ಕೆಲವೊಮ್ಮೆ ಧಾರಾವಾಹಿಯನ್ನು, ಅಲ್ಲಿನ ಪಾತ್ರವನ್ನು ವೈಯಕ್ತಿಕವಾಗಿ ತಗೊಂಡ ಕೆಲವರು ಅಸಭ್ಯ ಭಾಷೆಗಳಲ್ಲಿ ಮಾತನಾಡುತ್ತಾರೆ. ಈಗ ಕರ್ಣ ಧಾರಾವಾಹಿ ನಟಿ ನಮ್ರತಾ ಗೌಡ ವಿರುದ್ಧ ಅನೇಕರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದು, ನಟಿ ಈಗ ಎಚ್ಚರಿಕೆ ಕೊಟ್ಟಿದ್ದಾರೆ.
- Home
- News
- State
- State News Live: ಅದೊಂದೇ ಕಾರಣಕ್ಕೆ Karna Serial ನಟಿ ನಮ್ರತಾ ಗೌಡಗೆ ಅಸಭ್ಯ ಭಾಷೆಯಲ್ಲಿ ನಿಂದನೆ; ಎಚ್ಚರಿಕೆ ಕೊಟ್ಟ ನಟಿ
State News Live: ಅದೊಂದೇ ಕಾರಣಕ್ಕೆ Karna Serial ನಟಿ ನಮ್ರತಾ ಗೌಡಗೆ ಅಸಭ್ಯ ಭಾಷೆಯಲ್ಲಿ ನಿಂದನೆ; ಎಚ್ಚರಿಕೆ ಕೊಟ್ಟ ನಟಿ

ಬೆಂಗಳೂರು (ಅ.8): ಕುರುಬರನ್ನು ಎಸ್ಟಿಗೆ ಸೇರಿಸಲು ವಾಲ್ಮೀಕಿ ಜಯಂತಿಯಲ್ಲಿ ಭಾರೀ ವಿರೋಧ ವ್ಯಕ್ತಪಡಿಸಲಾಗಿದೆ. ಎಸ್ಟಿ ತಟ್ಟೆಗೆ ಕುರುಬರು ಕೈ ಇಡುತ್ತಿರುವುದಕ್ಕೆ ಮಾಜಿ ಸಂಸದ ವಿಎಸ್ ಉಗ್ರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ತಟ್ಟೆಯ ಅನ್ನ ಕಿತ್ತುಕೊಳ್ಳಬೇಡಿ. ನಿಮ್ಮ ತಟ್ಟೆ, ಅನ್ನ ತಂದು ಊಟ ಮಾಡಿ. ಮೀಸಲು ಏರಿಸದೆ ಕುರುಬರನ್ನು ಸೇರಿಸಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಯಾರ ತಟ್ಟೆಗೂ ಕುರುಬ ಜನರು ಹೈ ಹಾಕಲ್ಲ. ಎಸ್ಟಿಗೆ ಸೇರಿಸಲು ಯತ್ನಿಸಿದ್ದು ಬಿಜೆಪಿ, ಮೀಸಲು ಹೆಚ್ಚಳಕ್ಕೆ ಶಿಫಾರಸು ಮಾಡುವೆ ಎಂದು ಹೇಳಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 8th October:ಅದೊಂದೇ ಕಾರಣಕ್ಕೆ Karna Serial ನಟಿ ನಮ್ರತಾ ಗೌಡಗೆ ಅಸಭ್ಯ ಭಾಷೆಯಲ್ಲಿ ನಿಂದನೆ; ಎಚ್ಚರಿಕೆ ಕೊಟ್ಟ ನಟಿ
Karnataka News Live 8th October:BBK 12 - ದೊಡ್ಡ ಸತ್ಯವನ್ನು ಮುಚ್ಚಿಟ್ಟು ಬಿಗ್ ಬಾಸ್ ಮನೆಯೊಳಗಿರೋ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ!
