11:22 PM (IST) Jul 26

Karnataka News Live 26th July: ಕಾರವಾರ ಕಾರಾಗೃಹಕ್ಕೆ ಕರೆತರುತ್ತಿದ್ದ ಆರೋಪಿ ಕಾರಿನಿಂದ ಜಿಗಿದು ಪರಾರಿ, ಭಟ್ಕಳದಲ್ಲಿ ಬಂಧನ

ಚೆಕ್ ಬೌನ್ಸ್ ಪ್ರಕರಣದ ಆರೋಪಿ ಕಾರವಾರ ಜೈಲಿಗೆ ಹೋಗುವಾಗ ಕುಮಟಾ ಟೋಲ್ ಬಳಿ ಕಾರಿನಿಂದ ಜಿಗಿದು ಪರಾರಿಯಾಗಿದ್ದ. ಕುಮಟಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಭಟ್ಕಳದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
Read Full Story
10:43 PM (IST) Jul 26

Karnataka News Live 26th July: ಟಾಟಾಗೆ ಸೆಡ್ಡು ಹೊಡೆದ ನಿಸಾನ್, ಭಾರತದಲ್ಲೇ ತಯಾರಾದ ಮ್ಯಾಗ್ನೈಟ್ ಕಾರಿಗೆ 5 ಸ್ಟಾರ್ ಸೇಫ್ಟಿ

ನಿಸಾನ್ ಮ್ಯಾಗ್ನೈಟ್ ಕಾರು ಸಂಪೂರ್ಣವಾಗಿ ಭಾರತದಲ್ಲೇ ತಯಾರಿಗಿದೆ. ವಿಶೇಷ ಅಂದರೆ ಮ್ಯಾಗ್ನೈಟ್ ಕಾರು ಸುರಕ್ಷತಾ ರೇಟಿಂಗ್‌ನಲ್ಲಿ 5 ಸ್ಟಾರ್ ಪಡೆದುಕೊಂಡಿದೆ. ಇದರ ಬೆಲೆ, ಫೀಚರ್ಸ್ ಏನು?

Read Full Story
10:05 PM (IST) Jul 26

Karnataka News Live 26th July: 'ಎಕ್ಕ' ಯಶಸ್ಸಿನ ಸಂಭ್ರಮ - ಬಾಗಲಕೋಟೆಗೆ ನಟ ಯುವ ರಾಜ್ ಕುಮಾರ್ ಭೇಟಿ; ಅಪ್ಪು ಫ್ಯಾನ್ಸ್‌ನಿಂದ ಅದ್ದೂರಿ ಸ್ವಾಗತ!

ಎಕ್ಕ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಟ ಯುವ ರಾಜಕುಮಾರ್ ಬಾಗಲಕೋಟೆಗೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು. ಚಿತ್ರದ ಯಶಸ್ಸು ಮತ್ತು ಯುವರ ನಟನೆಯನ್ನು ಅಭಿಮಾನಿಗಳು ಮೆಚ್ಚಿಕೊಂಡರು. ಚಿತ್ರಮಂದಿರದಲ್ಲಿ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿತ್ತು.
Read Full Story
09:48 PM (IST) Jul 26

Karnataka News Live 26th July: ನಾಗರ ಹಾವನ್ನೇ ಕಚ್ಚಿ ಅಸ್ವಸ್ಥಗೊಂಡ 1 ವರ್ಷದ ಮಗು ಚೇತರಿಕೆ, ವಿಷ ಸರ್ಪ ಸಾವು

ಆಟವಾಡುತ್ತಿದ್ದ ವೇಳೆ ಸಾಗಿ ಬಂದ ನಾಗರ ಹಾವನ್ನು ಮಗು ಆಟಿಕೆ ಎಂದು ತಿಳಿದು ಕೈಯಲ್ಲಿ ಹಿಡಿದು ಕಚ್ಚಿದೆ. ಇದರ ಪರಿಣಾಮ ಅಸ್ವಸ್ಥಗೊಂಡಿದ್ದ 1 ವರ್ಷದ ಮಗು ಆಸ್ಪತ್ರೆಯಲ್ಲಿ ಚೇತರಿಕೆ ಕಂಡಿದ್ದರೆ, ವಿಷ ಸರ್ಪ ಸತ್ತಿದೆ.

