Asianet Suvarna News Asianet Suvarna News

ರಾಜ್ಯದಲ್ಲಿ ಸದ್ದು ಮಾಡಿದ ಹಲಾಲ್ ಮಾಂಸ ನಿಷೇಧ, ಕೋಳಿ ಕತ್ತರಿಸಿ ಸ್ವಾಮೀಜಿಯಿಂದ ಅಭಿಯಾನಕ್ಕೆ ಚಾಲನೆ!

* ಹಿಂದೂ ಧರ್ಮದಲ್ಲಿ ಅನೇಕ ಯತಿಗಳು ಇದ್ದಾರೆ

* ಸಾತ್ವಿಕ, ರಾಜಸಿ, ತಾಮಸಿ ಗುಣಗಳಿರುವ ಯತಿಗಳಿದ್ದಾರೆ

* ರಾಜಸಿ, ತಾಮಸಿ ಗುಣಗಳ ಯತಿಗಳು ನಿಮ್ಮ ಭಕ್ತರಿಗೆ ತಿಳಿಸಿ

* ಹಲಾಲ್ ಮಾಡಿರುವ ಮಾಂಸ ಖರೀದಿಸಬೇಡಿ ಅಂತ

Hindutva Group Calls for Boycott of Halal Meat During Karnataka Ugadi Festival pod
Author
Bangalore, First Published Mar 29, 2022, 10:58 AM IST

ಬೆಂಗಳೂಋಉ(ಮಾ.29): ಹಿಜಾಬ್ ವಿವಾದದ ನಂತರ ಇದೀಗ ಕರ್ನಾಟಕದಲ್ಲಿ ಹಲಾಲ್ ಮಾಂಸವನ್ನು ಬಹಿಷ್ಕರಿಸಲು ಕರೆ ನೀಡಿದ ಹಿಂದೂ ಜನ ಜಾಗೃತಿ ಹಲಾಲ್ ಮಾಂಸವನ್ನು ಬಹಿಷ್ಕರಿಸುವಂತೆ ಕರೆ ನೀಡಿದೆ. ಎಲ್ಲಾ ಹಿಂದೂಗಳಿಗೆ ಹಲಾಲ್ ಮಾಂಸವನ್ನು ಬಹಿಷ್ಕರಿಸಲು ಅವರು ರಾಷ್ಟ್ರೀಯ ಮಟ್ಟದಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಹಿಂದೂ ಜನ ಜಾಗೃತಿ ಮಂಚ್‌ನ ಮೋಹನ್ ಗೌಡರು ಹಲಾಲ್ ಮಾಂಸ ಮತ್ತು ಮುಸಲ್ಮಾನರ ಅಂಗಡಿಯಿಂದ ಮಾಂಸವನ್ನು ಖರೀದಿಸದಂತೆ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಹಲಾಲ್ ಮಾಂಸ ನಿಷೇಧಕ್ಕೆ ಆಗ್ರಹಿಸಿ ರಾಷ್ಟ್ರಮಟ್ಟದಲ್ಲಿ ಅಭಿಯಾನ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ಮುಸ್ಲಿಂ ಅಂಗಡಿಯವರಿಂದ ಮಾಂಸವನ್ನು ಖರೀದಿಸಬೇಡಿ ಎಂದು ಅವರು ಹಿಂದೂಗಳನ್ನು ಒತ್ತಾಯಿಸಿದ್ದಾರೆ. 

ಅಲ್ಲದೇ 'ಮುಸ್ಲಿಮರು ಪ್ರಾಣಿಯನ್ನು ತುಂಡರಿಸಿದಾಗ ಅದರ ಮುಖವನ್ನು ಮೆಕ್ಕಾ ಕಡೆಗೆ ತಿರುಗಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಅದೇ ಮಾಂಸವನ್ನು ಹಿಂದೂ ದೇವತೆಗಳಿಗೆ ಅರ್ಪಿಸಲಾಗುವುದಿಲ್ಲ. ಹಿಂದೂ ಧರ್ಮದಲ್ಲಿ, ಪ್ರಾಣಿಯನ್ನು ಹಿಂಸಿಸಿ (ವಿದ್ಯುತ್) ಆಘಾತದಿಂದ ಕೊಲ್ಲುವುದನ್ನು ನಾವು ನಂಬುವುದಿಲ್ಲ ಎಂದು ಗೌಡರು ತಿಳಿಸಿದ್ದಾರೆ.

