ಬಾಲಾಕೋಟ್ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ಮಾಡಿದ್ದು, ಇದಾದ ಬಳಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕದ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಗೆ ಕರೆ ಮಾಡಿ ಮಾಡಿ ಮಾತನಾಡಿದ್ದಾರೆ.  

ನವದೆಹಲಿ : ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಬಾಲಾಕೋಟ್ ಉಗ್ರರ ನೆಲೆಗಳ ಧ್ವಂಸ ಮಾಡಿದ್ದು, ಈ ದಾಳಿ ಆಗುವವರೆಗೂ ಕೂಡ ಈ ಮಾಹಿತಿಯನ್ನು ಗುಪ್ತವಾಗಿ ಕಾಪಾಡಿಕೊಳ್ಳಲಾಗಿತ್ತು. 

Add Asianetnews Kannada as a Preferred SourcegooglePreferred

7 ಜನರನ್ನು ಹೊರತುಪಡಿಸಿ ರಕ್ಷಣಾ ಸಚಿವರಿಂದಲೂ ಕೂಡ ಈ ವಿಚಾರವನ್ನು ಗುಪ್ತವಾಗಿಯೇ ಇಡಲಾಗಿತ್ತು. 

ದಾಳಿ ಮಾಡಿದ್ದೇ ತಪ್ಪೆಂದವರ ಝಾಡಿಸಿದ ಸಂಸದ ರಾಜೀವ್ ಚಂದ್ರಶೇಖರ್

ದಾಳಿಯ ಬಳಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕದ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಗೆ ಕರೆ ಮಾಡಿ ಪಾಕಿಸ್ತಾನದ ಮೇಲೆ ಭಾರತ ನಡೆಸಿರುವ ದಾಳಿಯ ಬಗ್ಗೆ ಮಾಹಿತಿ ನೀಡಿದರು.