ಸಂಸದರು ಸೀಟು ತ್ಯಾಗ ಮಾಡಬೇಕು: ಕಾಂಗ್ರೆಸ್ಸಿಗರಿಗೆ ಖಂಡ್ರೆ ಮನವಿ!
ಸಂಸದರು ಸೀಟು ತ್ಯಾಗ ಮಾಡಬೇಕು| ಕಾಂಗ್ರೆಸ್ಸಿಗರಿಗೆ ಖಂಡ್ರೆ ಮನವಿ| ಜೆಡಿಎಸ್ ಜತೆಗೂಡಿ ಚುನಾವಣೆ ಎದುರಿಸಬೇಕು ದೇಶಕ್ಕಾಗಿ ಸಣ್ಣ ತ್ಯಾಗಕ್ಕೆ ಸಿದ್ಧರಿರಬೇಕಾಗುತ್ತದೆ
ಬೆಂಗಳೂರು[ಜ.12]: ರಾಜ್ಯದ ಹಾಲಿ ಕಾಂಗ್ರೆಸ್ ಸಂಸದರು ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಬೇಡ ಎಂದು ಕೇಳು ವುದು ಸರಿಯಾಗಿದೆ. ಕ್ಷೇತ್ರ ಉಳಿಸಿಕೊಳ್ಳಲು ಇಂತಹ ಬೇಡಿಕೆ ಸಹಜ. ಆದರೆ, ದೇಶದ ಹಿತದೃಷ್ಟಿಯಿಂದ ಸಣ್ಣಪುಟ್ಟ ತ್ಯಾಗಕ್ಕೂ ಸಂಸದರು ಸಿದ್ಧರಿ ರಬೇಕಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಮೋದಿ ಅಲೆ ವಿರುದ್ಧ ಗೆದ್ದು ಬಂದ ಸಂಸ ದರು ತಮ್ಮ ಕ್ಷೇತ್ರ ಉಳಿಸಿಕೊಳ್ಳಲು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಹಿಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕ್ಷೇತ್ರಗಳಲ್ಲಿ ಹೊಂದಾಣಿಕೆ ಬೇಡ ಎಂಬ ಬೇಡಿಕೆ ಇಟ್ಟಿದ್ದರೆ ತಪ್ಪೇನಲ್ಲ. ಆದರೆ, ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಗೆಲುವೊಂದೇ ಮಾನದಂಡ. ಹಾಗಾಗಿ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕಿದೆ. ಆಯಾ ಜಿಲ್ಲೆಗಳಲ್ಲಿ ಪಕ್ಷ ಗಳಿಗಿರುವ ವರ್ಚಸ್ಸಿಗೆ ಅನುಸಾರ ಸೀಟು ಹಂಚಿಕೆ ನಡೆ ಯಲಿದೆ. ಇಂತಹ ಸಂದರ್ಭದಲ್ಲಿ ಸಂಸದರು ಸಣ್ಣಪುಟ್ಟ ತ್ಯಾಗವನ್ನೂ ಮಾಡಬೇಕಾಗುತ್ತದೆ ಎಂದರು
ಬಿಜೆಪಿಯವರು ತಲೆಕೆಳಗು ಮಾಡಿ ತಿಪ್ಪರಲಾಗ ಹಾಕಿದರೂ ಸರ್ಕಾರ ರಚಿಸಲು ಸಾಧ್ಯವಿಲ್ಲ. ಕಾಂಗ್ರೆಸ್ನ ಯಾವ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ನಾನು ಮನಸ್ಸು ಮಾಡಿದರೆ ಬಿಜೆಪಿ ಶಾಸಕರನ್ನೇ ಕಾಂಗ್ರೆಸ್ಗೆ ಕರೆತರಬಲ್ಲೆ. ಕೆಲ ಶಾಸಕರು ವೈಯಕ್ತಿಕವಾಗಿ ನನ್ನ ಸಂಪರ್ಕದಲ್ಲಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಬಿಜೆಪಿಯವರ ಸಂಪರ್ಕದಲ್ಲಿದ್ದಾರೆ ಎಂಬುದು ಬರೀ ಊಹಾಪೋಹ. ಅವರ ಅಸಮಾಧಾನ ಕಾಲ ಕ್ರಮೇಣ ಸರಿಹೋಗಲಿದೆ. ಸಚಿವ ಪುಟ್ಟರಂಗಶೆಟ್ಟಿ ಪ್ರಕರಣದಲ್ಲಿ ಆರೋಪ ಬಂದ ತಕ್ಷಣ ರಾಜೀನಾಮೆ ನೀಡಿ ಎನ್ನುವುದು ಸರಿಯಲ್ಲ ಎಂದು ಹೇಳಿದರು.