Read Full Story
09:09 PM (IST) Jul 26

Karnataka News Live 26th July: ಏನು ಪ್ರಾರ್ಥನೆ ಮಾಡಬೇಕೋ ಮಾಡಿದ್ದೇನೆ, ಕೋಡಿಶ್ರೀಗಳ ಭೇಟಿ ಮಾಡಿದ ಡಿಕೆ ಶಿವಕುಮಾರ್

ಡಿಸಿಎಂ ಡಿಕೆ ಶಿವಕುಮಾರ್ ಕೋಡಿ ಶ್ರೀಗಳ ಭೇಟಿ ಮಾಡಿದ್ದಾರೆ. ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದ ಡಿಕೆಶಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ನಾನು ಏನು ಪ್ರಾರ್ಥನೆ ಬೇಕೋ ಮಾಡಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Read Full Story
08:32 PM (IST) Jul 26

Karnataka News Live 26th July: ಧರ್ಮಸ್ಥಳ ಕೇಸ್ SIT ತನಿಖೆ, 8 ಗಂಟೆ ವಿಚಾರಣೆ ಬಳಿಕ ಅಜ್ಞಾತ ಸ್ಥಳಕ್ಕೆ ಮುಸುಕುಧಾರಿ

ಧರ್ಮಸ್ಥಳ ತೆಲೆಬುರುಡೆ ಪ್ರಕರಣದ ವಿಚಾರಣೆ ತೀವ್ರಗೊಂಡಿದೆ. ಎಸ್ಐಟಿ ಅಧಿಕಾರಿಗಳು ದೂರು ನೀಡಿದ್ದ ಮುಸುಕುಧಾರಿ ವ್ಯಕ್ತಿಯನ್ನು ಸತತ 8 ಗಂಟೆಗಳ ಕಾಲ ವಿಚಾರಣೆ ಮಾಡಿದ್ದಾರೆ.ಇಂದಿನ ವಿಚಾರಣೆ ಅಂತ್ಯಗೊಂಡ ಬೆನ್ನಲ್ಲೇ ಮುಸುಕುಧಾರಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

Read Full Story
08:05 PM (IST) Jul 26

Karnataka News Live 26th July: ನವೆಂಬರ್‌ನಲ್ಲಿ ಭೂಮಿ ಮೇಲೆ ಏಲಿಯನ್ ನೌಕೆ ದಾಳಿ, ಸಂಶೋಧನೆ ಬೆನ್ನಲ್ಲೇ ವಿಜ್ಞಾನಿಗಳು ಅಲರ್ಟ್

ಪ್ರವಾಹ, ಭೂಕುಸಿತ, ಭೂಕಂಪ ಸೇರಿ ಹಲವು ವಿಕೋಪಗಳಿಂದ ಜನರು ಹೈರಾಣಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಭೂಮಿಯ ಸರ್ವನಾಶಕ್ಕೆ ಏಲಿಯನ್ ಟೊಂಕ ಕಟ್ಟಿ ನಿಂತಿದೆಯಾ? ಹೌದು ಎನ್ನುತ್ತಿದೆ ವಿಜ್ಞಾನಿಗಳ ವರದಿ. ನವೆಂಬರ್‌ನಲ್ಲಿ ಏಲಿಯನ್ ಬಾಹ್ಯಾಕಾಶ ನೌಕೆ ಭೂಮಿ ಮೇಲೆ ದಾಳಿ ಮಾಡಲಿದೆ ಎಂದು ಅಧ್ಯಯನ ವರದಿ ಹೇಳಿದೆ.

Read Full Story
07:08 PM (IST) Jul 26

Karnataka News Live 26th July: ಗರ್ಭಿಣಿಯಾಗಿ ಕಾರ್ಗಿಲ್ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್ ಯಶಿಕಾ ರೋಚಕ ಪಯಣ

ಕ್ಯಾಪ್ಟನ್ ಯಶಿಕಾ ತ್ಯಾಗಿ ರೋಚಕ ಪಯಣ ಎಲ್ಲರಿಗೂ ಸ್ಪೂರ್ತಿಯಾಗಿದೆ. ಪುಟ್ಟ ಮಗುವನ್ನು ಬೆನ್ನ ಮೇಲೆ ಹೊತ್ತು, ಗರ್ಭಿಣಿಯಾಗಿದ್ದ ಕ್ಯಾಪ್ಟನ್ ಯಶಿಕಾ ತ್ಯಾಗಿ ಕಾರ್ಗಿಲ್ ಯುದ್ಧ ಭೂಮಿಯಲ್ಲಿ ಸೇವೆ ಸಲ್ಲಿಸಿದ್ದರು. ಕಾರ್ಗಿಲ್ ವಿಜಯ್ ದಿವಸದ ಈ ದಿನ ಹೆಮ್ಮೆಯ ಸೇನಾಧಿಕಾರಿ ಯಶಿಕಾ ರೋಚಕ ಪಯಣ ಇಲ್ಲಿದೆ.

