ನಟ ಜಗ್ಗೇಶ್ ಹಾಗೂ ರಮ್ಯಾ ನಡುವೆ ಮತ್ತೆ ಟ್ವೀಟ್ ವಾರ್ ನಡೆದಿದ್ದು, ಭಾರತೀಯ ಸೇನಾ ವಿಂಗ್ ಕಮಾಂಡರ್ ಪಾಕಿಸ್ತಾನ ಸೆರೆ ಹಿಡಿದ ವಿಚಾರವಾಗಿ ಮೋದಿ ಕಾಲೆಳೆದ ರಮ್ಯಾಗೆ ಜಗ್ಗೇಶ್ ಟಾಂಗ್ ನೀಡಿದ್ದಾರೆ.
ಬೆಂಗಳೂರು : ನಟ ಜಗ್ಗೇಶರ್ ಹಾಗೂ ರಮ್ಯಾ ನಡುವೆ ಮತ್ತೆ ಟ್ವೀಟ್ ವಾರ್ ನಡಿದಿದೆ.
ಭಾರತದ ವಿಂಗ್ ಕಮಾಂಡರ್ ಅವರನ್ನು ಪಾಕ್ ಪಡೆಗಳು ಸೆರೆ ಹಿಡಿದಿದ್ದು, ಈ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದು, ಪ್ರಧಾನಿಯವರೇ ಅವರನ್ನು ವಾಪಸ್ ಕರೆತರುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಅಮೆರಿಕಾಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್ ಕರೆ
ಟ್ವೀಟ್ ಗೆ ಪ್ರತಿಯಾಗಿ ನಟ ಜಗ್ಗೇಶ್ ಅವರು ಟ್ವೀಟ್ ಮಾಡಿದ್ದು, ಕಮಾಂಡರ್ ಸೆರೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯರ್ಥ ಮಾತುಗಳನ್ನು ಆಡಲು ಶುರು ಮಾಡಿದ್ದಾಗಿ ರಮ್ಯಾ ಹೆಸರನ್ನು ಬಳಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಪುಲ್ವಾಮ ದಾಳಿ : ಪಾಕಿಸ್ತಾನಕ್ಕೆ ಸಾಕ್ಷ್ಯ ನೀಡಿದ ಭಾರತ
ದೇಶ ಮೆಚ್ಚುವ ನರೇಂದ್ರ ಮೋದಿ ನಿರ್ಣಯಕ್ಕೆ ಕಂಗಾಲಾಗಿದ್ದ ಸಮಯ ಸಾಧಕರು. ದೇಶದ ಸೈನಿಕ ಪಾಕಿಸ್ತಾನಕ್ಕೆ ಸೆರೆ ಸಿಕ್ಕಾಗ ಮೋದಿ ವಿರುದ್ಧ ಮಾತಾಡಲು ವಿಚಾರ ಸಿಕ್ಕಿತು ಎಂದು ಮಾತಾಡುತ್ತಿದ್ದಾರೆ. ಅದರಲ್ಲಿ ಕನ್ನಡದ ಅನ್ನ ತಿಂದವರೋರ್ವರು ವ್ಯರ್ಥ ಮಾತು ಆರಂಭಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
"
ದೇಶ ಮೆಚ್ಚುವ @narendramodi ನಿರ್ಣಯಕ್ಕೆ ಕಂಗಾಲಾಗಿದ್ದ ಸಮಯ ಸಾದಕರು!ದೇಶಸೈನಿಕ ಪಾಕ್ಗೆ ಸೆರೆಸಿಕ್ಕಾಗ!ಸಧ್ಯ ವಿಷಯಸಿಕ್ತು ಮೋದಿ ವಿರುದ್ಧ ಮಾತಾಡಲು ಎಂದು ಎದ್ದರು ಇಂದು!ಅದರಲ್ಲಿ ನಮ್ಮ ನೆಲದ ಅನ್ನತಿಂದು!ನಮ್ಮ ಕನ್ನಡಜನ ಚಪ್ಪಾಳೆ ಪಡೆದು ಜೀವನಕಂಡ ಮಹನೀಯಳಂತು
— ನವರಸನಾಯಕ ಜಗ್ಗೇಶ್ (@Jaggesh2) February 27, 2019
ಮಾತಾಡಲು ಅವಕಾಶ ಸಿಕ್ಕಿತು ಎಂದು ವ್ಯೆರ್ಥಮಾತು ಶುರುವಿಟ್ಟಳು!ಸಮಯಸಾಧಕಿ!
Kya hua Bharatiya Jhooti party? Tera Booth Not Majboot? Waiting to hear from the PM. Are you bringing our wing commander back? https://t.co/PJloew7lgh
— Divya Spandana/Ramya (@divyaspandana) February 28, 2019
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 28, 2019, 3:28 PM IST