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಭಾಗವಹಿಸಿರುವ ಅನೇಕ ಕಲಾವಿದರು, ಸೀರಿಯಲ್ಗಳಲ್ಲಿ ಅಥವಾ ರಿಯಾಲಿಟಿ ಶೋನಲ್ಲಿ ಭಾಗಿಯಾದವರೇ..ಇವರಲ್ಲಿ ಕೆಲವರಿಗೆ ಕೆಲವರ ಪರಿಚಯ ಇದೆ. ಆದರೆ ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ ಮಾತ್ರ ಏನೂ ಗೊತ್ತಿಲ್ಲದಂತೆ ಇದ್ದಾರೆ.
Karnataka News Live 8th October:Karna Serial - ನಿಧಿಯ ಪ್ರಿಯಕರನ ಸತ್ಯ ನಿತ್ಯಾಗೆ ತಿಳಿಯೋ ಟೈಮ್ ಬಂದೇ ಬಿಡ್ತು- ಮುಂದೇನಾಗತ್ತೆ?
ಕರ್ಣ ಸೀರಿಯಲ್ ರೋಚಕ ಹಂತ ತಲುಪಿದ್ದು, ನಿಧಿಯನ್ನು ಪ್ರೀತಿಸುವ ಕರ್ಣ ಅನಿರೀಕ್ಷಿತವಾಗಿ ನಿತ್ಯಾಳಿಗೆ ತಾಳಿ ಕಟ್ಟಿದ್ದಾನೆ. ಇದೀಗ ನಿಧಿಯ ಸತ್ಯ ನಿತ್ಯಾಳಿಗೆ ಗೊತ್ತಾಗುವ ಟೈಮ್ ಬಂದಿದೆ. ಇನ್ನೊಂದೆಡೆ, ಜೋಗತಿಯು ನಿಧಿ ಮತ್ತು ಕರ್ಣ ಒಂದಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾಳೆ. ಮುಂದೇನು?
Karnataka News Live 8th October:ಭಾರತದಲ್ಲಿ ಗೂಗಲ್ನಿಂದ ಹೊಸ ಯುಗ ಆರಂಭ - ಕಡಲತೀರ ನಗರದಲ್ಲಿ 88,730 ಕೋಟಿ ಹೂಡಿಕೆ
Google Investment India: ಗೂಗಲ್ ಭಾರತದಲ್ಲಿ ತನ್ನ ಅತಿದೊಡ್ಡ ಹೂಡಿಕೆಗೆ ಮುಂದಾಗಿದೆ. ಸುಮಾರು 88,730 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಡೇಟಾ ಸೆಂಟರ್ ಸ್ಥಾಪಿಸಲಿದ್ದು, ಇದು ರಾಜ್ಯದಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
Karnataka News Live 8th October:ತಪ್ಪಿನ ಅರಿವಾಗಿದೆ- ವೈಲ್ಡ್ಕಾರ್ಡ್ ಕೊಟ್ರೆ ಸುಮ್ಸುಮ್ನೆ ಕೂಗಾಡ್ತೇನೆ, ಕಣ್ಣು ಕೆಂಪು ಮಾಡ್ತೇನೆ- Bigg Bogg ಅಮಿತ್!
Karnataka News Live 8th October:ನೋಡಯ್ಯ ಕ್ವಾಟೆ ಲಿಂಗವೇ, ಜೋಡಕ್ಕಿ ಕುಂತವೇ- ನಮ್ರತಾ ಗೌಡ ಆ ಪೋಸ್ಟ್ಗೆ ಕ್ಲಾರಿಟಿ ಕೊಟ್ಟ ಕಾರ್ತಿಕ್ ಮಹೇಶ್
ಇತ್ತೀಚೆಗೆ ಕಾರ್ತಿಕ್ ಮಹೇಶ್ ಅವರ ಜನ್ಮದಿನ ಇತ್ತು. ಆಗ ನಮ್ರತಾ ಗೌಡ ಅವರು ವಿಶೇಷವಾದ ಪೋಸ್ಟ್ ಹಂಚಿಕೊಂಡಿದ್ದರು. ಈ ಬಗ್ಗೆ ಈಗ ಚರ್ಚೆಯಾಗುತ್ತಿದ್ದು, ಕಾರ್ತಿಕ್ ಮಹೇಶ್ ಅವರು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.