"

ಹಲಾಲ್ ಮಾಂಸವನ್ನು ತಿನ್ನುವುದು ಹಿಂದೂ ಧರ್ಮಕ್ಕೆ ವಿರುದ್ಧ

ಟ್ವಿಟರ್ ಹ್ಯಾಂಡಲ್ ಸಫಾದಲ್ಲಿ ಹಂಚಿಕೊಂಡಿರುವ ವಿಡಿಯೋ ಪೋಸ್ಟ್‌ನಲ್ಲಿ ಮೋಹನ್ ಗೌಡ ಹಲಾಲ್ ಮಾಂಸವನ್ನು ತಿನ್ನುವುದು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಇದು ಹಿಂದೂಗಳ ನಡವಳಿಕೆಯಲ್ಲ. ಭಾರತದಲ್ಲಿ ಹಲಾಲ್ ಪ್ರಮಾಣ ಪತ್ರದ ಮೂಲಕ ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದ್ದು, ಅದರ ಹಣದಿಂದ ದೇಶವನ್ನು ಇಸ್ಲಾಮಿಕ್ ಕೇಂದ್ರವನ್ನಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದರು. ಈ ಹಣವನ್ನು ದೇಶ ವಿರೋಧಿ ಚಟುವಟಿಕೆ ನಡೆಸಲು ಷಡ್ಯಂತ್ರಕ್ಕೆ ಬಳಸಲಾಗುತ್ತಿದೆ. ಹಿಂದೂ ಪದ್ಧತಿಯ ಪ್ರಕಾರ ಝಾಕಾ ಮಾಂಸವನ್ನು ಬಳಸುತ್ತೇವೆ ಮತ್ತು ಹಲಾಲ್ ಮಾಂಸವನ್ನು ಬಳಸುವುದನ್ನು ನಿಲ್ಲಿಸುತ್ತೇವೆ ಎಂದು ಗೌಡರು ಹೇಳಿದರು. ಈ ವೀಡಿಯೋದಲ್ಲಿ ಮುಸ್ಲಿಂ ವ್ಯಾಪಾರಿಗಳಿಂದ ಮಾಂಸ ಖರೀದಿಸದಂತೆ ಹಾಗೂ ಮಾಂಸದ ಹಣವನ್ನು ದೇಶವಿರೋಧಿ ಚಟುವಟಿಕೆಗಳಿಗೆ ಬಳಸುವುದನ್ನು ಬಹಿಷ್ಕರಿಸುತ್ತೇವೆ ಎಂದು ಹೇಳಿದ್ದಾರೆ.

ಮಾಂಸ ಯಾವುದಾದರೇನು ಮಾಂಸವೇ ತಾನೇ ಎಂದ ಜನರು

ಈ ವಿಚಾರ ಸದ್ದು ಮಾಡಿದ ಬೆನ್ನಲ್ಲೇ ಅನೇಕ ಮಂದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಂಸ ಯಾವುದಾದರೇನು? ಮಾಂಸವೇ ತಾನೇ? ಹಲಾಲ್ ಆದರೇನು? ಎಂದಿದ್ದಾರೆ. ಹೀಗಿರುವಾಗ ಇನ್ನೂ ಅನೇಕರು ಈ ಕ್ರಮವನ್ನು ಉತ್ತಮ ಎಂದು ಬಣ್ಣಿಸಿದ್ದಾರೆ. ಮೋಹನ ಗೌಡರ ಈ ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ವೈರಲ್ ಆಗುತ್ತಿವೆ. ಹಿಂದೂ ಅಂಗಡಿಕಾರರಿಂದ ಸರಕುಗಳನ್ನು ತೆಗೆದುಕೊಳ್ಳದಂತೆ ಮುಸ್ಲಿಂ ಸಮುದಾಯವು ಹೇಗೆ ಫತ್ವಾ ಹೊರಡಿಸಿದೆ ಎಂಬುದನ್ನು ಇವುಗಳಲ್ಲಿ ಹೇಳಲಾಗುತ್ತಿದೆ. ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸಲು ಆದೇಶ ಹೊರಡಿಸಿರುವ ಕೆಲವು ಸುದ್ದಿಗಳನ್ನೂ ಅದು ಉಲ್ಲೇಖಿಸಿದೆ.

