Asianet Suvarna News Asianet Suvarna News

ಕೇಂದ್ರ ಬಜೆಟ್‌ನ ಶ್ರೀ ಅನ್ನಕ್ಕೆ ಕರ್ನಾಟಕ ಪ್ರೇರಣೆ: ಮೋದಿ

ಇನ್ನು ಮುಂದೆ ಸಿರಿ​ಧಾ​ನ್ಯವು ಶ್ರೀ ಅನ್ನ​ವಾಗಿ ದೇಶ​ಕ್ಕೆ ಪರಿ​ಚ​ಯ​ವಾ​ಗ​ಲಿದೆ. ಶ್ರೀ ಅನ್ನ ಅಂದರೆ ಆಹಾ​ರ​ಧಾ​ನ್ಯ​ಗ​ಳಲ್ಲೇ ಶ್ರೇಷ್ಠ​ವಾ​ದ​ದ್ದು. ಕರ್ನಾ​ಟ​ಕವು ರಾಗಿ, ನವಣೆ, ಸಾಮೆ, ಸಜ್ಜೆ, ಬಿಳಿ ಜೋಳ, ಬರ​ಗು, ಕುಟ್ಟು ಸೇರಿ ಹಲವು ಸಿರಿ​ಧಾ​ನ್ಯ​ಗ​ಳನ್ನು ಕರ್ನಾ​ಟ​ಕ​ದಲ್ಲಿ ಬೆಳೆ​ಯ​ಲಾ​ಗು​ತ್ತಿ​ದೆ. ಈ ಬಾರಿಯ ಬಜೆ​ಟ್‌​ನಲ್ಲಿ ಶ್ರೀ ಅನ್ನದ ಉತ್ಪಾ​ದ​ನೆಗೆ ಹೆಚ್ಚಿನ ಆದ್ಯತೆ ನೀಡ​ಲಾ​ಗಿದೆ. ಈ ಮೂಲಕ ಬರ​ಪೀ​ಡಿತ ಕರ್ನಾ​ಟ​ಕದ ರೈತ​ರಿಗೆ ಅನು​ಕೂಲ ಆಗ​ಲಿದೆ ಎಂದು ಅಭಿ​ಪ್ರಾ​ಯ​ಪ​ಟ್ಟ​ ಪ್ರಧಾನಿ ನರೇಂದ್ರ ಮೋದಿ. 

Karnataka Motivation for Shri Anna of Union Budget Says PM Narendra Modi grg
Author
First Published Feb 7, 2023, 6:30 AM IST

ತುಮ​ಕೂ​ರು(ಫೆ.07):  ಕೇಂದ್ರ ಬಜೆ​ಟ್‌​ನಲ್ಲಿ ಪ್ರಸ್ತಾ​ಪಿ​ಸಿದ ‘ಶ್ರೀ ಅನ್ನ’ ಹೆಸ​ರಿಗೆ ಕರ್ನಾ​ಟ​ಕವೇ ಪ್ರೇರಣೆ. ಕರ್ನಾ​ಟ​ಕದ ಜನ ಸಿರಿ​ಧಾ​ನ್ಯ​ಗಳ ಮಹ​ತ್ವ​ವನ್ನು ಅರ್ಥ ಮಾಡಿ​ಕೊಂಡಿ​ದ್ದಾರೆ. ಅದೇ ಕಾರ​ಣಕ್ಕೆ ಇಲ್ಲಿನ ಜನ ಆ ಆಹಾರ ಧಾನ್ಯ​ಗ​ಳನ್ನು ಸಿರಿ​ಧಾನ್ಯ ಎಂದು ಕರೆ​ಯುತ್ತಾರೆ. ಕರ್ನಾ​ಟ​ಕದ ಜನರ ಭಾವ​ನೆ​ಯನ್ನು ಗೌರ​ವಿ​ಸಿ​ಕೊಂಡು ದೇಶ​ದಲ್ಲಿ ಶ್ರೀ ಅನ್ನ​ವನ್ನು ಪ್ರಚು​ರ​ಪ​ಡಿ​ಸ​ಲಾ​ಗು​ವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿ​ದ​ರು. ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಬಿದರೆಹಳ್ಳ ಕಾವಲ್‌ ಬಳಿಯ ಎಚ್‌ಎಎಲ್‌ ಲಘು ಹೆಲಿಕಾಪ್ಟರ್‌ ತಯಾರಿಕಾ ಘಟಕ ಲೋಕಾರ್ಪಣೆ ಹಾಗೂ ಜಲ ಜೀವನ್‌ ಮಿಷನ್‌ ಯೋಜನೆಗೆ ಶಂಕು​ಸ್ಥಾ​ಪನೆ ನೆರ​ವೇರಿಸಿ ಸೋಮ​ವಾರ ಮಾತ​ನಾಡಿದ​ರು.