Karnataka News Live 8th October:IAS ಹೆಂಡ್ತಿ ವಿದೇಶ ಪ್ರವಾಸದಲ್ಲಿದ್ದಾಗಲೇ ಗಂಡ ಐಪಿಎಸ್ ಅಧಿಕಾರಿ ಸಾವಿಗೆ ಶರಣು
IPS Officer Puran Kumar Singh: ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಮನೆಯಲ್ಲೇ ಸ್ವತಃ ಗುಂಡಿಕ್ಕಿಕೊಂಡು ಸಾವಿಗೆ ಶರಣಾಗಿದ್ದಾರೆ. ವೈ ಪುರಾನ್ ಕುಮಾರ್ ಸಿಂಗ್ ಸಾವಿನ ಹಾದಿ ಹಿಡಿದ ಪೊಲೀಸ್ ಅಧಿಕಾರಿ. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ,
Karnataka News Live 8th October:Amruthadhaare Serial - ಕರ್ಮ ಅಂದ್ರೆ ಇದೇ ಇರಬೇಕು; ಈ ರೀತಿ ಮಾತ್ರ ನೋಡೋಕೆ ಆಗ್ತಿಲ್ಲ ಎಂದ ವೀಕ್ಷಕರು!
ಅಮೃತಧಾರೆ ಧಾರಾವಾಹಿ ಈಗ ಭರ್ಜರಿ ಟ್ವಿಸ್ಟ್ ಇರುವ ಎಪಿಸೋಡ್ ಪ್ರಸಾರ ಆಗ್ತಿದೆ. ಈ ಧಾರಾವಾಹಿಯಲ್ಲಿ ಭೂಮಿಗೆ ಆತ ತಾನೇ ಹುಟ್ಟಿದ ಹೆಣ್ಣು ಮಗಳನ್ನು, ಜಯದೇವ್ ಕದ್ದು, ಕಾಡಿನಲ್ಲಿ ಬಿಸಾಕಿದ್ದನು. ಈಗ ಅವನಿಗೆ ಮಗಳು ಸಿಕ್ಕಿದ್ದಾಳೆ. ಆದರೆ ಅವಳೇ ತನ್ನ ಮಗಳು ಎನ್ನೋದು ಅವನಿಗೆ ಅರಿವಾಗಿರಲಿಲ್ಲ.
Karnataka News Live 8th October:ಹೇಗಿದೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಆರೋಗ್ಯ? ಹೆಲ್ತ್ ಬುಲೆಟಿನ್ ಬಿಡುಗಡೆ
HD Devegowoda: ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನುರಿತ ವೈದ್ಯರ ತಂಡವು ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಆಸ್ಪತ್ರೆ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದೆ.
Karnataka News Live 8th October:ದರ್ಶನ್ ಅಭಿಮಾನಿಗಳಿಂದ ರಾಜ್ಯಾದ್ಯಂತ ಪ್ರತಿಭಟನೆ; ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ!
ನಟ ದರ್ಶನ್ ಬಂಧನದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಆರೋಪಿಸಿದ ಅಭಿಮಾನಿ ಸಂಘಟನೆಗಳು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ನೀಡಿವೆ. ಈ ಎಲ್ಲ ಬೆಳವಣಿಗೆಗಳ ಸೂತ್ರಧಾರ ಡಿಸಿಎಂ ಡಿ.ಕೆ. ಶಿವಕುಮಾರ್. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಡಿಕೆಶಿ ಸೋಲಿಸಲು ಅಭಿಮಾನಿಗಳಿಗೆ ಕರೆ ನೀಡಿವೆ.
Karnataka News Live 8th October:ದರ್ಶನ್ ಪಾಪ ನಮ್ಮ ಹುಡುಗ, ಅಭಿಮಾನಿಗಳ ಪ್ರತಿಭಟನೆ ಹಿಂದೆ ರಾಜಕೀಯ ಷಡ್ಯಂತ್ರವಿದೆ - ಡಿ.ಕೆ. ಶಿವಕುಮಾರ್!
ನಟ ದರ್ಶನ್ ಅಭಿಮಾನಿಗಳ ಪ್ರತಿಭಟನೆಯು ತಮ್ಮ ವಿರುದ್ಧದ ರಾಜಕೀಯ ಷಡ್ಯಂತ್ರ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ದರ್ಶನ್ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದಿರುವ ಅವರು, ಬಿಗ್ ಬಾಸ್ ಶೋ ಸ್ಥಗಿತಗೊಳಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Karnataka News Live 8th October:ಹಾಸನಾಂಬ ಜಾತ್ರೆಗೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ; ಪ್ರತ್ಯೇಕ ಸಮಯ, ಸರತಿ ಸಾಲಿನ ಮೂಲಕ ದರ್ಶನ ವ್ಯವಸ್ಥೆ!
ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ. ಭಕ್ತರಿಗೆ ಸಾಂಪ್ರದಾಯಿಕ ಉಡುಗೆ ಕಡ್ಡಾಯವಾಗಿದ್ದು, ವಿಐಪಿ, ವಿಶೇಷ ಹಾಗೂ ಧರ್ಮದರ್ಶನಕ್ಕೆ ಪ್ರತ್ಯೇಕ ಸರತಿ ಸಾಲು ಮತ್ತು ಸಮಯ ನಿಗದಿಪಡಿಸಲಾಗಿದೆ.
Karnataka News Live 8th October:ನನ್ನ ಹಣೆಬರಹಕ್ಕೆ ಹುಡುಗಿ ಬೀಳ್ತಿಲ್ಲ ಅಂತ ಹೊಟ್ಟೆಕಿಚ್ಚಾ? ನೊಂದು ಪತ್ರ ಬರೆದ ಸಿಂಗಲ್ ಸಂಘದ ಅಧ್ಯಕ್ಷ
Single Boy: ಮದುವೆ ಆಗೋಕೆ ಹುಡುಗಿ ಸಿಗ್ತಿಲ್ಲ ಎಂದು ಕೆಲ ಹುಡುಗರು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಓರ್ವ ಸಿಂಗಲ್ಗೆ ಮದುವೆ ಆಗಿದ್ಯಾ? ಎಂಗೇಜ್ಮೆಂಟ್ ಆಗಿದ್ಯಾ ಎಂದು ಪ್ರಶ್ನೆ ಕೇಳಿ ಬೇಸರ ಆಗುವಂತೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
Karnataka News Live 8th October:ಸಂಜೆ 7ರೊಳಗೆ ಈಗಲ್ ಟನ್ ರೆಸಾರ್ಟ್ ಖಾಲಿ ಮಾಡಿ - ಬಿಗ್ಬಾಸ್ ಸ್ಪರ್ಧಿಗಳಿಗೆ ಮತ್ತೊಂದು ಶಾಕ್
Bigg Boss contestants shifted: ಜಲಮಾಲಿನ್ಯ ಆರೋಪದ ಮೇಲೆ ಬಿಗ್ಬಾಸ್ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಿಗಳನ್ನು ಮೊದಲು ಈಗಲ್ ಟನ್ ರೆಸಾರ್ಟ್ಗೆ, ನಂತರ ಅಲ್ಲಿಂದಲೂ ಬೇರೊಂದು ಕಡೆಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ.
Karnataka News Live 8th October:ಸಿಂಗಾಪುರದಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಜೊತೆ ಸಮಯ ಕಳೆದ Naa Ninna Bidalaare ಹಿತಾ; Photos
ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಹಿತಾ ಪಾತ್ರ ಮಾಡುತ್ತಿರುವ ಪುಟಾಣಿ ಈಗ ಸೀರಿಯಲ್ನಿಂದ ಬ್ರೇಕ್ ಪಡೆದು, ಸಿಂಗಾಪುರಕ್ಕೆ ಹೋಗಿದ್ದಾರೆ. ಅಲ್ಲಿ madame tussaudsಗೆ ಭೇಟಿ ನೀಡಿದ್ದು, ಭಾರತೀಯ ಚಿತ್ರರಂಗ, ಕ್ರೀಡಾ ರಂಗದ ದಿಗ್ಗಜರ ಮೇಣದ ಪ್ರತಿಮೆಗಳ ಜೊತೆ ಸೆಲ್ಫಿ ತಗೊಂಡಿದ್ದಾರೆ. ಈ ಸುಂದರ ಫೋಟೋಗಳಿವು
Karnataka News Live 8th October:'ಸಂತೂರ್ ಮಮ್ಮಿಗೆ ಡಾಗ್ ಸತೀಶ್ ಗಂಡ'ನೆಂದ ಚಂದ್ರಪ್ರಭ; ಬಿಗ್ ಬಾಸ್ ಮನೆಗೆ ಬಿತ್ತು ಬೀಗ!