Read Full Story
06:19 PM (IST) Jul 26

Karnataka News Live 26th July: ಕೊಪ್ಪಳ ಬಲ್ಡೋಟಾ ಸಿಬ್ಬಂದಿಯಿಂದ ಕುರಿಗಾಹಿ ಮೇಲೆ ಹಲ್ಲೆ ಪ್ರಕರಣ; ಮತ್ತೊಂದು ಹಂತಕ್ಕೆ ತಲುಪಿದ ರೈತರ ಹೋರಾಟ!

ಕೊಪ್ಪಳದ ಬಸಾಪುರ ಗ್ರಾಮದಲ್ಲಿ ಬಲ್ಡೋಟಾ ಕಾರ್ಖಾನೆಯ ಸಿಬ್ಬಂದಿ ಮತ್ತು ಕುರಿಗಾಹಿಗಳ ನಡುವೆ ನಡೆದ ಹಲ್ಲೆಯಿಂದಾಗಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಕಾರ್ಖಾನೆಯ ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ತೆರಳಿದ್ದ ಕುರಿಗಾಹಿಗಳ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿದ್ದು, ಎರಡೂ ಕಡೆಯಿಂದ ದೂರು ದಾಖಲಾಗಿದೆ.
Read Full Story
06:18 PM (IST) Jul 26

Karnataka News Live 26th July: ಹೊಸ ಫೀಚರ್, ಅತ್ಯಾಕರ್ಷಕ ಮಹೀಂದ್ರ 3XO REVX ಕಾರು ಲಾಂಚ್, ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಮಹೀಂದ್ರ ಹೊಸ 3XO REVX ಕಾರು ಬಿಡುಗಡೆ ಮಾಡಿದೆ. ಹೊಸ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆ ಅತ್ಯಾಕರ್ಷಕ ಕಾರಿನ ಬೆಲೆ ಎಷ್ಟು?

Read Full Story
05:52 PM (IST) Jul 26

Karnataka News Live 26th July: ಕೊಡಗಿನಲ್ಲಿ ಅಕ್ರಮ ಗೋಮಾಂಸ ಮಾರಾಟ - ಅಸ್ಸಾಂ ಮೂಲದ ಕಾರ್ಮಿಕ ಬಂಧನ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ಅಕ್ರಮ ಗೋಮಾಂಸ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 15 ಕೆಜಿ ಗೋಮಾಂಸ ವಶಪಡಿಸಿಕೊಳ್ಳಲಾಗಿದೆ. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆದಿದೆ.
Read Full Story
05:32 PM (IST) Jul 26

Karnataka News Live 26th July: 'ನಾಲ್ವಡಿ ಹಳೇ ಮೈಸೂರು ಭಾಗಕ್ಕೆ ಮಾತ್ರ, ಸಿದ್ದರಾಮಯ್ಯ ಇಡೀ ಕರ್ನಾಟಕಕ್ಕೆ ಕೊಡುಗೆ' ಯತೀಂದ್ರ ಹೇಳಿಕೆ ಬೆಂಬಲಿಸಿದ ಸಚಿವ ಎಂಬಿ ಪಾಟೀಲ್

ಸಚಿವ ಎಂಬಿ ಪಾಟೀಲ್ ಸಿಎಂ ಪುತ್ರ ಡಾ. ಯತೀಂದ್ರ ಅವರ 'ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ಗಿಂತ ಸಿದ್ದರಾಮಯ್ಯ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ' ಎಂಬ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

Read Full Story
05:16 PM (IST) Jul 26

Karnataka News Live 26th July: ಹೋಮ್ ಗಾರ್ಡ್ ನೇಮಕಾತಿ ವೇಳೆ ಕುಸಿದ ಯವತಿ ಮೇಲೆ ಆ್ಯಂಬುಲೆನ್ಸ್‌ನಲ್ಲಿ ಸಾಮೂಹಿಕ ಅತ್ಯಾ*ರ

ಹೋಮ್ ಗಾರ್ಡ್ ನೇಮಕಾತಿಯ ದೈಹಿಕ ಪರೀಕ್ಷೆ ವೇಳೆ ಯುವತಿ ಅಸ್ವಸ್ಥಗೊಂಡು ಕುಸಿದು ಬಿದ್ದ ಯುವತಿಯನ್ನು ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದಿದೆ. ಆದರೆ ದುರಂತ ಅಂದರೆ ಯುವತಿನ್ನು ಆಸ್ಪತ್ರೆ ಸಾಗಿಸುವ ನಡುವೆ ಆ್ಯಂಬುಲೆನ್ಸ್‌ನಲ್ಲಿ ಸಾಮೂಹಿಕ ಅತ್ಯಾ*ರ ನಡೆಸಲಾಗಿದೆ.

