ಹಲೋ ಮಿನಿಸ್ಟರ್: ತೋಟಗಾರಿಕಾ ಸಚಿವ ಮುನಿರತ್ನ, ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಭರವಸೆ
ಇಂದಿನ ಹಲೋ ಮಿನಿಸ್ಟರ್ ಕಾರ್ಯಕ್ರಮಕ್ಕೆ ತೋಟಗಾರಿಕಾ ಸಚಿವ ಮುನಿರತ್ನ ಅವರು ಅತಿಥಿಯಾಗಿ ಆಗಮಿಸಿದ್ದರು.
ಬೆಂಗಳೂರು (ಅ. 16): ಇಂದಿನ ಹಲೋ ಮಿನಿಸ್ಟರ್ ಕಾರ್ಯಕ್ರಮಕ್ಕೆ ತೋಟಗಾರಿಕಾ ಸಚಿವ ಮುನಿರತ್ನ ಅವರು ಅತಿಥಿಯಾಗಿ ಆಗಮಿಸಿದ್ದರು. ಮುನಿರತ್ನ ಅವರು ನಿರ್ಮಾಪಕರಾಗಿ, ಶಾಸಕರಾಗಿ ಕೆಲಸ ಮಾಡಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಉತ್ತಮ ಕೆಲಸಗಳನ್ನು ಮಾಡಿ, ಜನ ಮೆಚ್ಚಿದ ನಾಯಕ ಎನಿಸಿಕೊಂಡವರು. ತಮ್ಮ ರಾಜಕೀಯ ಜರ್ನಿ, ಸಾಧನೆ, ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡಿದರು. ಇವರ ಬಗ್ಗೆ ಕುಟುಂಬದವರು, ಸ್ನೇಹಿತರು ಮಾತನಾಡಿದರು.
ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ರೈತರು ಬೇರೆ ಬೇರೆ ರೀತಿ ಸಂಕಷ್ಟದಲ್ಲಿದ್ಧಾರೆ. ಪರಿಹಾರಕ್ಕಾಗಿ ಅಲೆದಾಡುತ್ತಿದ್ದಾರೆ. ಇವರ ಸಮಸ್ಯೆಗಳನ್ನು ಸಚಿವ ಮುನಿರತ್ನ ಅವರ ಗಮನಕ್ಕೆ ತರಲಾಯಿತು. ಶೀಘ್ರದಲ್ಲೇ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
"