ಇನ್ನು ಮುಂದೆ ಸಿರಿ​ಧಾ​ನ್ಯವು ಶ್ರೀ ಅನ್ನ​ವಾಗಿ ದೇಶ​ಕ್ಕೆ ಪರಿ​ಚ​ಯ​ವಾ​ಗ​ಲಿದೆ. ಶ್ರೀ ಅನ್ನ ಅಂದರೆ ಆಹಾ​ರ​ಧಾ​ನ್ಯ​ಗ​ಳಲ್ಲೇ ಶ್ರೇಷ್ಠ​ವಾ​ದ​ದ್ದು. ಕರ್ನಾ​ಟ​ಕವು ರಾಗಿ, ನವಣೆ, ಸಾಮೆ, ಸಜ್ಜೆ, ಬಿಳಿ ಜೋಳ, ಬರ​ಗು, ಕುಟ್ಟು ಸೇರಿ ಹಲವು ಸಿರಿ​ಧಾ​ನ್ಯ​ಗ​ಳನ್ನು ಕರ್ನಾ​ಟ​ಕ​ದಲ್ಲಿ ಬೆಳೆ​ಯ​ಲಾ​ಗು​ತ್ತಿ​ದೆ. ಈ ಬಾರಿಯ ಬಜೆ​ಟ್‌​ನಲ್ಲಿ ಶ್ರೀ ಅನ್ನದ ಉತ್ಪಾ​ದ​ನೆಗೆ ಹೆಚ್ಚಿನ ಆದ್ಯತೆ ನೀಡ​ಲಾ​ಗಿದೆ. ಈ ಮೂಲಕ ಬರ​ಪೀ​ಡಿತ ಕರ್ನಾ​ಟ​ಕದ ರೈತ​ರಿಗೆ ಅನು​ಕೂಲ ಆಗ​ಲಿದೆ ಎಂದು ಅಭಿ​ಪ್ರಾ​ಯ​ಪ​ಟ್ಟ​ರು. ಇದೇ ವೇಳೆ ರಾಗಿ ಮುದ್ದೆ ಹಾಗೂ ರಾಗಿ ರೊಟ್ಟಿ ವಿಚಾರ ಪ್ರಸ್ತಾ​ಪಿ​ಸಿದ ಅವರು, ಅದ​ರ ಸವಿ​ಯನ್ನು ಯಾ​ರಾ​ದರೂ ಮರೆ​ಯಲು ಸಾಧ್ಯವೇ? ಎಂದರು.

HAL ಹೆಸರಿನಲ್ಲಿ ಕುಟುಕಿದವರಿಗೆ ಗುಬ್ಬಿ ಹೆಲಿಕಾಪ್ಟರ್ ಘಟಕ ಉತ್ತರ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!

ಇದೇ ವೇಳೆ ತಮ್ಮ ಭಾಷ​ಣ​ದಲ್ಲಿ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹ ಹಾಗೂ ಗುಬ್ಬಿ ಚನ್ನಬಸವೇಶ್ವರ ಸ್ವಾಮಿ ಹಾಗೂ ಚಿದಂಬರಾಶ್ರಮ ಕ್ಷೇತ್ರಗಳ ಹೆಸರನ್ನೂ ಪ್ರಸ್ತಾ​ಪಿ​ಸಿದ ಅವರು, ತುಮಕೂರು ಆಧ್ಯಾತ್ಮದ ಜೊತೆಗೆ ಆಧುನಿಕತೆಯಿಂದಲೂ ಗಮನಸೆಳೆಯುತ್ತಿದೆ ಎಂದ​ರು.

