Asianet Suvarna News Asianet Suvarna News

ಟಿಪ್ಪು ಜಯಂತಿ ವಿವಾದ : ಸರ್ಕಾರದಿಂದ ಹೊಸ ಪ್ಲಾನ್‌?

ಟಿಪ್ಪು ಸುಲ್ತಾನ್‌ ಜಯಂತಿ ವಿವಾದದ ಕಳಂಕದಿಂದ ಹೊರಬರಲು ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ. ಪ್ರತಿದಿನವೂ ಒಂದಲ್ಲಾ ಒಂದು ವ್ಯಕ್ತಿಯ ಜಯಂತಿ ಆಚರಿಸಿ ಎಲ್ಲರ ಮೆಚ್ಚುಗೆ ಪಡೆಯಲು ಸರ್ಕಾರ ಮುಂದಾಗಿದೆ. 
 

Fake News About Tipu Jayanti
Author
Bengaluru, First Published Nov 11, 2018, 11:04 AM IST

ಬೆಂಗಳೂರು :  ಟಿಪ್ಪು ಸುಲ್ತಾನ್‌ ಜಯಂತಿ ವಿವಾದದ ಕಳಂಕದಿಂದ ಹೊರಬರಲು ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ. ಪ್ರತಿದಿನವೂ ಒಂದಲ್ಲಾ ಒಂದು ವ್ಯಕ್ತಿಯ ಜಯಂತಿ ಆಚರಿಸಿ ಎಲ್ಲರ ಮೆಚ್ಚುಗೆ ಪಡೆಯಲು ಸರ್ಕಾರ ಮುಂದಾಗಿದೆ. 

ಜನ್ಮದಿನದ ಕ್ಯಾಲೆಂಡರ್‌ನಲ್ಲಿ ಆ ದಿನ ಯಾರ ಹೆಸರಿದೆಯೋ ಅವರ ಹೆಸರಿನಲ್ಲಿ ಜಯಂತಿಯನ್ನು ಆಚರಿಸಲಾಗುತ್ತದೆ. ಜಯಂತಿ ಆಚರಿಸುವ ವ್ಯಕ್ತಿಗಳ ಸಾಧನೆಯ ಕುರಿತು ವಿಧಾನಸೌಧದಲ್ಲಿ 5 ನಿಮಿಷ ಭಾಷಣ ಮಾಡಲು ಪ್ರತಿನಿಧಿಯೊಬ್ಬರನ್ನು ಸರ್ಕಾರ ನೇಮಿಸಲಿದೆ. 

ಇದರಿಂದಾಗಿ ಯಾವುದೇ ಜಯಂತಿಯ ವಿವಾದ ಉಂಟಾಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಜೊತೆಗೆ ಜಯಂತಿ ಆಚರಣೆಗೆ ಅರ್ಜಿ ಆಹ್ವಾನಿಸಲೂ ಸರ್ಕಾರ ಚಿಂತನೆ ನಡೆಸಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.

Follow Us:
Download App:
  • android
  • ios