- ಸಿಪಿಐ ಆನಂದ ಮೇತ್ರೆಯ ವಿಚಾ​ರಣೆ ವೇಳೆ ಪರೀಕ್ಷಾ ಅಕ್ರ​ಮಕ್ಕೆ ಸಂಬಂಧಿಸಿ ಅನೇಕ ವಿಚಾ​ರ ಬಹಿರಂಗ- ಬಂಧಿತ ಆನಂದ ಮೇತ್ರೆ ವಿಚಾರಣೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ- 4 ಅಭ್ಯರ್ಥಿಗಳಿಂದ ಸುಮಾರು 2 ಕೋಟಿ ಪಡೆದಿದ್ದ ಪೊಲೀಸ್‌ ಅಧಿಕಾರಿ

ಕಲಬುರಗಿ(ಮೇ.09): ಪಿಎ​ಸ್‌ಐ ಪರೀ​ಕ್ಷೆ ಅಕ್ರ​ಮ​ದಲ್ಲಿ ಬಂಧಿತ ಪಿಎ​ಸ್‌ಐ ಆನಂದ ಮೇತ್ರೆ ಕಿಂಗ್‌​ಪಿ​ನ್‌​ಗಳ ಜತೆ ಸೇರಿ ಡೀಲ್‌ ಕುದು​ರಿ​ಸು​ತ್ತಿ​ದ್ದು​ದಷ್ಟೇ ಅಲ್ಲ, ಪ್ರಶ್ನೆ ಪತ್ರಿಕೆಯನ್ನು ಲೀಕ್‌ ಮಾಡು​ವಲ್ಲೂ ನೆರವು ನೀಡು​ತ್ತಿ​ದ್ದರು ಎಂಬ ವಿಚಾರ ಸಿಐಡಿ ವಿಚಾ​ರಣೆ ವೇಳೆ ಬೆಳ​ಕಿಗೆ ಬಂದಿ​ದೆ.

ನಾಲ್ಕು ಅಭ್ಯ​ರ್ಥಿ​ಗ​ಳಿಂದ ಸುಮಾರು .2 ಕೋಟಿ ಡೀಲ್‌ ಮಾಡಿದ ಆರೋ​ಪದ ಮೇರೆಗೆ ಬಂಧಿತ ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆಯ ವಿಚಾ​ರಣೆ ವೇಳೆ ಪರೀಕ್ಷಾ ಅಕ್ರ​ಮಕ್ಕೆ ಸಂಬಂಧಿಸಿ ಅನೇಕ ವಿಚಾ​ರ​ಗಳು ಹೊರ​ಬ​ರು​ತ್ತಿವೆ. ಜ್ಞಾನ​ಜ್ಯೋತಿ ಶಾಲೆ​ಯಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗ ಮಾಡಿ ಅದನ್ನು ಕಿಂಗ್‌ಪಿನ್‌ ಸೂಚಿಸುವ ಪರಿಣಿತ ತಂಡಕ್ಕೆ ಇದೇ ಮೇತ್ರೆ ತಲು​ಪಿ​ಸು​ತ್ತಿದ್ದ ಎನ್ನ​ಲಾ​ಗಿದೆ. ಪರಿ​ಣತ ತಂಡ ಸಿದ್ಧ​ಪ​ಡಿಸಿ ಕಳು​ಹಿ​ಸಿ​ಕೊ​ಡುವ ಸರಿ ಉತ್ತ​ರ​ವ​ನ್ನು ಮತ್ತೆ ಪರೀಕ್ಷಾ ಕೇಂದ್ರಕ್ಕೆ ತಲುಪಿಸೋ ಕೆಲಸವನ್ನೂ ಈತನ ಉಸ್ತು​ವಾ​ರಿ​ಯ​ಲ್ಲೇ ನಡೆ​ಯು​ತ್ತಿತ್ತು ಎಂದು ಹೇಳ​ಲಾ​ಗಿದೆ.

ಸಿಪಿಐ ಮೇತ್ರೆ ಪರೀಕ್ಷಾ ಕೇಂದ್ರದೊಳಗೆ ನೇರ​ವಾಗಿ ಹೋಗಿ ಬರುತ್ತಿದ್ದರು. ಮೇತ್ರೆ ಸ್ವತಃ ಪರೀಕ್ಷಾ ಕೇಂದ್ರ​ದಲ್ಲಿ ಕರ್ತ​ವ್ಯ​ಕ್ಕೆ ನಿಯೋ​ಜ​ನೆ​ಗೊಂಡಿ​ದ್ದ​ರು. ಪೊಲೀಸ್‌ ಅಧಿ​ಕಾ​ರಿ​ಯಾ​ಗಿದ್ದ ಕಾರಣ ಇವರು ಆಗಾಗ ಪರೀಕ್ಷಾ ಕೇಂದ್ರ​ದೊ​ಳಗೆ ಹೋಗಿ ಬರು​ತ್ತಿ​ದ್ದರೂ ಯಾರಿಗೂ ಅನು​ಮಾನ ಬರು​ತ್ತಿ​ರ​ಲಿಲ್ಲ. ಈ ವೇಳೆ ಅವರು ಕಿಂಗ್‌​ಪಿ​ನ್‌​ಗಳ ತಂಡ ಸಿದ್ಧ​ಪ​ಡಿಸಿ ಕಳು​ಹಿ​ಸಿ​ಕೊ​ಡು​ತ್ತಿದ್ದ ಸರಿ ಉತ್ತ​ರ​ಗ​ಳನ್ನು ಪರೀಕ್ಷಾ ಕೇಂದ್ರದ ಮೇಲ್ವಿ​ಚಾ​ರ​ಕ​ರಿಗೆ ತಲು​ಪಿ​ಸು​ತ್ತಿ​ದ್ದರು. ಅಲ್ಲಿ ಡೀಲ್‌ ಮಾಡಿ​ಕೊಂಡಿದ್ದ ಅಭ್ಯ​ರ್ಥಿ​ಗಳ ಓಎಂಆ​ರ್‌​ಶೀಟ್‌ ತುಂಬುವ ಕೆಲ​ಸ ಮಾಡಲಾಗು​ತ್ತಿ​ತ್ತು.

