Asianet Suvarna News Asianet Suvarna News

ಸಂಚಲನ ಸೃಷ್ಟಿಸಿದ ಶಾಮನೂರು ಶಿವಶಂಕರಪ್ಪ ಹೇಳಿಕೆ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿಕೆಯೊಂದು ಸಂಚಲನವನ್ನೇ ಸೃಷ್ಟಿ ಮಾಡಿದೆ. 

loksabha Election Shamanur Shivashankarappa May contest from Davanagere
Author
Bengaluru, First Published Feb 5, 2019, 11:56 AM IST

ದಾವ​ಣ​ಗೆರೆ: ದಾವ​ಣ​ಗೆರೆ ಲೋಕ​ಸಭಾ ಕ್ಷೇತ್ರದಿಂದ ಎಚ್‌.​ಎಂ.ರೇವಣ್ಣ ಅಲ್ಲ, ಯಾವ ಅಣ್ಣನನ್ನೇ ನಿಲ್ಲಿ​ಸಿ​ದರೂ ಗೆಲ್ಲಿ​ಸುತ್ತೇವೆ. ಒಂದೊಮ್ಮೆ ನಾನೇ ದಾವ​ಣ​ಗೆರೆ ಅಭ್ಯ​ರ್ಥಿ​ಯಾಗಿ ನಿಂತರೂ ಅಚ್ಚರಿ ಇಲ್ಲ ಎನ್ನುವ ಮೂಲ​ಕ ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹೊಸ ಸಂಚ​ಲ​ನವನ್ನುಂಟು ಮಾಡಿದ್ದಾರೆ.

ತಾಲೂ​ಕಿನ ಬೆಳ​ವ​ನೂರು ಗ್ರಾಮ​ದಲ್ಲಿ ವಿವಿಧ ಅಭಿ​ವೃದ್ಧಿ ಕಾಮ​ಗಾ​ರಿಗೆ ಭೂಮಿ​ಪೂಜೆ ನೆರ​ವೇ​ರಿಸಿ ಮಾತ​ನಾ​ಡಿದ ಅವರು, ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರೂ ಅವರಿಗೆ ನಮ್ಮ ಬೆಂಬಲವಿದೆ. ಅವರನ್ನು ಗೆಲ್ಲಿಸುತ್ತೇವೆ ಎಂದಿದ್ದಾರೆ.

ಅಧಿ​ಕಾ​ರ​ದ​ಲ್ಲಿ​ ಯಾರಿ​ರು​ತ್ತಾರೋ ಅವರೇ ಮುಖ್ಯ​ಮಂತ್ರಿ. ನಮ್ಮ ಪಕ್ಷ​ದ​ವ​ರಿಗೆ ಒಬ್ಬ ಮುಖ್ಯ​ಮಂತ್ರಿ, ಮತ್ತೊಂದು ಪಕ್ಷಕ್ಕೆ ಇನ್ನೊಬ್ಬ ಮುಖ್ಯ​ಮಂತ್ರಿ ಅಂತಾ ಇರು​ವು​ದಿಲ್ಲ ಎಂದಿರುವ ಅವರು ಈ ಮೂಲಕ ಸಿದ್ದರಾಮಯ್ಯ ಬೆಂಬಲಿಗರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

ಆಪರೇಷನ್‌ ಕಮಲ ಯಶಸ್ವಿಯಾಗಲ್ಲ:  ಬಿಜೆ​ಪಿ​ಯ​ವರ ಬಳಿ ಸಾಕಷ್ಟುದುಡ್ಡಿದೆ. ಇದೇ ಕಾರ​ಣಕ್ಕೆ ಆಪ​ರೇ​ಷನ್‌ ಕಮ​ಲಕ್ಕೆ ಮುಂದಾ​ಗು​ತ್ತಿ​ದ್ದಾರೆ. ಕಳೆದ 6 ತಿಂಗ​ಳಿ​ನಿಂದಲೂ ಬಿಜೆ​ಪಿ​ಯ​ವರು ಆಪ​ರೇ​ಷನ್‌ ಮಾಡಲು ಪ್ರಯ​ತ್ನಿ​ಸು​ತ್ತಿ​ದ್ದಾರೆ. ಆದರೆ, ಆಪ​ರೇ​ಷನ್‌ ಕಮಲ ಯಶ​ಸ್ವಿ​ಯಾಗುವುದಿಲ್ಲ ಎಂದಿದ್ದಾರೆ.

Follow Us:
Download App:
  • android
  • ios