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಸರ್ಕಾರ ಬೀಗ ಹಾಕುವ ಮುನ್ನ, ಸ್ಪರ್ಧಿಗಳಾದ ಚಂದ್ರಪ್ರಭ ಮತ್ತು ಡಾಗ್ ಸತೀಶ್ ನಡುವೆ ನಡೆದ ಹಾಸ್ಯಮಯ ಸಂಭಾಷಣೆ ಗಮನ ಸೆಳೆದಿದೆ. ಡಾಗ್ ಸತೀಶ್ ತಮ್ಮನ್ನು 'ಬೆಂಗಳೂರಿನ ಸಂತೂರ್ ಡ್ಯಾಡಿ' ಎಂದು ಕರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಶೋ ಸ್ಥಗಿತಗೊಂಡಿದೆ.
Karnataka News Live 8th October:ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಶ್ರೀಗಳಿಗೆ ಅನಾರೋಗ್ಯ - ಚಿತ್ರದುರ್ಗದಲ್ಲಿ ದಿಢೀರ್ ಆಸ್ಪತ್ರೆಗೆ ದಾಖಲು
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗಳು ತೀವ್ರ ಅನಾರೋಗ್ಯದಿಂದ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಕ್ಕರೆ ಪ್ರಮಾಣದಲ್ಲಿನ ಏರುಪೇರು ಅವರ ಅಸ್ವಸ್ಥತೆಗೆ ಕಾರಣವಾಗಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರಲ್ಲಿ ಆತಂಕ ಮನೆಮಾಡಿದೆ.
Karnataka News Live 8th October:ಬೆಳಗಾವಿ ಡಿಸಿಸಿ ಬ್ಯಾಂಕ್ಗೆ 25 ವರ್ಷ ನಾನೇ ಅಧ್ಯಕ್ಷ, ಜಾರಕಿಹೊಳಿ ಅಶ್ವಮೇಧ ಕಟ್ಟಿ ಹಾಕ್ತೇನೆ; ರಮೇಶ್ ಕತ್ತಿ!
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಮಾಜಿ ಸಂಸದ ರಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿಯ 'ಅಶ್ವಮೇಧ ಯಾಗದ ಕುದುರೆ'ಯನ್ನು ಕಟ್ಟಿಹಾಕುವುದಾಗಿ ಸವಾಲು ಹಾಕಿದ್ದಾರೆ. 40 ವರ್ಷಗಳಿಂದ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಬಾರಿಯೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Karnataka News Live 8th October:ಭಾರತದ ಯಾವ ರಾಜ್ಯ ಅತಿ ಹೆಚ್ಚು ರೈಲು ನಿಲ್ದಾಣಗಳನ್ನು ಹೊಂದಿದೆ?
ಭಾರತೀಯ ರೈಲ್ವೆಯು ದೇಶದ ಜೀವನಾಡಿಯಾಗಿದ್ದು, ಕೋಟ್ಯಂತರ ಜನರಿಗೆ ಸೇವೆ ಸಲ್ಲಿಸುತ್ತದೆ. ಭೌಗೋಳಿಕ ವಿಸ್ತಾರ, ಜನಸಂಖ್ಯೆ ಮತ್ತು ಪ್ರಮುಖ ಸಾರಿಗೆ ಕಾರಿಡಾರ್ ಆಗಿರುವ ಕಾರಣದಿಂದಾಗಿ 1200ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ.
Karnataka News Live 8th October:ಸೆಹ್ವಾಗ್ ಪತ್ನಿ ಜೊತೆ ಡೇಟಿಂಗ್, ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ವಿರುದ್ಧ ಗಂಭೀರ ಆರೋಪ
ಸೆಹ್ವಾಗ್ ಪತ್ನಿ ಜೊತೆ ಡೇಟಿಂಗ್ ರೂಮರ್, ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸೆಹ್ವಾಗ್ ಹಾಗೂ ಆರತಿ ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಇದಕ್ಕೆ ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ಮನ್ಹಾಸ್ ಕಾರಣ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.