Read Full Story
04:42 PM (IST) Jul 26

Karnataka News Live 26th July: ಧರ್ಮಸ್ಥಳ ಶವಹೂಟತಿಟ್ಟ ಪ್ರಕರಣ, ಸತತ 5 ಗಂಟೆಯಿಂದ ಮುಸುಕುಧಾರಿಯ ವಿಚಾರಣೆ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ದೂರು ನೀಡಿದ ಮುಸುಕುಧಾರಿ ವ್ಯಕ್ತಿಯನ್ನು ಕಳೆದ 5 ಗಂಟೆಗಳಿಂದ ಸತತ ವಿಚಾರಣೆ ನಡೆಸಲಾಗುತ್ತಿದೆ. ಎಸ್‌ಐಟಿ ತಂಡ ಮಂಗಳೂರಿಗೆ ಆಗಮಿಸಿದ ಬೆನ್ನಲ್ಲೇ ಇದೀಗ ತನಿಖೆ ತೀವ್ರಗೊಂಡಿದೆ.

Read Full Story
04:05 PM (IST) Jul 26

Karnataka News Live 26th July: ಫ್ರೆಂಡ್‌ಶಿಪ್ ದೈಹಿಕ ಸಂಪರ್ಕಕ್ಕೆ ಕೊಟ್ಟ ಲೈಸೆನ್ಸ್ ಅಲ್ಲ, ಅತ್ಯಾ*ರ ಆರೋಪಿಗೆ ಬೇಲ್ ನಿರಾಕರಿಸಿದ ಕೋರ್ಟ್

ಫ್ರೆಂಡ್‌ಶಿಪ್ ಇದೆ ಎಂದ ಮಾತ್ರಕ್ಕೆ ಅದು ನಿಮಗೆ ದೈಹಿಕ ಸಂಪರ್ಕಕ್ಕೆ ಕೊಟ್ಟ ಅನುಮತಿಯಲ್ಲ ಎಂದು ಹೈಕೋರ್ಟ್ ಅತ್ಯಾ*ರ ಆರೋಪಿ/ ಜಾಮೀನು ನಿರಾಕರಿಸಿದ ಘಟನೆ ನಡೆದಿದೆ.

Read Full Story
03:56 PM (IST) Jul 26

Karnataka News Live 26th July: ಧರ್ಮಸ್ಥಳ ಕೇಸ್‌ - ಅನಾಮಿಕ ತಂದುಕೊಟ್ಟ ತಲೆಬುರುಡೆ ರಹಸ್ಯ ಹೊರತೆಗೆಯಲು ಮುಂದಾದ ಎಸ್‌ಐಟಿ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆ ಮಂಗಳೂರಿನಲ್ಲಿ ಮುಂದುವರೆದಿದ್ದು, ಮುಸುಕುಧಾರಿ ವ್ಯಕ್ತಿಯ ವಿಚಾರಣೆ ನಡೆಸಲಾಗಿದೆ. ಎಸ್ಐಟಿ ಅಧಿಕಾರಿಗಳು ಬುರುಡೆಯ ಸತ್ಯಾಸತ್ಯತೆ ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ದೂರುದಾರನ ಹೇಳಿಕೆಗಳನ್ನು ಪರಿಶೀಲಿಸಿ, ಸ್ಥಳೀಯರನ್ನು ವಿಚಾರಿಸಲು ಯೋಜಿಸಲಾಗಿದೆ.
Read Full Story
03:19 PM (IST) Jul 26

Karnataka News Live 26th July: ಧರ್ಮಸ್ಥಳ ಕೇಸ್‌ - ಅನಾಮಿಕ ವ್ಯಕ್ತಿಯ ಮುಸುಕು ತೆರವುಗೊಳಿಸಿ ಎಸ್‌ಐಟಿ ಡ್ರಿಲ್‌!