ಶಕ್ತಿಮಾನ್‌ ಭಾರತ​-ಪಿಎಂ: ಶಕ್ತಿಮಾನ್‌ ಭಾರತ ನಿರ್ಮಿ​ಸುವ ನಿಟ್ಟಿ​ನಲ್ಲಿ ಈ ಬಾರಿಯ ಬಜೆಟ್‌ ಮಂಡಿಸಲಾಗಿದ್ದು, ಹಳ್ಳಿಗಳು, ಬಡವರು, ಆದಿವಾಸಿಗಳು, ಮಹಿಳೆಯರು, ಯುವಜನರಿಗಾಗಿ ಈ ಬಜೆಟ್‌ನಲ್ಲಿ ಅನೇಕ ಗಟ್ಟಿನಿರ್ಧಾರಗಳನ್ನು ತೆಗೆ​ದು​ಕೊ​ಳ್ಳ​ಲಾ​ಗಿದೆ ಎಂದು ಪ್ರಧಾನಿ ಮೋದಿ ಅಭಿ​ಪ್ರಾ​ಯ​ಪ​ಟ್ಟ​ರು.

ಗುಬ್ಬಿ HAL ಘಟಕ ಪ್ರಧಾನಿ ಮೋದಿ ಅಡಗಲ್ಲು ಹಾಕಿ ಮೋದಿ ಉದ್ಘಾಟನೆ, ಇದು ಪರಿವರ್ತನೆ ಎಂದ ಸಿಎಂ ಬೊಮ್ಮಯಿ!

ಈ ಬಾರಿ ಸರ್ವ​ಸ್ಪರ್ಶಿ, ಸರ್ವ ಹಿತ​ಕಾರಿ, ಸರ್ವ​ರ​ನ್ನೊ​ಳ​ಗೊಂಡಿ​ರುವ, ಸರ್ವ ಸುಖ​ಕಾರಿ, ಸರ್ವ ಪ್ರಿಯ ಬಜೆಟ್‌ ಮಂಡಿ​ಸ​ಲಾ​ಗಿ​ದೆ. ಈ ಬಾರಿಯ ಕೇಂದ್ರ ಬಜೆಟ್‌ ಉದ್ಯೋ​ಗಾ​ವ​ಕಾಶಗಳ ಜತೆಗೆ, ಸ್ವಯಂ ಉದ್ಯೋ​ಗದ ಅವ​ಕಾ​ಶ​ಗ​ಳನ್ನೂ ಹೆಚ್ಚಿ​ಸು​ತ್ತ​ದೆ ಎಂದ​ರು.

ಕೇಂದ್ರ ಸರ್ಕಾ​ರವು ಪ್ರತಿ ಬಡ​ವ​ರಿಗೆ ಆಶ್ರಯ ಒದ​ಗಿ​ಸಲು 70 ಸಾವಿರ ಕೋಟಿ ರುಪಾಯಿ ಒದ​ಗಿ​ಸು​ತ್ತಿದೆ. ಪಿಎಂ ಕಿಸಾನ್‌ ಸಮ್ಮಾನ್‌ ಶಕ್ತಿ ಯೋಜನೆಯಡಿ ಸಣ್ಣ ರೈತರಿಗೆ ಅನುಕೂಲವಾಗಲಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಗ್ಯಾರಂಟಿ ರಹಿತ ಸಾಲ ಸೌಲಭ್ಯ, ಕಮ್ಮಾರ, ಅಕ್ಕಸಾಲಿಗ, ಬಡಗಿ, ಶಿಲ್ಪಿ ಮುಂತಾದ ಕುಶಲ ಕರ್ಮಿಗಳಿಗೆ ವಿಕಾಸ ಯೋಜನೆಯಡಿ ಕೌಶಲ್ಯ ವೃದ್ಧಿಸುವ ನಿಟ್ಟಿನಲ್ಲಿ ಸಹಾಯ ನೀಡಲಾಗುತ್ತಿದೆ ಎಂದರು.

Follow Us:
Download App:
  • android
  • ios