Asianet Suvarna News Asianet Suvarna News

ರಾಜ್ಯಪಾಲರ ಪ್ರಾಸಿಕ್ಯೂಷನ್ ವಿರೋಧಿಸಿ ಉಪವಾಸ;  ಸಿದ್ದರಾಮಯ್ಯ ಅಭಿಮಾನಿ ಅಸ್ವಸ್ಥ!

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದ ರಾಜ್ಯಪಾಲರ ನಿರ್ಧಾರವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 'ಸಿದ್ದರಾಮಯ್ಯ ಬ್ರಿಗೇಡ್ ' ಸದಸ್ಯನೋರ್ವ ಅಸ್ವಸ್ಥಗೊಂಡ ಘಟನೆ ಯಾದಗಿರಿ ಪಟ್ಟಣದ ಸುಭಾಷ್ ವೃತ್ತದಲ್ಲಿ ನಡೆದಿದೆ.

CM Siddaramaiah fan from yadgir fell ill during protest against karnataka governor approved prosecution rav
Author
First Published Aug 18, 2024, 8:48 PM IST | Last Updated Aug 18, 2024, 8:48 PM IST

ಯಾದಗಿರಿ: (ಆ.18): ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದ ರಾಜ್ಯಪಾಲರ ನಿರ್ಧಾರವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 'ಸಿದ್ದರಾಮಯ್ಯ ಬ್ರಿಗೇಡ್ ' ಸದಸ್ಯನೋರ್ವ ಅಸ್ವಸ್ಥಗೊಂಡ ಘಟನೆ ಯಾದಗಿರಿ ಪಟ್ಟಣದ ಸುಭಾಷ್ ವೃತ್ತದಲ್ಲಿ ನಡೆದಿದೆ.

ರಾಜಕುಮಾರ್ ಗಣೇರ್ ಅಸ್ವಸ್ಥರಾದ ಸಿದ್ದರಾಮಯ್ಯ ಅಭಿಮಾನಿ. ಕಲ್ಯಾಣ ಕರ್ನಾಟಕ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ರಾಜ್ಯಾಧ್ಯಕ್ಷರಾಗಿರುವ ರಾಜಕುಮಾರ ಗಣೇರ್. ಇಂದು ಬೆಳಗ್ಗೆ 5 ಗಂಟೆಯಿಂದ ಸುಭಾಷ್ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ರಾಜಕುಮಾರ್ ಅವರ ಪ್ರತಿಭಟನೆಗೆ ಹಲವು ಸಂಘಟನೆಗಳ ಬೆಂಬಲಿಸಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪಟ್ಟು ಹಿಡಿದಿದ್ದ ಪ್ರತಿಭಟನಾಕಾರರು. ಬೆಳಗ್ಗೆಯಿಂದ ಅನ್ನ ಆಹಾರವಿಲ್ಲದೆ ನಿತ್ರಾಣಗೊಂಡು ಅಸ್ವಸ್ಥರಾಗಿರುವ ಅಭಿಮಾನಿ. 

ರಾಜೀನಾಮೆ ಕೊಡೋದಕ್ಕೆ ಸಿದ್ದರಾಮಯ್ಯ ಅವರನ್ನೇನು ಗ್ರಾಪಂ ಅಧ್ಯಕ್ಷರು ಅಂದುಕೊಂಡಿದ್ದೀರಾ? ಬಿಜೆಪಿ ವಿರುದ್ಧ ಹೆಚ್‌ ಆಂಜನೇಯ ಗರಂ

ಘಟನೆ ಬಳಿಕ ಸ್ಥಳಕ್ಕೆ ಆಂಬುಲೆನ್ಸ್ ಆಗಮಿಸಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಯಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Latest Videos
Follow Us:
Download App:
  • android
  • ios