25 ವರ್ಷಗಳ ನಂತರ ನೀವು ಯಾವ ಸ್ಥಾನದಲ್ಲಿ ಇರುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಜೂ.ಎನ್ಟಿಆರ್ ತಮಾಷೆಯಾಗಿ ಉತ್ತರಿಸಿದ್ದಾರೆ. ಜೊತೆಗೆ 2009ರಲ್ಲಿ ತಮಗಾದ ಅಪಘಾತವನ್ನೂ ತಾರಕ್ ನೆನಪಿಸಿಕೊಂಡಿದ್ದಾರೆ.
- Home
- News
- State
- Karnataka News Live: Jr NTR - 25 ವರ್ಷಗಳ ನಂತರ ಜೂ.ಎನ್ಟಿಆರ್ ಸಿಎಂ ಆಗ್ತಾರಾ? ಅಪಘಾತದ ಬಗ್ಗೆ ಮಾತಾಡಿದ ತಾರಕ್
Karnataka News Live: Jr NTR - 25 ವರ್ಷಗಳ ನಂತರ ಜೂ.ಎನ್ಟಿಆರ್ ಸಿಎಂ ಆಗ್ತಾರಾ? ಅಪಘಾತದ ಬಗ್ಗೆ ಮಾತಾಡಿದ ತಾರಕ್

ಬೆಂಗಳೂರು: ಬಿಜೆಪಿಯವರಿಗೆ ದೇಶ ಮತ್ತು ರಾಜ್ಯವನ್ನು ಆರ್ಥಿಕವಾಗಿ ಹೇಗೆ ನಡೆಸಬೇಕೆಂದು ಗೊತ್ತಿಲ್ಲ. ಕೇಂದ್ರ ಸರ್ಕಾರದ ಅನ್ಯಾಯದಿಂದಾಗಿ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸಾಲ ಮಾಡಿಯೇ ದೇಶವನ್ನು ನಡೆಸುತ್ತಿದ್ದು, ಈವರೆಗೆ ₹200 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಾಲರಾಮಯ್ಯ ಎಂಬ ಬಿಜೆಪಿ ವ್ಯಂಗ್ಯಕ್ಕೆ ಬೀದರ್ ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ನಮ್ಮ ₹80 ಸಾವಿರ ಕೋಟಿ ಪಾಲನ್ನು ನೀಡಿಲ್ಲ. ಅದರಿಂದಾಗಿ ನಮ್ಮ ಸರ್ಕಾರ ಸಾಲ ಮಾಡುವಂತಾಗಿದೆ. ಜೆಜೆಎಂ ಯೋಜನೆಯ ಕೇಂದ್ರದ ಪಾಲಾದ ₹15 ಸಾವಿರ ಕೋಟಿಯನ್ನು ನಾವು ಕೊಟ್ಟಿದ್ದೀವಿ. ಆದರೆ, ಪಂಚಾಯಿತಿಗೆ ಕೊಡಬೇಕಾದ 15ನೇ ಹಣಕಾಸಿನ ಪಾಲನ್ನು ಕೇಂದ್ರ ನೀಡಿಲ್ಲ ಎಂದು ಆರೋಪಿಸಿದರು.
Karnataka News Live 8 March 2026Jr NTR - 25 ವರ್ಷಗಳ ನಂತರ ಜೂ.ಎನ್ಟಿಆರ್ ಸಿಎಂ ಆಗ್ತಾರಾ? ಅಪಘಾತದ ಬಗ್ಗೆ ಮಾತಾಡಿದ ತಾರಕ್
Karnataka News Live 8 March 2026ಗರ್ಭಿಣಿಯಾಗಿದ್ದಾಗ ವಾಂತಿ ತಡೆಯಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ- ವೈದ್ಯೆ ಹೇಳಿದ್ದೇನು ಕೇಳಿ
ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ವಾಕರಿಕೆ ಮತ್ತು ವಾಂತಿ ಹಾರ್ಮೋನುಗಳ ಬದಲಾವಣೆಯಿಂದ ಸಾಮಾನ್ಯವಾಗಿದೆ. ಸ್ತ್ರೀರೋಗ ತಜ್ಞರಾದ ಡಾ. ಶಿಲ್ಪ. ಜಿ. ಬಿ. ಅವರು, ಔಷಧಿಗಳ ಬದಲು ಏನು ಮಾಡಬೇಕು ಎಂದು ಹೇಳಿದ್ದಾರೆ ಕೇಳಿ.