ಇನ್ನು ಪ್ರಕ​ರ​ಣ​ದ​ಲ್ಲಿ ಬಂಧಿತ ಕೆಎಸ್‌ಆರ್‌ಪಿ ಬಟಾಲಿಯನ್‌ ಸಹಾಯಕ ಕಮಾಂಡೆಂಟ್‌ (ಡಿವೈಎಸ್ಪಿ ರಾರ‍ಯಂಕ್‌) ವೈಜನಾಥ ರೇವೂರ್‌ ಅಕ್ರ​ಮದ ಕಿಂಗ್‌​ಪಿನ್‌ ಆರ್‌.​ಡಿ.​ಪಾ​ಟೀಲನ ಆಪ್ತ ಎಂಬುದು ವಿಚಾ​ರ​ಣೆ​ಯಲ್ಲಿ ಬಹಿ​ರಂಗ​ವಾ​ಗಿ​ದೆ. ಪರೀಕ್ಷಾ ಕೇಂದ್ರಗಳಲ್ಲಿ ನಿಯೋಜಿತರಾಗಿರುವ ಪೊಲೀ​ಸ​ರಲ್ಲಿ ಅಕ್ರ​ಮಕ್ಕೆ ಸಾಥ್‌ ನೀಡು​ವಂಥ​ವ​ರನ್ನು ಹುಡುಕಿ ಆರ್‌.​ಡಿ.​ಪಾ​ಟೀ​ಲ​ನಿಗೆ ಪರಿ​ಚ​ಯಿ​ಸುವ ಕೆಲ​ಸ​ವನ್ನು ವೈಜ​ನಾಥ ರೇವೂರ್‌ ಮಾಡು​ತ್ತಿ​ದ್ದರು ಎಂದು ತನಿ​ಖೆ​ಯಿಂದ ಬಯ​ಲಾ​ಗಿ​ದೆ.

ಆರ್‌.​ಡಿ.​ಪಾ​ಟೀ​ಲಗೆ ತಾನೊಬ್ಬನೇ ದುಡ್ಡು ಮಾಡುವ ಹಪಾ​ಹ​ಪಿ

ಕಲಬುರಗಿ: ಬ್ಲೂಟೂತ್‌ ತಜ್ಞ ಎಂಜಿ​ನಿ​ಯರ್‌ ಮಂಜು​ನಾಥ್‌ ಜತೆ ಸೇರಿ​ಕೊಂಡು ಪಿಎ​ಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆ​ಸಿ ಜೈಲು ಸೇರಿ​ರುವ ಕಿಂಗ್‌​ಪಿನ್‌ ಆರ್‌.​ಡಿ.​ಪಾ​ಟೀಲನಿಗೆ ತಾನೊ​ಬ್ಬನೇ ದುಡ್ಡು ಮಾಡ​ಬೇ​ಕೆಂಬ ಹಪಾ​ಹಪಿ. ಈ ದಂಧೆ​ಯಲ್ಲಿ ತಾನೊ​ಬ್ಬನೇ ಮೆರೆ​ಯ​ಬೇಕು, ದುಡ್ಡು​ಮಾ​ಡ​ಬೇಕು ಎಂಬ ಕಾರ​ಣಕ್ಕೆ ಎಂಜಿ​ನಿ​ಯರ್‌ ಮಂಜು​ನಾಥ್‌ ಸೇರಿ ತನ​ಗಾ​ಗ​ದ​ವರ ವಿರುದ್ಧ ಅವ​ಕಾಶ ಬಿದ್ದಾ​ಗ​ಲೆಲ್ಲ ಕತ್ತಿ ಮಸೆ​ಯು​ತ್ತಿದ್ದ. ಇದ​ಕ್ಕಾಗಿ ಆತ ತನ್ನ ಆತ್ಮೀ​ಯ​ರಾದ, ಸದ್ಯ ಸಿಐಡಿ ವಶ​ದ​ಲ್ಲಿ​ರುವ ಡಿವೈ​ಎಸ್ಪಿ ಮಲ್ಲಿ​ಕಾ​ರ್ಜುನ ಸಾಲಿ, ಕೆಎ​ಸ್‌​ಆ​ರ್‌ಪಿ 6ನೇ ಬಟಾ​ಲಿ​ಯ​ನ್‌ನ ಸಹಾ​ಯಕ ಕಮಾಂಡೆಂಟ್‌ ವೈಜ​ನಾಥ ರೇವೂರ್‌, ಸಿಪಿಐ ಆನಂದ ಮೇತ್ರೆ ನೆರವು ಪಡೆ​ಯು​ತ್ತಿದ್ದ ಎಂದು ಹೇಳ​ಲಾ​ಗಿ​ದೆ.