ಕೋಳಿ ಕತ್ತರಿಸಿ ಹಲಾಲ್ ಬಾಯ್ಕಾಟ್ ಅಭಿಯಾನಕ್ಕೆ ಚಾಲನೆ ನೀಡಿದ ಕಾಳಿ ಸ್ವಾಮಿ

 ಈಗಾಗಲೇ ಹಲಾಲ್ ಬಾಯ್ಕಾಟ್ ಅಭಿಯಾನ ಆರಂಭವಾಗಿದ್ದು, ಸ್ವತಃ ತಾವೇ ನಾಟಿ ಕೋಳಿ ಕತ್ತರಿಸುವ ಮೂಲಕ ಕಾಳಿ ಸ್ವಾಮಿ ಇದಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಹಿಂದೂ ಧರ್ಮದಲ್ಲಿ ಅನೇಕ ಯತಿಗಳು ಇದ್ದಾರೆ. ಸಾತ್ವಿಕ, ರಾಜಸಿ, ತಾಮಸಿ ಗುಣಗಳಿರುವ ಯತಿಗಳಿದ್ದಾರೆ. ರಾಜಸಿ, ತಾಮಸಿ ಗುಣಗಳ ಯತಿಗಳು ನಿಮ್ಮ ಭಕ್ತರಿಗೆ ಹಲಾಲ್ ಮಾಡಿರುವ ಮಾಂಸ ಖರೀದಿಸಬೇಡಿ ಅಂತ ತಿಳಿಸಿ. ಹಲಾಲ್ ಮಾಡುವುದು ಅಲ್ಲಾನಿಗೆ ಅರ್ಪಿಸಿದಂತೆ, ಇದನ್ನ ತಂದು ನಾವು ಹಬ್ಬ ಹರಿದಿನಗಳನ್ನ ಮಾಡಬೇಕಾದ ಸ್ಥಿತಿ ಇದೆ. ಹಾಲಾಲ್ ಮಾಡುವಾಗ ಮೆಕ್ಕಾ ಕಡೆ ಮೆಕ್ಕಾ ತಿರುಗಿಸಬೇಕಂತೆ, ಕುತ್ತಿಗೆ ಒಂದು ನರ ಕಟ್ ಮಾಡಬೇಕಂತೆ, ಇದೆಲ್ಲಾ ಮಾಡಿದ ಮೇಲೆ ಅದು ಅಲ್ಲಾಗೆ ಅರ್ಪಿಸಿದಂತೆ. ಹಲಾಲ್ ಮಾಡದೇ ಇರುವುದು ಇಸ್ಲಾಂ ಪ್ರಕಾರ ಹರಾಮ್ ಅಂತೆ, ನಾನು ಹೇಳ್ತಿನಿ ಹಲಾಲ್ ಮಾಡಿರುವುದು ಹಿಂದೂಗಳಿಗೆ ಹರಾಮ್. ಈ ಅಭಿಯಾನ ರಾಜ್ಯಾದ್ಯಂತ ಮಾಡುತ್ತೇವೆ. ಹಲಾಲ್ ಬಾಯ್ಕಾಟ್ ಮಾಡುವ ಅಭಿಯಾನ ಮುಂದುವರೆಸುತ್ತೇವೆ ಎಂದಿದ್ದಾರೆ.

ಅಲ್ಲದೇ ಅನೇಕ ಹೋಟೆಲ್ ಗಳಲ್ಲಿ ಹಲಾಲ್ ಅಂತ ಬೋರ್ಡ್ ಹಾಕಿರ್ತಾರೆ. ಇದರ ಅಗತ್ಯ ಏನಿದೆ, ಕಿತ್ತು ಬಿಸಾಕಿ. ಯಾರು ಹಿಂದೂಗಳು ಮಾಂಸ ಅಂಗಡಿಗಳು ತೆರೆಯಲು ಮುಂದಾಗ್ತಾರೋ ಅವರಿಗೆ ಸಹಕಾರ ಕೊಡ್ತೀವಿ‌‌. ಹಿಂದವೀ ಮೀಟ್ ಮಾರ್ಟ್ ಇಂದ ಉಚಿತ ತರಬೇತಿ ಕೊಡುತ್ತೇವೆ. ಎಲ್ಲರೂ ಈ ಅಭಿಯಾನಕ್ಕೆ ಕೈಜೋಡಿಸಿ ಎಂದಿದ್ದಾರೆ.