Karnataka News Live 8 March 2026ದೇವರ ದೃಷ್ಟಿಯಲ್ಲಿ ಧರ್ಮ, ಜಾತಿ ಇರುವುದಿಲ್ಲ, ನಾವೇ ಮಾಡಿಕೊಂಡಿದ್ದು - ಸಿಎಂ ಸಿದ್ದರಾಮಯ್ಯ
ಮನುಷ್ಯ ಮನುಷ್ಯನನ್ನು ದ್ವೇಷಿಸುವಂತಹ ಸ್ಥಿತಿ ಬಂದೊದಗಿದ್ದು, ಇದನ್ನು ಮೆಟ್ಟಿ ನಿಂತು ಎಲ್ಲರನ್ನು ಪ್ರೀತಿಸಿ, ಸಹಬಾಳ್ಮೆಯಿಂದ ಬಾಳುವ ವ್ಯವಸ್ಥೆ ಜಾರಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Karnataka News Live 8 March 2026ಜಿಎಸ್ಟಿ ಪಾಲು ಹಂಚಿಕೆ ಸರಿ ಇಲ್ಲ, ಹೀಗಾಗಿ ಖಾಲಿ ಹುದ್ದೆ ಭರ್ತಿ ಆಗುತ್ತಿಲ್ಲ - ಸಚಿವ ಕೆ.ಜೆ.ಜಾರ್ಜ್
ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಿಯಾಗಿ ಜಿಎಸ್ಟಿ ಪಾಲು ಹಂಚಿಕೆ ಮಾಡುತ್ತಿಲ್ಲ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಖಾಲಿ ಹುದ್ದೆಗಳ ನೇಮಕಾತಿ ಹಾಗೂ ಅಭಿವೃದ್ಧಿ ಕಾರ್ಯ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.
Karnataka News Live 8 March 2026ನನ್ನ ರಾಜಕೀಯ ಜೀವನ ಬೆಳವಣಿಗೆಗೆ ಅನೇಕ ಹಿರಿಯರ ಆಶೀರ್ವಾದವಿದೆ - ಸಚಿವ ಕೆ.ಎಚ್.ಮುನಿಯಪ್ಪ
ನಾನು ನನ್ನ ರಾಜಕೀಯ ಜೀವನದಲ್ಲಿ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಸಚಿವನಾಗಲು ಅನೇಕ ನಾಯಕರ ಸಹಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
Karnataka News Live 8 March 2026ಶಾಸಕ ಉದಯ್ ವೈಯಕ್ತಿಕ ಟೀಕೆಗೆ ಜನರೇ ಉತ್ತರ ಕೊಡುತ್ತಾರೆ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಶಾಸಕ ಕೆ.ಎಂ.ಉದಯ್ ನನ್ನ ಮೇಲೆ ವ್ಯಕ್ತಿಗತ ಟೀಕೆ, ಆರೋಪಕ್ಕೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
Karnataka News Live 8 March 2026ಗೆಜ್ಜಲಗೆರೆ ಗ್ರಾಪಂ ನಗರಸಭೆಯಿಂದ ಹೊರಗಿಡುವುದು ಕಷ್ಟದ ಕೆಲಸ - ಸಚಿವ ಚಲುವರಾಯಸ್ವಾಮಿ
ಕಾನೂನು ವ್ಯಾಪ್ತಿಯಲ್ಲಿ ಸಾಕಷ್ಟು ತೊಂದರೆಗಳಿರುವುದರಿಂದ ಪ್ರತಿಭಟನಾಕಾರರು ಹೋರಾಟ ಕೈ ಬಿಟ್ಟು ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.
Karnataka News Live 8 March 2026₹200 ಲಕ್ಷ ಸಾಲ ಮಾಡಿರುವ ಪ್ರಧಾನಿ ಮೋದಿ - ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಬಿಜೆಪಿಯವರಿಗೆ ದೇಶ ಮತ್ತು ರಾಜ್ಯವನ್ನು ಆರ್ಥಿಕವಾಗಿ ಹೇಗೆ ನಡೆಸಬೇಕೆಂದು ಗೊತ್ತಿಲ್ಲ. ಕೇಂದ್ರ ಸರ್ಕಾರದ ಅನ್ಯಾಯದಿಂದಾಗಿ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Karnataka News Live 8 March 2026ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಮುಖ್ಯ - ಸಚಿವ ಡಾ.ಎಂ.ಸಿ.ಸುಧಾಕರ್
ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿಯೇ ಮಾತಾಡಬೇಕು. ಆ ರೀತಿ ಅವರನ್ನು ಪ್ರೇರೇಪಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ನೂತನವಾಗಿ ಆಯ್ಕೆಯಾದ ಪ್ರಾಚಾರ್ಯರಿಗೆ ಕರೆ ನೀಡಿದರು.