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಅನಾಮಿಕ ವ್ಯಕ್ತಿಯ ವಿಚಾರಣೆ ಇಂದು ಎಸ್‌ಐಟಿ ಅಧಿಕಾರಿಗಳಿಂದ ನಡೆಸಲಾಗಿದೆ. ಶವಗಳನ್ನು ಹೂತಿಟ್ಟ ಸ್ಥಳಗಳನ್ನು ಬಹಿರಂಗಪಡಿಸಲು ದೂರುದಾರ ಸಿದ್ಧ ಎಂದು ಹೇಳಿದ್ದಾರೆ. ಲೈಂಗಿಕ ದೌರ್ಜನ್ಯದ ಬಗ್ಗೆಯೂ ಎಸ್‌ಐಟಿ ಪ್ರಶ್ನೆ ಮಾಡಲಿದೆ.
Read Full Story
01:53 PM (IST) Jul 26

Karnataka News Live 26th July: ಕೆಆರ್‌ ಆಸ್ಪತ್ರೆಗೆ ಸುಣ್ಣ ಹೊಡಿಸೋಕೆ ಆಗ್ಲಿಲ್ಲ, ನಾಲ್ವಡಿ ಜೊತೆ ಹೋಲಿಕೆ ಮಾಡ್ತೀರಾ? ಯತೀಂದ್ರಗೆ ಜಾಡಿಸಿದ ಪ್ರತಾಪ್‌ ಸಿಂಹ

ಮೈಸೂರು ಅರಸರ ಕೊಡುಗೆಗಿಂತ ತಂದೆ ಸಿದ್ದರಾಮಯ್ಯ ಕೊಡುಗೆ ದೊಡ್ಡದು ಎಂಬ ಯತೀಂದ್ರ ಹೇಳಿಕೆಗೆ ವ್ಯಾಪಕ ಟೀಕೆ. ಪ್ರತಾಪ್ ಸಿಂಹ ಯತೀಂದ್ರಗೆ ತಿರುಗೇಟು ನೀಡಿದ್ದು, ಸಿಎಂ ಸಿದ್ದರಾಮಯ್ಯ ಬಿಜೆಪಿಗಿಂತ ನಾವು ಹೆಚ್ಚು ಕೆಲಸ ಮಾಡಿದ್ದೇವೆ ಎಂದಿದ್ದಾರೆ.
Read Full Story
01:33 PM (IST) Jul 26

Karnataka News Live 26th July: ವೇಲಂಕಣಿ ಜಾತ್ರೆ - ಗೋವಾ, ಕರ್ನಾಟಕ, ತಮಿಳುನಾಡಿನ ಜನತೆಗಾಗಿ ವಿಶೇಷ ರೈ ಲು

Indian Railways: ಈ ರೈಲುಗಳು ಗೋವಾದ ವಾಸೋ-ಡ-ಗಾಮಾದಿಂದ ವೇಲಂಕಣಿಗೆ ಮತ್ತು ವಾಪಸ್ ಸಂಚರಿಸಲಿದ್ದು, ಆಗಸ್ಟ್ 27 ರಿಂದ ಸೆಪ್ಟೆಂಬರ್ 8 ರವರೆಗೆ ಕಾರ್ಯನಿರ್ವಹಿಸುತ್ತವೆ. ಜಾತ್ರೆಗೆ ತೆರಳುವ ಭಕ್ತರಿಗೆ ಈ ರೈಲುಗಳು ಅನುಕೂಲಕರವಾಗಲಿವೆ.

Read Full Story
01:26 PM (IST) Jul 26

Karnataka News Live 26th July: ರಮ್ಯಾ ಬೆನ್ನಲ್ಲೇ, ಕೊಲೆ ಆರೋಪಿ ದರ್ಶನ್‌ ಬಗ್ಗೆ ರಾಜ್‌ ಬಿ ಶೆಟ್ಟಿ ಮಾತನಾಡಿರುವ ವಿಡಿಯೋ ವೈರಲ್‌!

ದರ್ಶನ್‌ ಪ್ರಕರಣದ ಜಾಮೀನು ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ್ದು, ರಮ್ಯಾ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ರಾಜ್ ಬಿ ಶೆಟ್ಟಿ ದರ್ಶನ್‌ ಬಗ್ಗೆ ಖಡಕ್‌ ಅಭಿಪ್ರಾಯ ವ್ಯಕ್ತಪಡಿಸಿದ್ದ ಹಳೆಯ ವಿಡಿಯೋ ವೈರಲ್‌ ಆಗಿದೆ.
Read Full Story