ಜಾತ್ರೆಗಳಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ನಿರ್ಬಂಧ ಹೇರಿದ್ಧ ಸಂಘಟನೆ

ಇದೇ ಹಿಂದೂ ಜನ ಜಾಗೃತಿ ಸಂಘಟನೆಯು ರಾಜ್ಯದ ಉಡುಪಿಯಲ್ಲಿ ನಡೆಯುವ ದೇವಸ್ಥಾನದ ಕಾರ್ಯಕ್ರಮಕ್ಕೆ ಹಿಂದೂಯೇತರ ಉದ್ಯಮಿಗಳು ಮತ್ತು ಅಂಗಡಿಕಾರರಿಗೆ ಪ್ರವೇಶ ನೀಡದಂತೆ ಒತ್ತಾಯಿಸಿತ್ತು ಎಂಬುವುದು ಉಲ್ಲೇಖನೀಯ. ಈಗ ರಾಜ್ಯದ ಇತರ ಭಾಗಗಳಲ್ಲಿ ಇರುವ ದೇವಸ್ಥಾನಗಳಲ್ಲಿ ವಾರ್ಷಿಕ ಜಾತ್ರೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಹ ಈ ಬೇಡಿಕೆಯನ್ನು ಮಾಡಲಾಗುತ್ತಿವೆ.

ಇದು ಉಡುಪಿ ಜಿಲ್ಲೆಯಲ್ಲಿ ನಡೆಯುವ ವಾರ್ಷಿಕ ಕಾಪು ಮಾರಿಗುಡಿ ಉತ್ಸವದೊಂದಿಗೆ ಪ್ರಾರಂಭವಾಯಿತು, ಅಲ್ಲಿ ಹಿಂದೂಯೇತರ ಅಂಗಡಿಕಾರರು ಮತ್ತು ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂಬ ಬ್ಯಾನರ್‌ಗಳನ್ನು ಹಾಕಲಾಯಿತು. ಈಗ ಪಡ್ಬಿದರಿ ದೇವಸ್ಥಾನದ ಉತ್ಸವದಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ದೇವಾಲಯಗಳಲ್ಲಿ ಇದೇ ರೀತಿಯ ಬ್ಯಾನರ್‌ಗಳನ್ನು ಹಾಕಲಾಗಿದೆ.

ಹಿಜಾಬ್ ವಿವಾದದ ನಂತರ ಉದ್ವಿಗ್ನ ಪರಿಸ್ಥಿತಿ

ಡಿಸೆಂಬರ್ 2021 ರಿಂದ ಹಿಜಾಬ್ ನಿಷೇಧದ ವಿಷಯದ ಕುರಿತು ಕರ್ನಾಟಕದಲ್ಲಿ ಉದ್ವಿಗ್ನತೆ ಉಂಟಾಗುತ್ತಿದೆ. ಹಿಜಾಬ್ ಅನ್ನು ಇಸ್ಲಾಂ ಧರ್ಮದ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಪರಿಗಣಿಸಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ಅನುಮತಿಸಬಾರದು ಎಂದು ಹೈಕೋರ್ಟ್ ಆದೇಶಿಸಿತ್ತು. ಇದಾದ ಬಳಿಕ ಮುಸ್ಲಿಂ ವ್ಯಾಪಾರಿಗಳು ಈ ನಿರ್ಧಾರವನ್ನು ವಿರೋಧಿಸಿ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರು. ಮುಸ್ಲಿಂ ಸಮುದಾಯದವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ, ಹಿಂದೂಗಳು ದೇವಸ್ಥಾನ ಸಮಿತಿಗಳ ಜಾತ್ರೆಗಳಲ್ಲಿ ಮುಸ್ಲಿಮರು ಅಂಗಡಿಗಳನ್ನು ಸ್ಥಾಪಿಸುವುದನ್ನು ನಿಷೇಧಿಸಿದ್ದಾರೆ. ಈಗ ಹಲಾಲ್ ಮಾಂಸದ ಬಹಿಷ್ಕಾರವೂ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ.

Follow Us:
Download App:
  • android
  • ios