Karnataka News Live 8 March 2026ಕಂಬಳ ಸಂಪ್ರದಾಯ ಉಳಿಸಲು ಸರ್ಕಾರ ಬೆಂಬಲ - ಸಿಎಂ ಸಿದ್ದರಾಮಯ್ಯ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕಂಬಳವು ಜಾತ್ಯತೀತ ಹಾಗೂ ಧರ್ಮಾತೀತವಾಗಿ ಎಲ್ಲರೂ ಭಾಗವಹಿಸುವ ಜನಪ್ರಿಯ ಕ್ರೀಡೆಯಾಗಿದೆ. ಈ ಸಂಪ್ರದಾಯವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ.
Karnataka News Live 8 March 2026Bigg Boss ರಕ್ಷಿತಾ ಶೆಟ್ಟಿ ಮದ್ವೆ Bhargavi LLb ನಾಯಕನ ಜೊತೆ! ಮಲ್ಲಮ್ಮ ಕೊಟ್ಟ ಶಾಕ್ ಏನು ಕೇಳಿ
Karnataka News Live 8 March 2026ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ನೂರಕ್ಕೆ ನೂರರಷ್ಟು ಸತ್ಯ - ಸಂಸದ ರಮೇಶ ಜಿಗಜಿಣಗಿ ಭವಿಷ್ಯ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಸಂಸದ ರಮೇಶ ಜಿಗಜಿಣಗಿ ಭವಿಷ್ಯ ನುಡಿದರು. ಜನರ ಒಲವು ಬಿಜೆಪಿಯ ಮೇಲೆ ಎಂದಿಗೂ ಕಡಿಮೆಯಾಗಿಲ್ಲ.
Karnataka News Live 8 March 2026ಬಾಗಲಕೋಟೆ - ಗಂಡನಿಗೆ ಕೈಕೊಟ್ಟು ಮುಸ್ಲಿಂ ವ್ಯಕ್ತಿ ಹಿಂದೆ ಹೋಗಿದ್ದ ಶ್ರೀದೇವಿ ಬೀದಿಪಾಲು, ನ್ಯಾಯಕ್ಕಾಗಿ ಅಲೆದಾಟ
Karnataka News Live 8 March 2026ಸಿಕ್ಸ್ನಿಂದ ಅದ್ಭುತ ಕ್ಷಣದವರೆಗೆ, ಅವಳೇ ನನ್ನ ಇನ್ನಿಂಗ್ಸ್; 26ನೇ ವಯಸ್ಸಿಗೆ ಕ್ರಿಕೆಟರ್ ಪೃಥ್ವಿ ಶಾ ಎಂಗೇಜ್
cricketer prithvi shaw age: ಭಾರತೀಯ ಕ್ರಿಕೆಟರ್ ಪೃಥ್ವಿ ಶಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗೆಳತಿ ಆಕೃತಿ ಅಗರ್ವಾಲ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Karnataka News Live 8 March 2026ಮಹಿಳಾ ಆಟೋ ಡ್ರೈವರ್ಸ್ ಜೊತೆ ಮಹಿಳಾ ದಿನಾಚರಣೆ ಆಚರಿಸಿದ ಸ್ಟಾರ್ ಸುವರ್ಣ ವಾಹಿನಿ!
Star Suvarna Channel: 'ಸ್ಟಾರ್ ಸುವರ್ಣ' ವಾಹಿನಿಯು ಸದಾ ಮಹಿಳೆಯರ ಪರವಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಲೇ ಬಂದಿದೆ. ಈಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ "ಸುವರ್ಣ ಸಖಿ" ಎಂಬ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
.
Karnataka News Live 8 March 2026Jr NTR Bangalore visit - ಕರ್ನಾಟಕ ನನ್ನ ಅಮ್ಮನ ಮನೆ - ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ ಮಾಡಿದ ಎನ್ಟಿಆರ್
ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಜೂನಿಯರ್ ಎನ್ಟಿಆರ್, ಕನ್ನಡದಲ್ಲಿಯೇ ಮಾತನಾಡಿ ಅಭಿಮಾನಿಗಳ ಮನಗೆದ್ದರು. ತಮ್ಮ ತಾತ ಇದೇ ಕಾಲೇಜಿಗೆ ಶಂಕುಸ್ಥಾಪನೆ ಮಾಡಿದ್ದನ್ನು ಮತ್ತು 2009ರ ಅಪಘಾತದ ನಂತರ ಇದೇ ಆಸ್ಪತ್ರೆ ತಮ್ಮ ಪ್ರಾಣ ಉಳಿಸಿದ್ದನ್ನು ಭಾವನಾತ್ಮಕವಾಗಿ ಸ್ಮರಿಸಿದರು..
