ಇಂದು (ಮಂಗಳವಾರ) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತು ವಿಶೇಷ ಸಚಿವ ಸಂಪುಟ ಸಭೆ ನಡೆಸಿದರು. ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಇಂತಿವೆ.

ಬೆಂಗಳೂರು, (ಮೇ.04) : ರಾಜ್ಯದಲ್ಲಿ ಕೊರೋನಾ ಅಬ್ಬರ ಹೆಚ್ಚಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆ, ಔಷಧ ಹಾಗೂ ಲಸಿಕೆ ಕೊರತೆ ಬಗ್ಗೆ ಚರ್ಚಿಸಲು ಇಂದು (ಮಂಗಳವಾರ) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತು ವಿಶೇಷ ಸಚಿವ ಸಂಪುಟ ಸಭೆ ನಡೆಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಚಿವ ಸುಧಾಕರ್​ಗೆ ಮುಖಭಂಗ: ಎಲ್ಲ ಜವಾಬ್ದಾರಿ ಕಿತ್ತುಕೊಂಡ ಸಿಎಂ

ಸಭೆಯಲ್ಲಿ ಚಾಮರಾನಗರ ದುರಂತ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಅಲ್ಲದೇ ಸಚಿವರುಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು. ಇನ್ನು ಸಂಪುಟ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಅವು ಈ ಕೆಳಗಿನಂತಿವೆ.

ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು
1. ಜಿಲ್ಲಾವ್ಯಾಪ್ತಿಯಲ್ಲಿ ಕೊರತೆಯಿರುವ ಆಕ್ಸಿಜನ್, ಬೆಡ್, ರೆಮಿಡಿಸಿವಿಯರ್ ಹಾಗೂ ಇನ್ನಿತರೆ ಅತ್ಯವಶ್ಯಕಗಳ ಸಂಪೂರ್ಣ ಉಸ್ತೂವಾರಿಯನ್ನು ಆಯಾ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಗಿದೆ.

2. ಜಗದೀಶ್ ಶೆಟ್ಟರ್ - ಆಕ್ಸಿಜನ್ ಸೆಂಟರ್ ಗಳ ಮೇಲುಸ್ತುವಾರಿ ಹಾಗೂ ಕೇಂದ್ರ ಸರ್ಕಾರ ಸಮನ್ವಯದೊಂದಿಗೆ ರಾಜ್ಯದಲ್ಲಿ ಅಕ್ಸಿಜನ್ ಕೊರತೆಯಾಗದಂತೆ ನಿರ್ವಹಿಸುವುದು.
3. ಅಶ್ವಥ್ ನಾರಾಯಣ - ರೆಮಿಡಿಸಿವಿಯರ್ ಔಷದಿಗಳ ಕೊರತೆ, ಮಾನವ ಸಂಪನ್ಮೂಲ ಮತ್ತು ರಾಜ್ಯದಲ್ಲಿನ ಎಲ್ಲಾ ಮೆಡಿಕಲ್ ಕಲೇಜುಗಳೊಂದಿಗೆ ಸಮನ್ವಯತೆಯನ್ನು ಸಾದಿಸಿ ಔಷಧಿಗಳ ಕೊರತೆಯಾಗದಂತೆ ನಿರ್ವಹಿಸುವುದು.

4. ಬಸವರಾಜ ಬೊಮ್ಮಾಯಿ ಹಾಗೂ ಆರ್. ಆಶೋಕ - ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಬೆಡ್ ಗಳ ಕೊರತೆಯಾಗದಂತೆ ನಿರ್ವಹಿಸುವುದು.

5. ಅರವಿಂದ ಲಿಂಬಾವಳಿ - ಬಿಬಿಎಂಪಿ ವಾರ್ ರೂಂ ನಿರ್ವಹಣೆ ಉಸ್ತುವಾರಿ

6. ನೆರೆ ರಾಜ್ಯವಾದ ಮಹರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದರಿಂದ, ಕರ್ನಾಟಕದ ಜಿಂದಾಲ್ ಕಂಪನಿಯಿಂದ ಪೂರೈಸಲಾಗುತ್ತಿರುವ ಆಕ್ಸಿಜನ್ ಅನ್ನು ರಾಜ್ಯದಲ್ಲಿ ಬಳಕೆಮಾಡಿಕೊಳ್ಳಲು ಕೇಂದ್ರ ಸರ್ಕಾರದೊಂದಿಗೆ ಈಗಾಗಲೇ ಚರ್ಚಿಸಲಾಗಿದೆ.

7. ದಿನಾಂಕ: 03/04/2021ರಂದು ಚಾಮರಾಜನಗರದಲ್ಲಿ ನಡೆದ ಘಟನೆಗೆ ಕುಲಂಕುಷವಾಗಿ ಪರಿಶೀಲಿಸಿ 3 ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಶ್ರೀ. ಶಿವಯೋಗಿ ಕಳಸದ್ ಇವರನ್ನು ನಿಯೋಜಿಸಿದೆ.

8. ಮಾಧ್ಯಮ ಪ್ರತಿನಿಧಿಗಳಿಗೆ Frontline Workers ಎಂದು ಪರಿಗಣಿಸಿ ಕೋವಿಡ್ - 19 ಉಚಿತ ಲಸಿಕೆಯನ್ನು ನೀಡುವುದು.
9. ರೆಮಿಡಿಸಿವಿಯರ್ ಔಷದಿಯನ್ನು ರಾಜ್ಯಕ್ಕೆ ಹೆಚ್ಚಿನ ಪೂರೈಕೆಗಾಗಿ ಕೇಂದ್ರ ಸರ್ಕಾರದೊಂದಿಗ ಸಮನ್ವಯವನ್ನು ಸಾದಿಸಿದೆ.