Asianet Suvarna News Asianet Suvarna News

ಪ್ರಯಾಣಿಕರೇ ಗಮನಿಸಿ, 3ದಿನ KSRTC ಬಸ್ ಸಂಚಾರದಲ್ಲಿ ವ್ಯತ್ಯಯ

ಇದೇ ಏಪ್ರಿಲ್ 16, 17, 18 ರಂದು ಕೆಎಸ್ ಆರ್ ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯವಾಗಲಿದೆ. ಹೀಗಂತಾ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಏಕೆ ಎನ್ನುವುದನ್ನು ಮುಂದೆ ನೋಡಿ

KSRTC buses will be disrupted due to Loksabha election from April 16 to 18
Author
Bengaluru, First Published Apr 15, 2019, 7:14 PM IST

ಬೆಂಗಳೂರು,[ಏ.15]: ಇದೇ ಏಪ್ರಿಲ್‌ 18 ರಂದು ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುವುದರಿಂದ ಕೆಎಸ್​​ಆರ್​ಟಿಸಿ ಬಸ್​ ಸಂಚಾರದಲ್ಲಿ ವ್ಯತ್ಯಯವಾಗಲಿದೆ. 

ಚುನಾವಣೆಯ ಹಿಂದಿನ ಎರಡು ದಿನ ಹಾಗೂ ಚುನಾವಣೆಯ ದಿನ ಅಂದ್ರೆ ಏಪ್ರಿಲ್ 16, 17, 18 ರಂದು ಕೆಎಸ್​​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ವೋಟ್ ಮಾಡಲು ಹೋಗುವವರಿಗೆ ಶುಭ ಸುದ್ದಿ, ಉತ್ತರ, ದಕ್ಷಿಣ ಕರ್ನಾಟಕಕ್ಕೆ ಒಟ್ಟು 3 ವಿಶೇಷ ರೈಲು

ಚುನಾವಣೆ ಕಾರ್ಯಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಮತ್ತು ಚುನಾವಣೆ ಆಯೋಗಕ್ಕೆ ಕೆಎಸ್​​ಆರ್​ಟಿಸಿ 3314 ಬಸ್​ಗಳನ್ನ ಆಯೋಜನೆ ಮಾಡಲಾಗಿದೆ. ಹೀಗಾಗಿ ರಾಜ್ಯದ ಪ್ರಯಾಣಿಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಸಾರ್ವಜನಿಕರು ಎಲ್ಲಿಗಾದರೂ ತೆರಳಬೇಕಿದ್ರೆ ಬಸ್ ಗಾಗಿ ಕಾಯುವುದನ್ನು ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ. 

ರಾಜ್ಯದಲ್ಲಿ ಮೊದಲ ಹಂತ ಮತದಾನ ಏ.18ರಂದು ನಡೆದರೆ, ಏ.23ರಂದು 2ನೇ ಹಂತದ ಮತದಾನ ನಡೆಯಲಿದೆ. ಇನ್ನು ಮೇ 23ಕ್ಕೆ ಮತದಾನ ಎಣಿಕೆ ನಡೆಯಲಿದೆ.

KSRTC buses will be disrupted due to Loksabha election from April 16 to 18

Follow Us:
Download App:
  • android
  • ios