Karnataka News Live 8 March 2026ಅಬ್ಬಬ್ಬಾ.. ಒಂದೇ ಧಾರಾವಾಹಿಯಲ್ಲಿ 2 ಸೂಪರ್ ಹಿಟ್ ಸೀರಿಯಲ್ ಹೀರೋಯಿನ್ಸ್; ಕರ್ಣನ ದಾರಿ ಹಿಡಿದ್ರಾ?
Udaya Tv Serial: ಜೈಮಾತಾ ಕಂಬೈನ್ಸ್ ಅವರ ಮುಂಬರುವ ಹೊಸ ಧಾರವಾಹಿಯಲ್ಲಿ ಕಿರುತೆರೆಯ ಜನಪ್ರಿಯ ನಟಿಯರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಈಗಾಲೇ ಕರ್ಣ ಧಾರಾವಾಹಿಯಲ್ಲಿ ನಮ್ರತಾ ಗೌಡ, ಭವ್ಯಾ ಗೌಡ ನಟಿಸುತ್ತಿದ್ದಾರೆ. ಇವರಿಬ್ಬರು ಬೇರೆ ಬೇರೆ ಧಾರಾವಾಹಿಗಳ ಹೀರೋಯಿನ್ಸ್ ಆಗಿದ್ದವರು.
Karnataka News Live 8 March 2026'ಟ್ರಂಪ್ ಒಬ್ಬ ಸರ್ವಾಧಿಕಾರಿ, ಮೋದಿ ಅವನ ಗುಲಾಮ' - ಚಿತ್ತಾಪುರದಲ್ಲಿ ಪ್ರಧಾನಿ ವಿರುದ್ಧ ಖರ್ಗೆ ಕಟು ವಾಗ್ದಾಳಿ
Trump is a Dictator Modi His Slave ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯಿಂದ ಮೋದಿ ಸರ್ಕಾರದ ವಿರುದ್ಧ ಗುಡುಗು! ಟ್ರಂಪ್ ಓರ್ವ ಸರ್ವಾಧಿಕಾರಿ, ಮೋದಿ ಗುಲಾಮ ಎಂದ ಖರ್ಗೆ. ವಿದೇಶಾಂಗ ನೀತಿ ಬಗ್ಗೆ ಅವರು ಹೇಳಿದ್ದೇನು? ತಿಳಿಯಲು ಓದಿ.
Karnataka News Live 8 March 2026ಮಜ್ಜಿಗೆಗೋಸ್ಕರ 3000 ಎಕರೆ ಜಮೀನು ಬರೆದುಕೊಟ್ಟ ಪ್ರಖ್ಯಾತ ನಟನ ಅಜ್ಜ! ಯಾರದು?
Krishnam Raju Family: ರೆಬೆಲ್ ಸ್ಟಾರ್ ಕೃಷ್ಣರಾಜು ರಾಜಮನೆತನದವರು. ಅವರ ಅಜ್ಜ, ಮೊಗಲ್ತೂರು ಮಹಾರಾಜ, ತೆಲುಗಿನ ಸ್ಟಾರ್ ನಿರ್ದೇಶಕರೊಬ್ಬರ ಕುಟುಂಬಕ್ಕೆ ಬರೋಬ್ಬರಿ 3000 ಎಕರೆ ಜಮೀನು ಬರೆದುಕೊಟ್ಟಿದ್ದರಂತೆ. ಇದರ ಹಿಂದಿನ ಕಾರಣ ಕೇಳಿದ್ರೆ ನೀವು ಅಚ್ಚರಿಪಡ್ತೀರಾ. ಈ ಬಗ್ಗೆ ಮಾಹಿತಿ ಇಲ್ಲಿದೆ.
Karnataka News Live 8 March 2026ಚಿತ್ತಾಪುರ - ಪ್ರಿಯಾಂಕ್ ಜನ ಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ, ಅಪಪ್ರಚಾರ ಮಾಡುವವರಿಗೆ ಖರ್ಗೆ ಎಚ್ಚರಿಕೆ
ಚಿತ್ತಾಪುರದಲ್ಲಿ ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪುತ್ರ ಪ್ರಿಯಾಂಕ್ ಖರ್ಗೆಯವರ ಕಾರ್ಯವನ್ನು ಶ್ಲಾಘಿಸಿದರು. ಅಭಿವೃದ್ಧಿ ಕಾರ್ಯಗಳ ನಡುವೆಯೂ ಅಪಪ್ರಚಾರ ಮಾಡುವ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು