ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ದೇವಾಲಯದ ಗೋಪುರದ ಮೇಲೆ ಎಚ್.ಡಿ. ಕೋಟೆಯ ಮೃತ್ಯುಂಜಯ ಎಂಬ ವ್ಯಕ್ತಿಯೋರ್ವ ಹತ್ತಿ ಜಿಗಿಯಲು ಯತ್ನಿಸಿದನು. ಕೂಡಲೇ ಕಾರ್ಯಪ್ರವೃತ್ತರಾದ ದೇವಸ್ಥಾನದ ಅಧಿಕಾರಿಗಳು ಆತನನ್ನು ರಕ್ಷಿಸಿದರು. ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾನೆಂದು ತಿಳಿದುಬಂದಿದೆ. ಈ ಘಟನೆಯಿಂದ ಭಕ್ತರು ಆತಂಕಗೊಂಡರು. ಸೂಕ್ತ ಸಮಯದಲ್ಲಿ ರಕ್ಷಣೆ ಮಾಡಿದ್ದರಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ.

ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ದೇವಾಲಯ ಗೋಪುರವನ್ನು ಏರಿದ ವ್ಯಕ್ತಿ ಉದ್ವಿಗ್ನ ಪರಿಸ್ಥಿತಿ ತಂದೊಡ್ಡಿದ್ದಾನೆ. ದೇವಸ್ಥಾನದ ಗೋಪುರ ಮೇಲೆ ಹತ್ತು ಕಳಸವನ್ನು ಹಿಡಿದು ಕೈಮುಗಿದು, ಅಲ್ಲಿಂದ ಜಿಗಿಯುವುದಕ್ಕೆ ಮುಂದಾಗಿದ್ದಾನೆ. ಮುಂದಾಗಿದ್ದು ಮಾತ್ರ ರೋಚಕ..

ಪವಿತ್ರ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಜೆ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಎಚ್.ಡಿ. ಕೋಟೆಯ ಮೃತ್ಯುಂಜಯ ಎಂದು ಗುರುತಿಸಲಾದ ವ್ಯಕ್ತಿ ದೇವಾಲಯದ ಗೋಪುರದ ಮೇಲೆ ಹತ್ತಿ ಅಲ್ಲಿಂದ (ಗೋಪುರ) ಹಾರಿ ತನ್ನ ಪ್ರಾಣವನ್ನು ಕಳೆದುಕೊಳ್ಳಲು ಪ್ರಯತ್ನಿಸಿದನು. ಇದರಿಂದ ಕೆಲಕಾಲ ದೇವಾಲಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಇಂದು ವಾರಾಂತ್ಯದ ರಜೆ ದಿನ ಆಗಿದ್ದರಿಂದ ಭಕ್ತರ ಸಂಖ್ಯೆ ತುಸು ಹೆಚ್ಚಾಗಿಯೇ ಇತ್ತು. ಹೀಗಾಗಿ, ದಿಢೀರನೇ ದೇವಾಲಯ ಆವರಣದಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿದ್ದು, ಭಕ್ತರು ಆತಂಕಕ್ಕೆ ಒಳಗಾಗಿದ್ದರು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೃತ್ಯುಂಜಯ ಎನ್ನುವ ದೇವಾಲಯ ಗೋಪುರ ರಚನೆಯ ಮೇಲ್ಭಾಗಕ್ಕೆ ಹತ್ತಿದನು. ಅಲ್ಲಿ ದೇವರಿಗೆ ಸಂಬಂಧಿಸಿದಂತೆ ಕೆಲವು ಭಾವನಾತ್ಮಕ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದನು. ಅಲ್ಲಿಂದ ಹಾರಲು ಪ್ರಯತ್ನಿಸಿದನು. ಇದಕ್ಕೂ ಮೊದಲು ಅಳುತ್ತಾ ಕುಳಿತಿದ್ದ ಈ ವ್ಯಕ್ತಿ ನೋಡ ನೋಡುತ್ತಿದ್ದಂತೆ ಎತ್ತರದ ಗೋಪುರದ ಮೇಲೆ ನಿಂತಿದ್ದನು. ಇದನ್ನು ನೋಡಿ ಭಕ್ತರು ಮತ್ತು ದೇವಾಲಯದ ಸಿಬ್ಬಂದಿ ದಿಗ್ಭ್ರಮೆಗೊಂಡರು. ಇದು ದೇವಾಲಯದಲ್ಲಿ ಗೊಂದಲ ಮತ್ತು ಕಳವಳದ ಪರಿಸ್ಥಿತಿ ಸೃಷ್ಟಿಸಿತು. ಅದೃಷ್ಟವಶಾತ್, ಕೂಡಲೇ ಆತನ ರಕ್ಷಣೆಗೆ ಯೋಚಿಸಿದ ದೇವಾಲಯದ ಅಧಿಕಾರಿಗಳು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಕಾರ್ಯಪ್ರವೃತ್ತರಾದರು. ಯಾವುದೇ ಗಂಭೀರ ಹಾನಿ ಸಂಭವಿಸುವ ಮೊದಲು ಅವರನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: 

