Asianet Suvarna News Asianet Suvarna News

ಮುಂದಿನ ವಾರ ಸಿಎಂ ಬೊಮ್ಮಾಯಿ ದಿಲ್ಲಿಗೆ : ವರಿಷ್ಠರ ಭೇಟಿ

  • ಕೋವಿಡ್‌, ಪ್ರವಾಹ, ನೀರಾವರಿ ಯೋಜನೆ ಸೇರಿದಂತೆ ರಾಜ್ಯದ ವಿಚಾರಗಳ ಬಗ್ಗೆ ಚರ್ಚಿಸುವ ಸಂಬಂಧ
  • ಮುಂದಿನ ವಾರ ದೆಹಲಿಗೆ ತೆರಳುತ್ತೇನೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
CM basavaraja bommai To visit Delhi on next week snr
Author
Bengaluru, First Published Aug 21, 2021, 7:14 AM IST

ಬೆಂಗಳೂರು (ಆ.21): ಕೋವಿಡ್‌, ಪ್ರವಾಹ, ನೀರಾವರಿ ಯೋಜನೆ ಸೇರಿದಂತೆ ರಾಜ್ಯದ ವಿಚಾರಗಳ ಬಗ್ಗೆ ಚರ್ಚಿಸುವ ಸಂಬಂಧ ಕೇಂದ್ರದ ಸಚಿವರು ಸಮಯ ನೀಡಿದರೆ ಮುಂದಿನ ವಾರ ದೆಹಲಿಗೆ ತೆರಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭೇಟಿ ಮಾಡಿದ ಸಿಎಂ ಬೊಮ್ಮಾಯಿ

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ವಿಚಾರಗಳ ಕುರಿತು ಚರ್ಚೆ ನಡೆಸುವ ಸಂಬಂಧ ಕೇಂದ್ರದ ಸಮಯ ಕೇಳಲಾಗಿದೆ. 

ಸಮಯ ನೀಡಿದರೆ ಮುಂದಿನ ವಾರ ದೆಹಲಿಗೆ ತೆರಳಿ ರಾಜ್ಯದ ವಿಚಾರಗಳ ಕುರಿತು ಸಮಾಲೋಚನೆ ನಡೆಸುತ್ತೇನೆ. ರಾಜ್ಯದ ಯೋಜನೆಗಳು, ಅನುಷ್ಠಾನಗೊಳ್ಳಬೇಕಾದ ಕಾರ್ಯಕ್ರಮಗಳು, ನೀರಾವರಿ ಯೋಜನೆಗಳು, ಪ್ರವಾಹ, ಕೋವಿಡ್‌ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಈವರೆಗೆ ಕೇಂದ್ರದ ಸಚಿವರು ಸಮಯ ನೀಡಿಲ್ಲ. ಸಮಯ ನೀಡಿದ ಬಳಿಕ ದೆಹಲಿಗೆ ಹೋಗುತ್ತೇನೆ ಎಂದರು.

Follow Us:
Download App:
  • android
  • ios