ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಸಚಿವರ ಸಭೆ ಕರೆದಿದ್ದಾರೆ. ಈ ಔತಣಕೂಟದ ರೂಪದ ಸಭೆಯಲ್ಲಿ ಸುಮಾರು 15 ಸಚಿವರು ಭಾಗವಹಿಸಲಿದ್ದು, ಕಗ್ಗಂಟು ನಿವಾರಣೆ ಕುರಿತು ಮುಖ್ಯಮಂತ್ರಿಗಳು ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಬೆಂಗಳೂರು (ಮಾ.13): ಒಳ ಮೀಸಲಾತಿ ಕಗ್ಗಂಟು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಹಿರಿಯ ಸಚಿವರಿಗಾಗಿ ಸೋಮವಾರ ಔತಣಕೂಟ ಏರ್ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Add Asianetnews Kannada as a Preferred SourcegooglePreferred

ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಸಚಿವರಾದ ಕೆ.ಎಚ್‌.ಮುನಿಯಪ್ಪ, ಎಚ್‌.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್‌, ಎಚ್‌.ಕೆ.ಪಾಟೀಲ್‌, ಎಂ.ಬಿ.ಪಾಟೀಲ್‌, ಬೈರತಿ ಸುರೇಶ್‌, ಪ್ರಿಯಾಂಕ್‌ ಖರ್ಗೆ, ಸಂತೋಷ್‌ ಲಾಡ್‌ ಸೇರಿ ಸುಮಾರು 15 ಸಚಿವರನ್ನು ಔತಣ ಕೂಟಕ್ಕೆ ಆಹ್ವಾನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಡವರ BPL ಕಾರ್ಡ್ APL ಆಗಿ ಪರಿವರ್ತನೆ! ವಿಧಾನಸಭೆಯಲ್ಲಿ ಪ್ರಪಕ್ಷಾತೀತ ಆಕ್ರೋಶ!

ಪರಿಶಿಷ್ಟ ಜಾತಿಯ ಒಳಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ಔತಣಕೂಟದ ರೂಪದಲ್ಲಿ ಸಭೆ ಆಯೋಜಿಸಲಾಗಿದ್ದು, ಪ್ರಮುಖ ಸಚಿವರಿಂದ ಮುಖ್ಯಮಂತ್ರಿ ಅವರು ಗೊಂದಲ ನಿವಾರಣೆ ಕುರಿತು ಅಭಿಪ್ರಾಯ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

Karnataka inter-caste marriage bill 2026: 'ಇವ ನಮ್ಮವ' ವಿಧೇಯಕ: ಮರ್ಯಾದೆಗೇಡು ಹತ್ಯೆ ತಡೆವ ಮಸೂದೆಗೆ ಸಂಪುಟ ಸಭೆ ಅಸ್ತು