ಮೂಲಗಳು ಹೇಳುವಂತೆ ಮೃತ್ಯುಂಜಯನು ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾನೆ ಮತ್ತು ಖಿನ್ನತೆಯ ಸ್ಥಿತಿಯಲ್ಲಿರಬಹುದು. ಆತ ಮಹದೇಶ್ವರ ದೇವಾಲಯಕ್ಕೆ ಬರುವುದು, ದೇವಾಲಯದ ಮುಂದೆ ಅಳುತ್ತಾ ಕುಳಿತಿರುವುದು ಹಾಗೂ ಗೋಪುರವನ್ನು ಹತ್ತಲು ಪ್ರಯತ್ನ ಮಾಡಿದ್ದನ್ನು ಭಕ್ತನೊಬ್ಬನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಯಲಾಗಿದೆ. ಇನ್ನು ದೇವಾಲಯದ ಗೋಪುರದ ಮೇಲೆ ಹತ್ತಿ ಅಲ್ಲಿಂದ ಬೀಳು ಯತ್ನಿಸಿದ್ದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ, ಮಾನಸಿಕ ಆರೋಗ್ಯ ಜಾಗೃತಿ ಮತ್ತು ಬೆಂಬಲದ ಕೊರತೆಯ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನು ದೇವಾಲಯ ಗೋಪುರದ ಮೇಲೆ ಹತ್ತಿದ್ದ ಮೃತ್ಯುಂಜಯನನ್ನು ಸ್ಥಳೀಯ ಪೊಲೀಸರೊಂದಿಗೆ ದೇವಾಲಯದ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಆಗ ಮಾನಸಿಕ ಅಸ್ವಸ್ಥನೆಂದು ತಿಳಿದಾಗ ಆತನಿಗೆ ಅಗತ್ಯವಾದ ವೈದ್ಯಕೀಯ ಮತ್ತು ಮಾನಸಿಕ ಸಹಾಯ ಸಿಗುವಂತೆ ನೋಡಿಕೊಳ್ಳುವ ಬಗ್ಗೆ ತಿಳಿಸಿದ್ದಾರೆ. ಈ ಆತಂಕಕಾರಿ ಘಟನೆಯು ನಡೆಯದಂತೆ ದೇವಸ್ಥಾನ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕಾಗಿದೆ. 

ಇದನ್ನೂ ಓದಿ: 

ಮಹದೇಶ್ವರ ಪವಾಡ: ಮಲೆ ಮಹದೇಶ್ವರ ದೇವಸ್ಥಾನದ ಗೋಪುರವನ್ನು ಹತ್ತಿದ ವ್ಯಕ್ತಿ ಅಲ್ಲಿಂದ ಬೀಳುವುದಾಗಿ ಅಲ್ಲಿಂದ ಜಿಗಿಯುವ ಪ್ರಯತ್ನ ಮಾಡಿದ್ದಾನೆ. ಸಾಯುವುದಕ್ಕೆಂದೇ ಗೋಪುರ ಹತ್ತಿದವನಿಗೆ ದೇವರೇ ಬುದ್ಧಿ ಕೊಟ್ಟು ಬದುಕುವಂತೆ ಮಾಡಿದ್ದೇ ದೊಡ್ಡ ಪವಾಡ ಆಗಿದೆ. ಜೊತೆಗೆ, ದೇವಾಲಯ ಆಡಳಿತ ಸಿಬ್ಬಂದಿ ತತ್‌ಕ್ಷಣದಲ್ಲಿಯೇ ಆತನನ್ನು ರಕ್ಷಿಸಿ ಪ್ರಾಣ ಉಳಿಸಿದ್ದಾರೆ. ಇದು ದೇವರ ಪವಾಡ ಎಂದು ಸ್ಥಳೀಯರು ಮಾತನಾಡಿಕೊಂಡಿದ್ದಾರೆ. ಇನ್ನು ಆತನಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇದ್ದು, ಆತ ಗುಣಮುಖ ಆಗಲೆಂದು ಭಕ್ತರು ಬೇಡಿಕೊಂಡಿದ್ದಾರೆ.

Scroll to load tweet…