಂದಿದ್ದಾರೆ. ಸಂಘದಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಆಸ್ತಿ ಪರಭಾರೆ ವಿವಾದ, ಸಂಘ ಸೂಪರ್‍ ಸೀಟ್ ಹೀಗೆ ನಾನಾ ಕಾರಣಗಳಿಂದ ಈ ಬಾರಿಯ ಸಂಘದ ಚುನಾವಣೆ ತೀವ್ರ ಕೂತೂಹಲಕ್ಕೆ ಕಾರಣವಾಗಿತ್ತು.

 ಸಂಘದ ಅಭಿವೃದ್ಧಿ ಹಾಗೂ ಈ ಹಿಂದಿನ ಅವಧಿಯಲ್ಲಿನ ಲೋಪದೋಷಗಳು ಈ ಚುನಾವಣೆಯ ಪ್ರಮುಖ ಆಧಾರವಾಗಿತ್ತು. ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಕೆಂಚಪ್ಪಗೌಡ ತಂಡ, ಡಾ. ಅಂಜನಪ್ಪ ತಂಡ, ಪ್ರೊ. ನಾಗರಾಜು ತಂಡ, ಈ ಹಿಂದಿನ ಅವಧಿಯ ನಿರ್ದೇಶಕ ಎಚ್.ಸಿ.ಜಯಮುತ್ತು ನೇತೃತ್ವದ ತಂಡ, ಒಕ್ಕಲಿಗ ಫೌಂಡೇಷನ್ ತಂಡದ ಜತೆಗೆ ಹಲವು ಸಮಾನ ಮನಸ್ಕರು ತಂಡಗಳನ್ನು ರಚಿಸಿಕೊಂಡು ಚುನಾವಣೆ ಎದುರಿಸಿದ್ದರು. ಸಂಘದ ನಿರ್ದೇಶಕರಾಗಿ ಆಯ್ಕೆಯಾಗಲು ನಡೆದ ತೀವ್ರ ಹೋರಾಟದಲ್ಲಿ ಬಹುತೇಕ ಹೊಸಮುಖಗಳು ಗೆದ್ದು ಬೀಗಿವೆ. ಕೆಂಚಪ್ಪಗೌಡ, ಎಚ್.ಸಿ.ಜಯಮುತ್ತು ಹೊರತುಪಡಿಸಿ ಮಿಕ್ಕವರೆಲ್ಲರೂ ಸಂಘಕ್ಕೆ ಹೊಸ ಮುಖಗಳಾಗಿವೆ.

ಚನ್ನರಾಯಪಟ್ಟಣ ಶಾಸಕ ಸಿ.ಎನ್​.ಬಾಲಕೃಷ್ಣ, ಬಿ.ಪಿ.ಮಂಜೇಗೌಡ, ಕುಣಿಗಲ್​ನ ಮಾಜಿ ಶಾಸಕ ನಾಗರಾಜಯ್ಯ ಅವರ ಮಗ ಲೋಕೇಶ್​ ಡಿ.ನಾಗರಾಜಯ್ಯ ಸೇರಿ ಪ್ರಮುಖ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಡಿ.12ರಂದು ನಡೆದ ಚುನಾವಣೆಯಲ್ಲಿ 5,20,721 ಮತದಾರರ ಪೈಕಿ ಒಟ್ಟು 3,71,679 ಮಂದಿ ಮತದಾನ ಮಾಡಿದ್ದರು. ಒಟ್ಟು ಶೇ.71 ಮತದಾನವಾಗಿತ್ತು. 13 ಜಿಲ್ಲೆಗಳಿಂದ ಒಟ್ಟು 221 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬೆಂಗಳೂರು ನಗರ, ಬೆಂ.ಗ್ರಾಮಾಂತರ ಮತ್ತು ರಾಮನಗರದಲ್ಲಿ ಒಟ್ಟು 141 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಮೂರು ಜಿಲ್ಲೆಗಳ ಮತ ಎಣಿಕೆ ಅರಮನೆ ಮೈದಾನದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ನಡೆಯಿತು. ಉಳಿದ ಜಿಲ್ಲೆಗಳ ಮತ ಎಣಿಕೆ ಪ್ರಕ್ರಿಯೆ ಬೇಗ ಮುಗಿದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಯಿತು.

Follow Us:
Download App:
  • android
  • ios